ಓಮಿಕ್ರಾನ್ ಸುದ್ಧಿ ಕೇಳಿದ ತತಕ್ಷಣ ನೆನಪಿಗೆ ಬರುವುದು ಒಂದು ಸಾವಿನ ಭಯ, ಮತ್ತೊಂದು ದುಡಿಮೆ ಬಿಟ್ಟು ಮೆನೆಯಲ್ಲಿ ಕೂರುವ ಲಾಕ್ ಡೌನ್ ಸಂದರ್ಭ.. ಹಿಂದೆ ಡೆಲ್ಟಾದಿಂದ ಆದ ಆವಾಂತರ ಅಷ್ಟಿಷ್ಟಲ್ಲ.. ಈಗ ಮತ್ತೆ ಓಮಿಕ್ರಾನ್ ವೈರಾಣುವಿನ ಆರ್ಭಟ ದಿನ ದಿನದಿಂದಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಮತ್ತೆ ಈ ಸಾವು ನೋವು, ಲಾಕ್ ಡೌನ್ ಕಂಟಕ ಎದುರಾಗುವ ಭಯ ಹೆಚ್ಚಾಗುತ್ತೆ.
ಹೌದು.. ವಿದೇಶಗಳಿಂದ ಕಳೆದವಾರ ರಾಜ್ಯಕ್ಕೆ ಆಗಮಿಸಿದ ೯ ಪ್ರಯಾಣಿಕರಲ್ಲಿ ಓಮಿಕ್ರಾನ್ ದೃಢವಾಗಿದೆ. ಇದರ ಜತೆಗೆ ಅವರ ಕುಟುಂಭಸ್ತರು ೩ ಜನಕ್ಕೂ ಕೂಡ ದೃಢವಾಗಿದ್ದು ವೈರಾಣುವಿನ ವೇಗದ ಬಗ್ಗೆ ಭಯ ಹೆಚ್ಚಾಗುತ್ತಿದೆ. ಒಟ್ಟಾರೆ ಗುರುವಾರು ೧೨ ಮಂದಿಗೆ ಓಮಿಕ್ರಾನ್ ಪತ್ತೆಯಾಗಿ, ೩೧ ಗಡಿ ದಾಟಿದೆ