ಡೆಲಾಯ್ಟ್ ಸೆಲ್ಸ್ ಸಂಸ್ಥೆ ಹೇಳಿಕೆ

ಕೇಂದ್ರಸರ್ಕಾರ ಅಧೀನದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಅನ್ನು ವಿಲೀನಗೊಳಿಸುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ. ತಕ್ಷಣಕ್ಕೆ ಈ ವಿಲೀನ ಕಾರ್ಯಸಾಧುವಲ್ಲ ಎಂದು ಸರ್ಕಾರವೇ ನೇಮಿಸಿದ ಡೆಲಾಯ್ಟ್ ಆ್ಯಂಡ್ ಎಲ್‌ಎಲ್‌ಪಿ ಸೆಲ್ಸ್ ಸಂಸ್ಥೆ ಸಲಹೆ ನೀಡಿದ್ದೇ ಇದಕ್ಕೆ ಕಾರಣ. ಸದ್ಯ ಬಿಎಸ್ ಎನ್‌ಎಲ್, ದೆಹಲಿ ಮತ್ತು ಮುಂಬೈ ಹೊರತುಪಡಿಸಿ, ದೇಶದ ಉಳಿದೆಲ್ಲೆಡೆ ತನ್ನ ಸೇವೆ ಹೊಂದಿದೆ. ಎಂಟಿಎನ್‌ಎಲ್ ದೆಹಲಿ-ಮುಂಬೈನಲ್ಲಿ ಮಾತ್ರ ಕಾರ್ಯಾಚರಿಸುತ್ತಿದೆ. ಈ ಎರಡು ಸಂಸ್ಥೆಗಳನ್ನು ವಿಲೀನ ಮಾಡುವುದಕ್ಕೆ ಮುನ್ನ ಬಿಎಸ್‌ಎನ್‌ಎಲ್‌ಗೆ ದೆಹಲಿ-ಮುಂಬೈನಲ್ಲೂ ೨ಜಿ, ೪ಜಿ ತರಂಗಾAತರ ನೀಡಬೇಕು. ಆಗದು ಇಡೀ ದೇಶಾದ್ಯಂತ ಕಾರ್ಯಾಚರಿಸಲು ಅನುಕೂಲವಾಗುತ್ತದೆ ಎಂದು ಡೆಲಾಯ್ಟ್ ಸಲಹೆ ನೀಡಿದೆ. ಬಿಎಸ್‌ಎನ್‌ಎಲ್-ಎಂಟಿಎನ್‌ಎಲ್ ಸಂಸ್ಥೆಗಳನ್ನು ತಕ್ಷಣಕ್ಕೆ ವಿಲೀನ ಮಾಡುವುದರಿಂದ ೪೫,೦೦೦ ಕೋಟಿ ರೂ. ಸಾಲ ಉಂಟಾಗುತ್ತದೆ. ತಕ್ಷಣ ಇದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಡೆಲಾಯ್ಟ್ ಹೇಳಿದೆ.

Please follow and like us:

Leave a Reply

Your email address will not be published. Required fields are marked *

Next Post

ಡೆಲ್ಲಿ ಐಪಿಎಲ್ ತಂಡಕ್ಕೆ ಸೆಹವಾಗ್ ನಾಯಕ

Mon Jul 6 , 2020
ಆಕಾಶ್ ಚೋಪ್ರಾ ಪ್ರಕಟಿಸಿದ ಸಾರ್ವಕಾಲಿಕ ಶ್ರೇಷ್ಠ ಡೆಲ್ಲಿ ಐಪಿಎಲ್ ತಂಡಕ್ಕೆ ವೀರೇಂದ್ರ ಸೆಹವಾಗ್ ನಾಯಕರಾಗಿದ್ದಾರೆ. ಡೆಲ್ಲಿ ಪರ ಆಡಿದ ವೇಳೆ ಸೆಹವಾಗ್ ೧೬೦.೩ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇವರ ಜತೆಗಾರನಾಗಿ ಕಾಣಿಸಿಕೊಂಡವರು ಗೌತಮ್ ಗಂಭೀರ್. ಚೋಪ್ರಾ ಪ್ರಕಟಿಸಿದ ಡೆಲ್ಲಿ ತಂಡದಲ್ಲಿ ಕೆವಿನ್ ಪೀಟರ್‌ಸನ್ ಸ್ಥಾನ ಸಂಪಾದಿಸಿಲ್ಲ. ವನ್‌ಡೌನ್‌ನಲ್ಲಿ ಎಬಿ ಡಿ ವಿಲಿಯರ್ ಕಾಣಿಸಿಕೊಂಡಿದ್ದಾರೆ. ಹಾಲಿ ನಾಯಕ ಅಯ್ಯರ್, ಕೀಪರ್ ಪಂತ್ ಈ ತಂಡದಲ್ಲಿದ್ದಾರೆ. ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಎಬಿ […]

Advertisement

Wordpress Social Share Plugin powered by Ultimatelysocial