‘ಅಪ್ಪುಗೆ ಒಂದು ಸಿನಿಮಾ ಮಾಡ್ಬೇಕಿತ್ತು, ನಾನು ಆ ಚಾನ್ಸ್‌ ಮಿಸ್ ಮಾಡ್ಕೊಂಡೆ ನಟ ಉಪೇಂದ್ರ.

 

‘ರಿಯಲ್ ಸ್ಟಾರ್’ ಉಪೇಂದ್ರ ಅವರು ಹೀರೋ ಆಗುವುದಕ್ಕಿಂತ ಮುನ್ನ ಸ್ಟಾರ್ ಡೈರೆಕ್ಟರ್ ಆಗಿ ಮಿಂಚಿದವರು. 1995ರಲ್ಲೇ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರಿಗೆ ‘ಓಂ’ ಸಿನಿಮಾ ನಿರ್ದೇಶನ ಮಾಡಿದ್ದರು ಉಪೇಂದ್ರ. ಆ ಸಿನಿಮಾ ಆಲ್ ಟೈಂ ಬ್ಲಾಕ್ ಬಸ್ಟರ್ ಆಗಿತ್ತು. ಆದಾದ ಬಳಿಕ ಉಪೇಂದ್ರ ಅವರು ರಾಘವೇಂದ್ರ ರಾಜ್‌ಕುಮಾರ್ ಅವರಿಗೂ ‘ಸ್ವಸ್ತಿಕ್’ ಹೆಸರಿನ ಒಂದು ಸಿನಿಮಾ ನಿರ್ದೇಶಿಸಿದ್ದರು. ಆದರೆ ಡಾ. ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಉಪೇಂದ್ರಗೆ ಸಿನಿಮಾ ಮಾಡು ಸಾಧ್ಯವಾಗಲಿಲ್ಲ. ಇದೀಗ ಆ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ.ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾದ ಆಡಿಯೋ ರಿಲೀಸ್ ಇವೆಂಟ್ ಭಾನುವಾರ (ಫೆ.26) ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ನಟ ಉಪೇಂದ್ರ ಅವರು, ‘ನಾನು ಪುನೀತ್ ರಾಜ್‌ಕುಮಾರ್‌ ಜೊತೆಗೆ ಒಂದು ಸಿನಿಮಾ ಮಾಡಬೇಕಿತ್ತು. ಆದರೆ ಆ ಚಾನ್ಸ್‌ನ ನಾನು ಮಿಸ್ ಮಾಡಿಕೊಂಡೆ. ನಾವೆಲ್ಲರೂ ಪುನೀತ್ ರಾಜ್‌ಕುಮಾರ್ ಅವರನ್ನು ಶಿವಣ್ಣನಲ್ಲಿ ಕಾಣುತ್ತೇವೆ. ಹಾಗಾಗಿ, ಶಿವಣ್ಣನಿಗೆ ಸಿನಿಮಾ ಮಾಡ್ತಿನಿ. ಅಕ್ಕ (ಗೀತಾ ಶಿವರಾಜ್‌ಕುಮಾರ್) ಇಲ್ಲೇ ಇದ್ದಾರೆ. ಅವರು ಯಾವತ್ತೂ ಹೇಳ್ತಾ ಇರ್ತಾರೆ, ‘ನಮ್ ಪ್ರೊಡಕ್ಷನ್ಸ್‌ನಲ್ಲೇ (ಗೀತಾ ಪಿಕ್ಚರ್ಸ್) ಸಿನಿಮಾ ಮಾಡಬೇಕು ಅಂತ.. ಖಂಡಿತ ಸಿನಿಮಾ ಮಾಡ್ತಿನಿ. ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಮಾಡ್ತಿನಿ..’ ಎಂದು ಉಪೇಂದ್ರ ಹೇಳಿದ್ದಾರೆ. ಉಪ್ಪಿ ಹೇಳಿದ ಈ ಮಾತಿಗೆ ಶಿವಣ್ಣ ಧನ್ಯವಾದಗಳನ್ನು ಹೇಳಿದ್ದಾರೆ.’ಅವತ್ತು ಉಪೇಂದ್ರ ನನ್ನ ಕೈಗೆ ಲಾಂಗ್ ಕೊಟ್ಟುಬಿಟ್ರು. ಎಲ್ಲರೂ ಲಾಂಗ್ ಸಿನಿಮಾನೇ ಬೇಕು ಅಂತಾರೆ…’ ಎಂದು ಶಿವಣ್ಣ ತಮಾಷೆ ಮಾಡಿದರು. ಆ ತಕ್ಷಣವೇ ಅಲ್ಲಿಯೇ ಇದ್ದ ಉಪೇಂದ್ರ ಇನ್ನೊಮ್ಮೆ ಶಿವಣ್ಣನಿಗೆ ಆಕ್ಷನ್-ಕಟ್ ಹೇಳಿದರು. ಈ ದೃಶ್ಯ ನೋಡಿ ಫ್ಯಾನ್ಸ್ ಖುಷಿಯಾದರು. ಉಪೇಂದ್ರ ನಿರ್ದೇಶನದಲ್ಲಿ ಬಂದ ‘ಓಂ’ ಚಿತ್ರದಲ್ಲಿ ಶಿವಣ್ಣ ನಟಿಸಿದ್ದರು. ಆನಂತರ ಇಬ್ಬರು ಒಟ್ಟಿಗೆ ‘ಲವ ಕುಶ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.’ನಾನು ಚಂದ್ರು ಅವರ ಡೈರೆಕ್ಷನ್‌ಗೆ ದೊಡ್ಡ ಅಭಿಮಾನಿ. ನನಗೆ ಅವರು ‘ಮೈಲಾರಿ’ ಅಂತ ಒಂದು ಸಿನಿಮಾ ಮಾಡಿದ್ರು. ಅವರು ಕಥೆಯಲ್ಲಿ ತುಂಬ ಎಮೋಷನ್ಸ್ ತರ್ತಾರೆ. ಅದು ನನಗೆ ತುಂಬ ಇಷ್ಟ. ಅವರು ಯಾಕೆ ಈ ಥರ ಸಿನಿಮಾ ಮಾಡ್ತಾರೆ ಅಂದ್ರೆ, ಅವರಿಗೆ ಫ್ಯಾಮಿಲಿ ಎಮೋಷನ್ಸ್ ಜಾಸ್ತಿ ಇದೆ. ಚಂದ್ರು ಅವರು ತಮ್ಮ ಪೋಷಕರನ್ನು, ಜನರನ್ನು ತುಂಬ ಪ್ರೀತಿ ಮಾಡ್ತಾರೆ. ಇಡೀ ‘ಕಬ್ಜ’ ಟೀಮ್‌ಗೆ ಒಳ್ಳೆಯದಾಗಲಿ. ಗೀತಾಗೆ ಕಾಲು ನೋವಿದೆ. ಆದರೂ ಚಂದ್ರು, ಉಪೇಂದ್ರ ಮೇಲಿನ ಪ್ರೀತಿ ಅಭಿಮಾನಕ್ಕೆ ಇಲ್ಲಿಗೆ ಬಂದಿದ್ದಾರೆ..’ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Kabzaa Movie: ʻಕಬ್ಜʼ ಚಿತ್ರದ ಧ್ವನಿ ಸುರುಳಿ ಅದ್ಧೂರಿ ಬಿಡುಗಡೆ: ಸದ್ದು ಮಾಡುತ್ತಿದೆ 'ಚುಂ ಚುಂ ಚಳಿʼ ಸಾಂಗ್‌!

Mon Feb 27 , 2023
ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಪ್ಯಾನ್‌ ಇಂಡಿಯಾ ಸಿನಿಮಾವಾದ ʼಕಬ್ಜʼ (Kabzaa Movie) ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದೆ. ಕಬ್ಜ ಸಿನಿಮಾದ ಮೂರನೇ ಹಾಡನ್ನು ಗೀತಾ ಶಿವರಾಜ್ ಕುಮಾರ್ ದಂಪತಿ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆರ್‌.ಚಂದ್ರು ಊರಿನಲ್ಲೇ ‘ಕಬ್ಜ’ ಆಡಿಯೊ ಲಾಂಚ್ ಮಾಡಲಾಗಿದೆ. ಈಗ ಬಿಡುಗಡೆ ಆಗಿರುವ ‘ಚುಂ ಚುಂ ಚಳಿ..’ ಹಾಡಿನಲ್ಲಿ ತಾನ್ಯಾ ಹೋಪ್​ ಹೆಜ್ಜೆ ಹಾಕಿದ್ದಾರೆ. ಗಾಯಕ ಗುರುಕಿರಣ್ ಮ್ಯೂಸಿಕಲ್ […]

Advertisement

Wordpress Social Share Plugin powered by Ultimatelysocial