ಚಿನ್ನಾಭರಣ ವ್ಯಾಪಾರಿಯ ಕೆಲಸಗಾರನಿಂದ ಎರಡು ಲಕ್ಷ ರೂ. ಸುಲಿಗೆ ಮಾಡಿದ್ದ ಕಾನ್ಸ್ಟೆಬಲ್ವೊಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜನಗರ ಠಾಣೆಯ ಕಾನ್ಸ್ಟೆಬಲ್ ಆನಂದ್ ಕುಮಾರ್ ಬಂಧಿತ.ಸುಣಕಲ್ ಪೇಟೆಯ ಚಿಕ್ಕ ಅಣ್ಣಮ್ಮ ಗಲ್ಲಿಯಲ್ಲಿ ರಾಜುರಾಮ್ ಎಂಬಾತ ಡಿ.7 ರಂದು ಸಾಯಂಕಾಲ 10 ಲಕ್ಷ ರೂ. ನಗದನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಆತನನ್ನು ಅಡ್ಡಗಟ್ಟಿದ್ದ ಆನಂದ್, ತನ್ನ ಪೊಲೀಸ್ ಐಡಿ ಕಾರ್ಡ್ ತೋರಿಸಿದ್ದ. ‘ಹವಾಲ ಹಣ ಸಾಗಿಸುತ್ತೀದ್ದೀಯಾ’? ಎಂದು ಹೇಳಿ ಎರಡು ಲಕ್ಷ ರೂ ನೀಡದಿದ್ದರೆ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ.
2 ಲಕ್ಷ ರೂ ಸುಲಿಗೆ ಕಾನ್ಸ್ಟೆಬಲ್ ಬಂಧನ!
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: