ವಿಶ್ವಸಂಸ್ಥೆ: ಕೋವಿಡ್​ 19 ಕಾರಣಕ್ಕೆ ಹೊಸ ಚುನಾವಣಾ ವ್ಯವಸ್ಥೆಯೊಂದಿಗೆ ಜೂನ್ 17ರಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಗೆ ಸಂಬಂಧಿಸಿದ ಐದು ಕಾಯಂಯೇತರ ಸದಸ್ಯತ್ವಕ್ಕೆ ಚುನಾವಣೆ ನಡೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಪ್ರತಿಯೊಬ್ಬ ಸದಸ್ಯರು ಮತ ಚಲಾಯಿಸಲಿದ್ದಾರೆ. ಇದೇ ವೇಳೆ, 75ನೇ ಜನರಲ್ ಅಸೆಂಬ್ಲಿಯ ಅಧ್ಯಕ್ಷರ ಆಯ್ಕೆ ಕೂಡ ನಡೆಯಲಿದೆ ಎಂದು ಯುಎನ್​ಜಿಎ ಅಧ್ಯಕ್ಷ ತಿಜ್ಜಾನಿ ಮುಹಮ್ಮದ್ ಬಂಡೆ ತಿಳಿಸಿದ್ದಾರೆ. ಜನರಲ್ ಅಸೆಂಬ್ಲಿಯ 10 ಕಾಯಂಯೇತರ ಸದಸ್ಯ […]

ಮುಂಬೈ: ಭೀಕರ ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಕರಾವಳಿಗೆ ಅಧಿಕೃತವಾಗಿ ಅಪ್ಪಳಿಸಿದ್ದು, ಮುಂದಿನ ಮೂರು ಗಂಟೆಗಳ ಕಾಲ ಕರಾವಳಿಯಾದ್ಯಂತ ತನ್ನ ಪ್ರಭಾವವನ್ನು ಬೀರಲಿದೆ.ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಮುಂದಿನ ಮೂರು ಗಂಟೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಸೂಚನೆ ನೀಡಿದೆ. ಇತ್ತ NDRF ತಂಡ ಕೂಡ ರಕ್ಷಣಾ ಕಾರ್ಯಾಚರಣೆಗಳಿಗೆ ಸಜ್ಜಾಗಿದೆ. ನಿಸರ್ಗ ಚಂಡಮಾರುತದಿಂದ ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾರ್ಮೋಡದ ವಾತಾವರಣ ಕೂಡ ಇದೆ. ಈ ಮಧ್ಯೆ […]

ಮಚ್ಚಿವರ: ಕೊರೊನಾವ ವೈರಸ್ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿರುವುದರ ಹಿನ್ನೆಲೆಯಲ್ಲಿ ನವ ಜೀವನಕ್ಕೆ ಕಾಲಿಡುತ್ತಿರುವ ಹಿಂದೂ ಯುವತಿಯ ವಿವಾಹ ನೆರವೇರಿಸುವ ಮೂಲಕ ಮುಸ್ಲಿಂ ದಂಪತಿಗಳು ಎಲ್ಲೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಲೂಧಿಯಾನಾ ಜಿಲ್ಲೆಯ ಭಾಟಿಯಾನ್‌ನಲ್ಲಿರುವ ಹಿಂದೂ ದಂಪತಿಗಳ ವಿವಾಹವನ್ನು ನೆರವೇರಿಸಲಾಗಿದೆ. ಸುದೇಶ್ ಕುಮಾರ್ ಅವರೊಂದಿಗೆ 22 ವರ್ಷದ ಪೂಜಾ ಎಂಬವರ ವಿವಾಹವು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೋಷಕರಿಗೆ ಆಗಮಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಮುಸ್ಲಿಂ ದಂಪತಿಗಳಾದ ಅಬ್ದುಲ್ ಸಾಜೀದ್ ಹಾಗೂ ಸೋನಿ […]

ನವದೆಹಲಿ: ದೇಶದ ರೈತರಿಗೆ ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಯೋಜನೆ ರೂಪಿಸಿದೆ. ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ‘ಒನ್ ನೇಷನ್ ಒನ್ ಒನ್ ಮಾರ್ಕೆಟ್’ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ರೈತರಿಗಾಗಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ‘ಒನ್ ನೇಷನ್ ಒನ್  ಮಾರ್ಕೆಟ್’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ದೇಶದಲ್ಲಿ ಎಲ್ಲಿ ಬೇಕಾದರೂ ಬೆಳೆ […]

ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ವಿವರಿಸಲು ಅಸಾಧ್ಯ. ವಿಪರೀತ ನಿಷ್ಠೆಗೆ ಹೆಸರಾದ ನಾಯಿ ಬೇಷರತ್ತಾಗಿ ತನಗೆ ಅನ್ನ ಹಾಕಿದವರನ್ನು ನೆನಪಿಡುತ್ತದಂತೆ. ಇಂಥದ್ದೇ ಒಂದು ಅತ್ಯಾಪ್ತ ಸುದ್ದಿ ಇಲ್ಲಿದೆ. ಗಾಲಿ ಕುರ್ಚಿಯಲ್ಲಿ ಕುಳಿತ ವಿಶೇಷ ಚೇತನ ಹೊಂದಿದ ಹುಡುಗನನ್ನು ನಾಯಿಯೊಂದು ತನ್ನ ಮುಂಗಾಲುಗಳಿಂದ ದಬ್ಬಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ನ್ಯೂಜಿಲೆಂಡ್ ನ ತಾನಿಯಾ ಬಟ್ಲರ್ ತನ್ನ ಬಾಕ್ಸರ್ ಗೆ ತುರ್ತು ಸಂದರ್ಭದಲ್ಲಿ ಯಾವ ರೀತಿ ಸ್ಪಂದಿಸಬೇಕೆಂದು ತರಬೇತಿ ಕೊಟ್ಟಿದ್ದ […]

ಚಿಕ್ಕಮಗಳೂರು: ಕನ್ನಡ ಸಿನಿಮಾ ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರು ಇಂದು ಚಿಕ್ಕಮಗಳೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಜಗ್ಗೇಶ್ ಹಾಗೂ ಕೋಮಲ್ ಇಂದು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡ ನಂತರ ಇದೇ ಸಂದರ್ಭ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೂ ಭೇಟಿ ನೀಡಿ ಗುರುಗಳ ದರ್ಶನವನ್ನು ಪಡೆದುಕೊಂಡರು. ಮಠದಲ್ಲೇ ಕೆಲ ಹೊತ್ತು ತಂಗಿದ್ದು, ಜಗದ್ಗುರುಗಳೊಂದಿಗೆ ಮಾತುಕತೆ ನಡೆಸಿದರು.

ನವದೆಹಲಿ:  ನಮ್ಮ ದೇಶದ ಹೆಸರನ್ನು ಇಂಡಿಯಾ ಬದಲಿಗೆ ಭಾರತ ಎಂದು ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಕೋರ್ಟ್ ಇಂದು ವಜಾಗೊಳಿಸಿದೆ.ಇಂಡಿಯಾಗೆ ಭಾರತ ಎಂಬ ಮತ್ತೊಂದು ಹೆಸರು ಇದೆಯೆಂದು ಭಾರತೀಯ ಸಂವಿಧಾನದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ನ್ಯಾಯಾಲಯದ ಮುಂದೆ ಈ ವಿಷಯವನ್ನು ತರುವ ಅಗತ್ಯವಿಲ್ಲ ಎಂದು ಹೇಳಿ ಸರ್ವೋಚ್ಛ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು. ಭವ್ಯ ಸಂಸ್ಕøತಿ ಹೊಂದಿರುವ ನಮ್ಮ ದೇಶಕ್ಕೆ ಇಂಡಿಯಾ ಎಂಬ ಪರಕೀಯ ಪದದ […]

ಚಿಕ್ಕಬಳ್ಳಾಪುರ: ಜಮಿನು ನೋಂದಣಿ ಮಾಡಲು ೧೨ ಲಕ್ಕ ಬೇಡಿಕೆ ಇಟ್ಟ ಆರ್.ಐ ಮತ್ತು ಗ್ರಾಮಲೆಕ್ಕಿಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಮೂಲದ ನಾರಾಯಣಮೂರ್ತಿ ಎಂಬುವವರು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ಮಲ್ಲಿಶೆಟ್ಟಿಪುರ ಗ್ರಾಮದ ಸುಮಾರು ೧೨ ಎಕರೆ ಜಮೀನು ಪಡೆದುಕೊಂಡು ತಮ್ಮ ಹೆಸರಿಗೆ ಖಾತೆ ಬದಲಾಯಿಸಲು ಹೋದಾಗ ಆರ್ ಐ ಮತ್ತು ಗ್ರಾಮಲೆಕ್ಕಿಗ ೧೨ಲಕ್ಷ ರೂ ಬೇಡಿಕೆ ಇಡ್ಡಿದ್ದಾರೆ. ಕೊನೆಗೆ ೭.೫೦ ಲಕ್ಷಕ್ಕೆ ವ್ಯವಹಾರ ಕುದರಿಸಿಕೊಂಡು […]

ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಮನೆ ಬಾಗಿಲು ತೆರೆಯುತ್ತಿದ್ದಂತೆ ಜಾಗಿಂಗ್ ಹೋಗುವವರೋ, ಪತ್ರಿಕೆ, ಹಾಲು ವಿತರಕರನ್ನು ನೋಡಬಹುದು. ಆದರೆ ಇಲ್ಲೊಬ್ಬ ಮಹಿಳೆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ದಿಗ್ಭ್ರಾಂತರಾಗಿದ್ದಾರೆ. ಏಕೆಂದರೆ ಅವರ ಮನೆಯ ಮುಂಬಾಗಿಲಲ್ಲಿ ಹೋರಾಟದ ಮನೋಭಾವದಲ್ಲಿದ್ದ ಎರಡು ಮೊಸಳೆ ಕಾಣಿಸಿದೆ. ಫ್ಲೋರಿಡಾದ ಸುಸಾನ್ ಎಂಬುವರಿಗೆ ಬೆಳಗ್ಗೆ ೬:೪೫ಕ್ಕೆ ತಮ್ಮ ಮನೆ ಮುಂಭಾಗದ ಬಾಗಿಲು ಬಡಿದ ಶಬ್ದವಾಗಿದೆ. ಅನಿರೀಕ್ಷಿತ ಅತಿಥಿ ಇರಬಹುದೆಂದು ಬಾಗಿಲು ತೆರೆದಾಗ ಸುಮಾರು ಏಳು ಅಡಿ ಉದ್ದದ ಎರಡು […]

ನವದೆಹಲಿ: ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ನಸುಕಿನ ಜಾವ ಅಗ್ನಿದುರಂತ ಸಂಭವಿಸಿ ೧೨೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿವೆ. ತುಘಲಕಾಬಾದ್‌ನ ವಾಲ್ಮೀಕಿ ಮೊಹಲ್ಲಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅಗ್ನಿ ಹೊತ್ತಿ ಉರಿಯಲಾರಂಭಿಸಿದ ಕೂಡಲೇ ಕಳೆದ ಮಧ್ಯರಾತ್ರಿ ೧.೩೦ರ ಹೊತ್ತಿಗೆ ೨೨ ಅಗ್ನಿಶಾಮಕ ಎಂಜಿನ್ ಗಳು ಬಂದು ಬೆಂಕಿಯನ್ನು ನಂದಿಸಿದವು. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕೆಲ ದಿನಗಳ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಬೆಂಕಿ ಹತ್ತಿ ಉರಿತು ೨೫೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದವು.

Advertisement

Wordpress Social Share Plugin powered by Ultimatelysocial