ನಟ ಸುದೀಪ್ ಹೃದಯ ವೈಶಾಲ್ಯಕ್ಕೆ ಈಗಾಗಲೇ ಹಲವು ಸಾಕ್ಷಿಗಳಿವೆ. ಹಲವಾರು ಮಂದಿಗೆ ಸುದೀಪ್ ಸ್ವತಃ ತಾವೇ ಹಾಗೂ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ.ಅಪಘಾತವೊಂದಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿದ್ದ ಬಾಲಕಿಗೆ ವಿಡಿಯೋ ಕರೆ ಮಾಡಿ ಸುದೀಪ್ ಮಾತನಾಡಿದ್ದರು.ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದರು. ಆದರೆ ಆ ಬಾಲಕಿ ನಿಧನರಾಗಿದ್ದಾರೆ.ಚೆನ್ನಾಗಿ ಆಟವಾಡಿಕೊಂಡು ಇದ್ದ ಪ್ರತಿಭಾವಂತ ಬಾಲಕಿ ಮೇಲೆ ಮರದ ಕೊಂಬೆ ಬಿದ್ದು ಬಾಲಕಿ ಕಳೆದ ಎರಡು ವರ್ಷದಿಂದಲೂ ನಡೆಯಲಾರದ ಸ್ಥಿತಿ ತಲುಪಿದ್ದು, ಹಾಸಿಗೆ ಹಿಡಿದ್ದಳು. ಆ ಪುಟ್ಟ ಬಾಲಕಿ ಹಾಗೂ ಪೋಷಕರು ಸುದೀಪ್ ಅಭಿಮಾನಿಗಳಾಗಿದ್ದರು, ಈ ವಿಷಯ ಸುದೀಪ್ಗೆ ತಿಳಿದು ಬಾಲಕಿಯ ಪೋಷಕರಿಗೆ ವಿಡಿಯೋ ಕರೆ ಮಾಡಿ ಸುದೀಪ್ ಮಾತನಾಡಿದ್ದರು.ಅಸ್ವಸ್ಥಳಾಗಿದ್ದ ಬಾಲಕಿಯನ್ನು ಕಂಡು ಭಾವುಕರಾದ ಸುದೀಪ್ ಆಕೆಯ ಪೋಷಕರೊಂದಿಗೆ ಮಾತನಾಡಿದ್ದರು. ಹತ್ತು ವರ್ಷದ ಬಾಲಕಿ, ತರಗತಿಗಳಲ್ಲಿಯೂ ಚೆನ್ನಾಗಿ ಕಲಿಯುತ್ತಿದ್ದಳು. ಅದ್ಭುತವಾಗಿ ಹಾಡು, ಡ್ಯಾನ್ಸ್ ಮಾಡುತ್ತಿದ್ದಳು. ಆದರೆ ಅಚಾನಕ್ಕಾಗಿ ಹೀಗೆ ಆಗಿಬಿಟ್ಟಿತು ನಮಗೆ ದಿಕ್ಕೆ ತೋಚದಂತಾಗಿದೆ ಎಂದು ಕಣ್ಣೀರು ಹಾಕಿದ್ದರು ಆಕೆಯ ಪೋಷಕರು.ಅಂದು ಸುದೀಪ್ ಜೊತೆ ಮಾತನಾಡಿದ್ದ ಬಾಲಕಿಯ ತಾಯಿ, ಮಗಳಿಗೆ ನೀವೆಂದರೆ ಬಹಳ ಪ್ರೀತಿಯಿತ್ತು, ಸುದೀಪ್ ಮಾಮ ಸುದೀಪ್ ಮಾಮ ಎಂದು ಕರೆಯುತ್ತಿದ್ದಳು. ಬಿಗ್ಬಾಸ್ ಕಾರ್ಯಕ್ರಮದಲ್ಲಿ ನೀವು ಬರುವ ದಿನಕ್ಕೆಂದು ಕಾದಿದ್ದು ಕಾರ್ಯಕ್ರಮ ನೋಡುತ್ತಿದ್ದಳು. ಆಕೆ ಚೆನ್ನಾಗಿದ್ದಾಗ ಕೆಲವು ಬಾರಿ ನಿಮ್ಮ ಮನೆಯ ಬಳಿ ಬಂದು ಭೇಟಿಯಾಗಲು ಯತ್ನಿಸಿದ್ದೆವು. ಆದರೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದರು. ಇದು ಸುದೀಪ್ ಅವರನ್ನು ಇನ್ನಷ್ಟು ಭಾವುಕಗೊಳಿಸಿತ್ತು.ಕೂಡಲೇ ಕ್ಷಮೆ ಕೇಳಿದ್ದ ಸುದೀಪ್, ”ಕ್ಷಮಿಸಿ ನಾನು ಆ ಸಮಯದಲ್ಲಿ ಎಲ್ಲಿದ್ದೆನೋ ಗೊತ್ತಿಲ್ಲ. ನಿಮ್ಮನ್ನು ಭೇಟಿ ಮಾಡಲು ಆಗದಿರುವುದಕ್ಕೆ ಕ್ಷಮಿಸಿ” ಎಂದಿದ್ದರು. ”ನನಗೆ ಕೆಲವರ ಪರಿಚಯ ಇದೆ, ಮಗುವಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತೇನೆ. ನೀವು ಹೆದರುವುದು ಬೇಡ ಕೈಲಾದ ಪ್ರಯತ್ನವನ್ನು ಮಾಡೋಣ” ಎಂದು ಸುದೀಪ್ ಭರವಸೆ ಸಹ ನೀಡಿದ್ದರು. ಆದರೆ ಆ ಬಾಲಕಿ ಮೃತಳಾಗಿದ್ದಾಳೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada