ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ (ಡಿಸೆಂಬರ್ 20) ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಚುನಾವಣಾ ಕಾನೂನು(ತಿದ್ದುಪಡಿ) ಮಸೂದೆ, 2021 ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
“ಆಧಾರ್ ಎಂಬುದು ನಿವಾಸದ ದಾಖಲೆಯಾಗಿದೆ ವಿನಃ, ಅದು ಪೌರತ್ವದ ಪುರಾವೆ ಅಲ್ಲ.
ಒಂದು ವೇಳೆ ನೀವು ಮತದಾರನ ಬಳಿ ಆಧಾರ್ ಕಡ್ಡಾಯ ಎಂದು ಹೇಳಿದ್ರೆ, ಅದು ಅವರು ವಾಸವಾಗಿರುವುದಕ್ಕೆ ದೊರೆತ ದಾಖಲೆಯಾಗಲಿದೆ. ಇದರಿಂದಾಗಿ ನೀವು(ಕೇಂದ್ರ ಸರ್ಕಾರ) ಈ ದೇಶದ ಪ್ರಜೆಯಲ್ಲದವರಿಗೂ ಮತದಾನದ ಹಕ್ಕನ್ನು ಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿ ತಿಳಿಸಿದ್ದರು.
ಕೇಂದ್ರ ಸರ್ಕಾರದ ವಾದವೇನು?
ಈ ವಿಧೇಯಕದಿಂದ ದೇಶದಲ್ಲಿನ ನಕಲಿ ಮತದಾನ ಕೊನೆಗೊಳ್ಳಲಿದೆ. ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸಲಿದೆ ಎಂದು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada