ಎರಡು ರೋಮಾಂಚಕಾರಿ ಪಂದ್ಯಗಳಿಗೆ ಸಾಕ್ಷಿಯಾದ ಭಾರತ-ಶ್ರೀಲಂಕಾ ನಡುವಿನ ಟಿ20 ಸಮರ ಕ್ಲೈಮ್ಯಾಕ್ಸ್ ಹಂತ ತಲುಪಿದೆ.ಸರಣಿ 1-1 ಸಮಬಲದಲ್ಲಿ ನೆಲೆಸಿದ್ದು, ಶನಿವಾರ ರಾಜ್ಕೋಟ್ನಲ್ಲಿ ನಿರ್ಣಾಯಕ ಕದನ ಏರ್ಪಡಲಿದೆ. ಸರಣಿಗೆ ರಾಜ ಯಾರು ಎಂಬುದು ಈ ಪಂದ್ಯದ ಕೌತುಕ.ಮುಂಬಯಿ ಮತ್ತು ಪುಣೆ ಪಂದ್ಯಗಳೆರಡೂ ಟಿ20 ಕ್ರಿಕೆಟಿನ ನೈಜ ರೋಮಾಂಚನವನ್ನು ತೆರೆದಿರಿಸಿದ್ದವು. ಭಾರತಕ್ಕೆ ತವರಿನ ಲಾಭವಿದ್ದರೆ, ಲಂಕೆಗೆ ಏಷ್ಯಾ ಕಪ್ ಚಾಂಪಿಯನ್ ಎಂಬ ಒತ್ತಡವಿತ್ತು. ಭಾರತದ್ದು ಯುವ ಪಡೆಯಾದರೆ, ಶ್ರೀಲಂಕಾ ಟಿ20 ಸ್ಪೆಷಲಿಸ್ಟ್ಗಳನ್ನೇ ಕಟ್ಟಿಕೊಂಡು ಬಂದಿತ್ತು. ಎರಡೂ ತಂಡಗಳು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನೇ ನೀಡಿವೆ.ಮುಂಬಯಿಯ ಮೊದಲ ಪಂದ್ಯದ ಕುರಿತು ಹೇಳುವುದಾದರೆ, ಶ್ರೀಲಂಕಾಕ್ಕೆ ಗೆಲುವಿನ ಅವಕಾಶ ಹೆಚ್ಚಿತ್ತು. ಪುಣೆಯಲ್ಲಿ ಭಾರತಕ್ಕೂ ಚಾನ್ಸ್ ಇತ್ತು, ಆದರೆ ಇನ್ನೂರಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ಸೋತಿತು. ಪವರ್ ಪ್ಲೇಯಲ್ಲಿ ಮರುಕಳಿಸಿದ ಘೋರ ವೈಫಲ್ಯ, ಅರ್ಷದೀಪ್ ಸಿಂಗ್ ಅವರ ಸಾಲು ಸಾಲು ನೋಬಾಲ್ಗಳೆಲ್ಲ ಭಾರತಕ್ಕೆ ಮುಳುವಾದವು.ಆದರೂ ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಅಸಾಮಾನ್ಯ ಸಾಹಸವನ್ನು ಕೊಂಡಾಡಲೇ ಬೇಕು. 10 ಓವರ್ ಒಳಗೆ 57ಕ್ಕೆ 4 ವಿಕೆಟ್ ಉರುಳಿದಾಗ ಇವರಿಬ್ಬರು ಸಿಡಿದು ನಿಂತ ರೀತಿ ಚುಟುಕು ಕ್ರಿಕೆಟಿನ ರಸದೌತಣವನ್ನೇ ಉಣಿಸಿತು. ಸೂರ್ಯಕುಮಾರ್ ಇನ್ನೊಂದೇ ಒಂದು ಓವರ್ ಕ್ರೀಸ್ನಲ್ಲಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು. ಇದಕ್ಕೂ ಮಿಗಿಲಾದುದು ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಚೊಚ್ಚಲ ಅರ್ಧ ಶತಕದ ಆರ್ಭಟ. ಅಂಥ ಒತ್ತಡದ ಸನ್ನಿವೇಶದಲ್ಲೂ 31 ಎಸೆತಗಳಿಂದ 65 ರನ್ ಸಿಡಿಸಿದ್ದು ನಮ್ಮ ಅಗ್ರ ಸರದಿಯ ಬ್ಯಾಟರ್ಗಳಿಗೆ ಒಂದು ಪಾಠದಂತಿತ್ತು (3 ಬೌಂಡರಿ, 6 ಸಿಕ್ಸರ್).ಈ ರೀತಿಯಾಗಿ ಎರಡೂ ಪಂದ್ಯಗಳ ಡೆತ್ ಓವರ್ಗಳಲ್ಲಿ ಭಾರತದ ಬ್ಯಾಟಿಂಗ್ ಚೇತೋಹಾರಿಯಾಗಿಯೇ ಇತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….