ವಿಪಕ್ಷಗಳ ಪ್ರತಿರೋಧದ ನಡುವೆ ಚುನಾವಣೆ ಕಾನೂನುಗಳ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

ವಿಪಕ್ಷಗಳ ಪ್ರತಿರೋಧದ ನಡುವೆ ಚುನಾವಣೆ ಕಾನೂನುಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಆಧಾರ್ ಕಾರ್ಡ್ ಅನ್ನು ಮತದಾರರ ಗುರುತು ಪತ್ರಕ್ಕೆ ಜೋಡಿಸಲು ಅನುಮತಿಸುವ ಚುನಾವಣೆ ಕಾನೂನುಗಳ (ತಿದ್ದುಪಡಿ) ಮಸೂದೆ ಇಂದು ಲೋಕಸಭೆಯಲ್ಲಿ ವಿಪಕ್ಷಗಳ ವ್ಯಾಪಕ ಪ್ರತಿರೋಧದ ನಡುವೆ ಅಂಗೀಕಾರಗೊಂಡಿದೆ. ಈ ರೀತಿ ಆಧಾರ್ ಕಾರ್ಡ್ ಅನ್ನು ಒಬ್ಬರ ಮತದಾರರ ಗುರುತು ಪತ್ರದೊಂದಿಗೆ ಜೋಡಿಸುವುದರಿಂದ ದೇಶದಲ್ಲಿ ನಾಗರಿಕರಲ್ಲದವರಲ್ಲಿ ಹೆಚ್ಚಿನವರು ಮತದಾನ ಮಾಡುವಂತಾಗುತ್ತದೆ ಎಂದು ವಿಪಕ್ಷಗಳು ವಾದಿಸುತ್ತಿವೆ.

“ಆಧಾರ್ ಕಾರ್ಡ್ ವಾಸ್ತವ್ಯದ ಪುರಾವೆಯಾಗಿದೆಯೇ ಹೊರತು ಪೌರತ್ವದ ಪುರಾವೆಯಲ್ಲ. ನೀವು ಮತದಾನಕ್ಕೆ ಆಧಾರ್ ಕಾರ್ಡ್ ಕೇಳಿದರೆ, ಒಬ್ಬರ ವಾಸದ ಮಾಹಿತಿ ದೊರಕುತ್ತದೆ. ಇದು ಮುಂದೆ ನಾಗರಿಕರಲ್ಲದವರಿಗೆ ಮತದಾನ ಹಕ್ಕು ನೀಡಿದಂತಾಗುತ್ತದೆ,” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.

“ಮತದಾನ ಒಂದು ಕಾನೂನಾತ್ಮಕ ಹಕ್ಕು. ಆಧಾರ್ ಕಾರ್ಡ್ ಅನ್ನು ಮತದಾರರ ಗುರುತಪತ್ರದೊಂದಿಗೆ ಜೋಡಿಸುವುದು ಸರಿಯಲ್ಲ,” ಎಂದು ಇನ್ನೊಬ್ಬ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದರು.

“ಸರಕಾರ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ನಾನು ಈ ಮಸೂದೆಯನ್ನು ವಿರೋಧಿಸುತ್ತೇನೆ,” ಎಂದುಇ ಟಿಎಂಸಿಯ ಸೌಗತೊ ರಾಯ್ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಮಾರಸ್ವಾಮಿ : ಹೃದಯ ಇದ್ದವರಿಗೆ ಮಾತ್ರ ಬೊಮ್ಮಾಯಿ ಭಾವನೆ ಅರ್ಥವಾಗುತ್ತದೆ

Mon Dec 20 , 2021
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿ ತಮ್ಮ ಅಧಿಕಾರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿರುವ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಆದರೆ ಭಾವನಾತ್ಮಕ ವ್ಯಕ್ತಿಗಳಿಗೆ ಮಾತ್ರ ಅದು ಅರ್ಥವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ ಅವರು ನಾಲ್ಕು ಚುನಾವಣೆಗಳನ್ನು ಸತತವಾಗಿ ಗೆದ್ದಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಭಾವನೆಗಳು […]

Advertisement

Wordpress Social Share Plugin powered by Ultimatelysocial