ಈ ಹಿಂದೆನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಪಕ್ಷ ಕೆಲವೆಡೆ ಮೇಲುಗೈ ಸಾಧಿಸಿದೆ. ಅದೇ ವೇಗದಲ್ಲಿಯೇ ಮುಂಬರುವ ಉಪ ಚುನಾವಣೆಯಲ್ಲಿ ಕೂಡ ಗೆಲುವನ್ನು ಸಾಧಿಸಲು ಪಣ ತೊಟ್ಟು ನಿಂತಿದೆ….ಹೌದು ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಭವನಿಯ ಅಭ್ಯರ್ಥಿಗಳ ಬಗ್ಗೆ ಕುರಿತು ಇಂದು ಸಭೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ರು ….. ಇಂದು ನಡೆಯಲಿರುವ ಪಕ್ಷದ ರಾಜ್ಯ ಪ್ರಮುಕರ ಸಮಿತಿ ಸಭಯಲ್ಲಿ ಚರ್ಚಿಸಿ ವರಿಷ್ಠರಿಗೆ ಶಿಫಾರಸ್ಸು ಕಳುಹಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಲಿದರು.
ಹೌದು ದಿನದಿಂದ ದಿನಕ್ಕೆ ಸಿಂದಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಕಮಲಪಾಳ್ಯದಿಂದ ಯಾರಾಗ್ತಾರೆ ಮುಂದಿನ ಚುನಾವಣೆಯ ಅಭ್ಯಾರ್ಥಿಯೆಂದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ಕಮಲ ಪಾಳ್ಯ ಹೇಗಾದರೂ ಮಾಡಿ ಗದ್ದುಗೆಯನ್ನು ಹಿಡಿಯ ಬೇಕು ಎಂದು ತುಂಬಾನೆ ಕಸರತ್ತು ನಡೆಸ್ತಾ ಇದೆ.ಈಗಾಗಲೇ ಸಿಂದಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಪಕ್ಷದ ಸ್ಥಳೀಯ ಕಾರ್ಯಕರ್ತರ ಸಭೆಯನ್ನು ನಡೆಸಿ ಸಭೆಯಲ್ಲಿ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ….ಇನ್ನು ಸ್ಥಳೀಯ ಕಾರ್ತಕರ್ತರ ಅಭಿಪ್ರಾಯವನ್ನು ಆಧರಿಸಿ ಸಮಿತಿ ಚರ್ಚಿಸಲಿದೆ..ಸಭಯೆ ಬಳಿಕ ಸಂಭವನೀಯ ಅಭ್ಯಾರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ರವಾನಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು .ಇನ್ನು ಸಚಿವರನ್ನು ಮತ್ತು ಪಕ್ಷದ ಪದಾಧಿಕಾರಿಗಳಲ್ಲಿ ಕೆಲವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಲಾಗುವುದು..ಈ ಬಗ್ಗೆ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ನಾಮಪತ್ರ ಸಲ್ಲಿಸಲು ಅಕ್ಟೋಬರ್ 8 ಕೊನೆಯ ದಿನವಾಗಿದ್ದು, ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿ ಅವರ ಪತ್ನಿ ರೇವತಿ ಹಾನಗಲ್ ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ವಿಷಯವನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.ಬಿಜೆಪಿ ಒಂದು ಕಡೆ ಅನುಕಂಪದ ಗಾಳವನ್ನು ಉಪಯೋಗಿಸಿ ಈ ಬಾರಿ ಹಾನಗಲ್ ನಲ್ಲಿ ಗದ್ದುಗೆ ಏರಲು ಪ್ರಯತ್ನಿಸಿದ್ರೆ, ಇನ್ನೊಂದು ಕಡೆ ಉದಾಸಿ ಅವ್ರ ಪತ್ನಿ ಯನ್ನು ಕಣಕ್ಕಿಳಿಸಲು ಹೈಕಮಾಂಡ್ ಹೆಂದೇಟು ಹಾಕುತ್ತಿದೆ ಎಂದು ಸಹ ಕೇಳಿ ಬಂದಿದೆ. ಇನ್ನು ಉದಾಸಿ ಅವ್ರ ಪತ್ನಿ ತಮ್ಮ ಸ್ವಗ್ರಾಮದಲ್ಲಿ ಒಳ್ಳೆಯ ಅಭಪ್ರಾಯವನ್ನು ಹೊಂದಿಲ್ಲ ,ಕೊರೊನಾ ಕಾಲದಲ್ಲಿಯೂ ಜನರಿಗೆ ಯಾವುದೇ ಸಹಾಯ ಮಾಡದೇ ಇರುವುದು ಉಪಚುನಾವಣೆಯಲ್ಲಿ ಕೈ ಕೊಡುವ ಸಾಧ್ಯತೆ ಇರುವ ಹಿನ್ನೆಲ್ಲೆಯಲ್ಲಿ ಉದಾಸಿ ಅವ್ರ ಪತ್ನಿಯನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡೋದ್ರಲ್ಲಿ ಎಲ್ಲೋ ಒಂದು ಕಡೆ ಹೈ ಕಮಾಂಡ್ ಹಿಂದೇಟು ಹಾಕುತ್ತಿರುವು ಎದ್ದು ಕಾಣುತ್ತಿದೆ…..