ರಾಮ ಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನಮ್ಮ ಕೇಂದ್ರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ವ್ಯವಸ್ಥೆಗಳನ್ನು ಕೈಗೊಂಡು ಪೂಜೆ ನೆರವೇರಿಸಲು ಮುಂದಾಗಿದೆ. ಹೀಗಾಗಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಸಹಯೋಗದಲ್ಲಿ ವಿವಿಧ ಪವಿತ್ರ ಕ್ಷೇತ್ರಗಳ ಮಣ್ಣನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಮಣ್ಣನ್ನು ರಾಮ ಜನ್ಮ ಭೂಮಿ ಅಯೋಧ್ಯೆಗೆ ಕಳುಹಿಸಲು ನಗರದ ಆಂಜನೇಯ ದೇವಾಲಯದಲ್ಲಿ ಇಂದು ಬೆಳಿಗ್ಗೆ ಆಂಜನೇಯನಿಗೆ ಪೂಜೆ ನೆರವೇರಿಸಿಲಾಯಿತು. ನಂತರ ಸಂಗ್ರಹಿಸಿರೋ ಮಣ್ಣನ್ನು ಕೊರಿಯರ್ ಮೂಲಕ ಅಯೋಧ್ಯೆಗೆ ಕಳಿಸಲಾಗುವುದೆಂದು ಭಜರಂಗದಳದ ಜಿಲ್ಲಾ ಸಹಸಂಯೋಜಕ ಶಶಿಕಿರಣ್ ತಿಳಿಸಿದರು.