ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಅನೇಕ ಉಗ್ರರು ಯೋಗಿ ಆದಿತ್ಯನಾಥ್ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ. ಇದೀಗ ಇದೇ ವಿಚಾರದ ಕುರಿತಂತೆ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಹೌದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆಗೈಯಲು ಉಗ್ರರು ಇದೀಗ ಮತ್ತೊಮ್ಮೆ ವಿಫಲ ಯತ್ನ ನಡೆಸಿದ್ದಾರೆ. ಗಣರಾಜ್ಯೋತ್ಸವದ ದಿನವೇ ಸ್ಕೆಚ್ ಹಾಕಿದ್ದು, ಪೊಲೀಸರ ಮುಂಜಾಗೃತೆಯಿಂದ ಉಗ್ರರ ಯತ್ನ ವಿಫಲವಾಗಿದೆ.
ಗಣರಾಜ್ಯೋತ್ಸವದ ದಿನವೇ ಉಗ್ರರ ಪ್ಲಾನ್
ಇಂದು ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಇದೆ. ಆದರೆ ಉಗ್ರರು ಮಾತ್ರ ವಿಧ್ವಂಸಕ ಕೃತ್ಯ ನಡೆಸಿ, ದೇಶದ ಭದ್ರತೆಗೆ ಧಕ್ಕೆ ತರುವು ಪ್ಲಾನ್ನಲ್ಲಿದ್ದರು. ಈ ಮೂಲಕ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಲು ಯೋಜನೆ ರೂಪಿಸಿದ್ದರು. ಈ ಯೋಜನೆಯ ಒಂದು ಭಾಗವೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹತ್ಯೆಯ ಪ್ಲಾನ್.
ಮಧ್ಯಪ್ರದೇಶದಲ್ಲಿ ಸಿಕ್ತು ಬೆದರಿಕೆ ಪತ್ರ
ಮಧ್ಯಪ್ರದೇಶದ ರೇವಾದಲ್ಲಿ ಉಗ್ರರ ಬೆದರಿಕೆಯ ಪತ್ರ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ-30ರ ಸೇತುವೆಯ ಕೆಳಗೆ ಈ ವಸ್ತುಗಳು ಪತ್ತೆಯಾಗಿವೆ. ಟೈಮರ್ನೊಂದಿಗೆ ಸ್ಫೋಟಕವನ್ನು ಜಿಲ್ಲಾ ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆಯ ಪತ್ರವೊಂದು ಪತ್ತೆಯಾಗಿದೆ.
ಪತ್ರದಲ್ಲಿ ಸ್ಫೋಟಕ ಇಟ್ಟಿದ್ದ ಭಯೋತ್ಪಾದಕರು
ಮಧ್ಯಪ್ರದೇಶದ ರೇವಾದಲ್ಲಿ ಸಿಕ್ಕಿದ ಪತ್ರದಲ್ಲಿ ಸ್ಫೋಟಕವೂ ಪತ್ತೆಯಾಗಿದೆ. ಪತ್ರದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವ ಬಗ್ಗೆ ಉಗ್ರರು ಬೆದರಿಕೆ ಹಾಕಿದ್ದಾರೆ. ಪೊಲೀಸರ ಮುಂಜಾಗ್ರತೆಯಿಂದ ಮಹಾದೊಡ್ಡ ವಿಪತ್ತೊಂದು ತಪ್ಪಿಹೋಗಿದೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು, ಬಾಂಬ್ ಸ್ಕ್ವಾಡ್ನ ಸಹಾಯದಿಂದ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಯೋಗಿ ಹತ್ಯೆಗೆ ಸ್ಕೆಚ್
ಉತ್ತರಪ್ರದೇಶದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯುಪಿ ಸಿಎಂ ಆದಿತ್ಯನಾಥ್ಗೆ ಬೆದರಿಕೆಯು ಭಯೋತ್ಪಾದನಾ ಚಟುವಟಿಕೆಗಳ ಭೀತಿಯನ್ನು ಹುಟ್ಟುಹಾಕಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಹೀಗಾಗಿ ಈ ವೇಳೆ ಆತಂಕ ಸೃಷ್ಟಿಸುವುದು ಉಗ್ರರ ಉದ್ದೇಶವಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada