ಪಾರಿವಾಳ ಹಿಡಿಯಲು ಹೋಗಿ ದೇವಸ್ಥಾನದ ವಿಮಾನ ಗೋಪುರದ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದು ಯುವಕ ಸಾವು. ವಡ್ಡಗೆರೆ ಗ್ರಾಮದಲ್ಲಿರುವ ಶ್ರೀ ವೀರನಾಗಮ್ಮ ದೇವಾಲಯದ ವಿಮಾನ ಗೋಪುರದ ಮೇಲಿಂದ ಪಾರಿವಾಳ ಹಿಡಿಯಲು ಹೋದ ಯುವಕ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವಾಲಯದ ಆವರಣದಲ್ಲಿ ನಡೆದಿದೆ. ಯುವಕ ಕೊರಟಗೆರೆ ಪಟ್ಟಣದ ನಿವಾಸಿ ಆನಂದ್ 21 ವರ್ಷ ಎಂದು ತಿಳಿದುಬಂದಿದೆ.ಯುವಕನ ಶವವನ್ನು ಕೊರಟಗೆರೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ವಿಷಯ […]

ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಗುಡಿಸಿನಲ್ಲಿದ್ದ ಕರು ಸಜೀವ ದಹನವಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಗುಡಿಸಿಲಿಗೆ ಬೆಂಕಿ ಬಿದ್ದಿದ್ದು,ಬೆಂಕಿಯ ಅವಘಡದಿಂದ ದೊಡ್ಡ ಆಲಹಳ್ಳಿಯ ಗ್ರಾಮಸ್ಥ ಕಂಗಾಲಾಗಿದ್ದಾರೆ.ದೊಡ್ಡ ಆಲಹಳ್ಳಿಯ ತಾತಯ್ಯ ಎಂಬುವರಿಗೆ ಸೇರಿದ ಕರು. ಇನ್ನು ಬೆಂಕಿ ನಿಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ :ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆಸಿದ್ದಾರೆ. ಬೇಗೂರು ಪಿಎಸ್ ಐ ಈಶ್ವರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದುೆ, ಮದನ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೋಲಿಸರು ಬೇಗೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಚೇಸಿಂಗ್ ಮಾಡಿ ಸುಮಾರು 4 ಕಿಲೋಮೀಟರ್ ಚೇಸ್ ಮಾಡಿರುವ ಪೊಲೀಸರು ರೌಡಿಶೀಟರ್ ಮದನ್ ಮೇಲೆ ಕೊಲೆ, ಸುಲಿಗೆ ಸೇರಿ 14 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದ ಬೇಗೂರು ಪೊಲೀಸರು ಬಂಧನಕ್ಕೆ ಹೋದಾಗ […]

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಕೋಲಾರ ತಾಲ್ಲೂಕು ಆಲೇರಿ ಗ್ರಾಮದ ಬಳಿ ನಡೆದಿದೆ. ಮಂಜುನಾಥ್ (49) ಮೃತ ವ್ಯಕ್ತಿ.ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಪ್ರಕರಣವು ಕೋಲಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ :ದೇಶದಲ್ಲಿ ನಿಲ್ಲದ ಗೋ ಮಾಂಸ ದಂಧೆ

ಚಳ್ಳಕೆರೆ ಅಧಿಕಾರಿಗಳ ನಿರ್ಲಕ್ಷೆಯಿಂದ ನಿಲ್ಲದ ಗೋ ಮಾಂಸ ದಂಧೆ. ದೇಶದಲ್ಲಿ ಗೋ ಹತ್ಯೆ ನಿಷೇಧವಿದ್ದರೂ ನಗರದಲ್ಲಿ‌ ದಿನನಿತ್ಯ ಗೋಮಾಂಸ ದಂಧೆ ರಾಜರೋಷವಾಗಿ ನಡೆಯುತ್ತಿದೆ. ಚಳ್ಳಕೆರೆ ನಗರದ ಗಾಂಧಿನಗರ,ಅಜ್ಜಯ್ಯನ ಗುಡಿ ರಸ್ತೆ ಮಾಂಸದಂಗಡಿಯಲ್ಲಿ ಗೋ ಮಾಂಸ ದಂಧೆ ಹೇರಳವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ .ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇದರ ವಿರುದ್ಧ ಕ್ರಮ ಕೈಗೊಳಲ್ಲದಿರುವ ಅಧಿಕಾರಿಗಳ ನಿರ್ಲಕ್ಷವೇ ದಂದೆಗೆ ಮೂಲ ಕಾರಣವಾಗಿದೆ. ದೇಶದಲ್ಲಿ ಗೋ ಹತ್ಯೆ […]

ಖಾಸಗಿ ಕ್ಲೀನರ್ ಆಗಿ ಕೆಲಸ ಮಾಡುತ್ತಾ 2 ಪಲ್ಸರ್ ಬೈಕ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಚಿಟಗುಪ್ಪ ತಾಲೂಕಿನ ಪೊಲೀಸರು ಯಶ್ವಸಿಯಾಗಿದ್ದಾರೆ. ಅರವಿಂದ್ ಗೊಬ್ಬರವಾಡಿ ಬಂಧಿತ ಆರೋಪಿ .ಹಳ್ಳಿಖೆಡ್ ಗ್ರಾಮದ ಪ್ರಭುರವರಿಗೆ 50 ಸಾವಿರಕ್ಕೆ ಪಲ್ಸರ್ ಬೈಕ್ ಮಾರಿದ್ದಾರೆ.ವಾಹನದ ಪೇಪರ್ ಕೊಡದಿದ್ದಾಗ ಅರವಿಂದ್ ಗೊಬ್ಬರ್ವಾಡಿ ಬಗ್ಗೆ ಅನುಮಾನ ಬಂದಿದೆ.ನಂತರ ಪೊಲೀಸ್ ಠಾಣೆಯಲ್ಲಿ ತಿಳಿಸಿದಾಗ ಪಿಎಸ್ಐ ಕಾಶಿನಾಥ್ ಅರವಿಂದ್ ಕರೆದು ವಿಚಾರಿಸುತ್ತಾರೆ..ಪೊಲೀಸರ ಬಳಿ ಬೈಕ್ ಕದ್ದಿರುವುದಾಗಿ ಅರವಿಂದ್ ಒಪ್ಪಿಕೊಳ್ಳುತ್ತಾನೆ. ಚಿಟಗುಪ್ಪ […]

ಬೆಂಗಳೂರು ನಗರದಲ್ಲಿ ಅಂತರಾಷ್ಟೀಯ ಮಾದಕ ಜಾಲಕ್ಕೆ ಕೊನೆಯೆ ಇಲ್ಲದಂತ್ತಾಗಿದ್ದು, ಇಂದು ಸಿಸಿಬಿ ಅಧಿಕಾರಿಳು ನಡೆಸಿದ ಭರ್ಜರಿ ಕಾರ್ಯಾಚರಣೆ ವೇಳೆ ಇಬ್ಬರು ನೈಜೀರಿಯನ್ ಡ್ರಗ್ ಪೆಡ್ಲರ್ಸ್ ಗಳು ಸಿಕ್ಕಿಬಿದ್ದಿದ್ದಾರೆ. ರಾಮಮೂರ್ತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ಸ್ ಗಳನ್ನು ಬಂಧಿಸಲಾಗಿದ್ದು ವಿನ್ಸೆಂಟ್ ಹಾಗೂ ಜಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬರೋಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಕ್ಸ್ ಟಸಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೂಲತ […]

ಅವಧಿ ಮೀರಿದ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಎಸ್ ಟಿ ಬ್ಲಾಕ್ನಲ್ಲಿ ನಡೆದಿದೆ.ಸಿಲಂಬರಸನ್ ಎಂಬುವವರ ಮಗ ಲಚ್ಚನ್ (6ವರ್ಷ) ಅಸ್ವಸ್ಥ ಬಾಲಕನಾಗಿದ್ದಾನೆ. ಕಳೆದ ರಾತ್ರಿ ಎಕ್ಸಪೈರ್ ಆಗಿರುವ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿರುವ ಜೆ.ಎಸ್.ಮೆಡಿಕಲ್ ಶಾಪ್ನಲ್ಲಿ ಚಾಕಲೇಟ್ ಖರೀದಿ ಮಾಡಲಾಗಿದೆ. ನಂತರ ಚಾಕಲೇಟ್ ಸೇವಿಸುತ್ತಿದ್ದಂತೆ ಬಾಲಕ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ.ಅಸ್ವಸ್ಥ ಬಾಲಕನನ್ನ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು […]

‘ಮಿಸಸ್ ಕ್ವೀನ್ ಆಫ್ ಇಂಡಿಯಾ’, ದ ಕೀರೀಟ ತೊಟ್ಟ ಬೀದರ್ ನ ಬೆಡಗಿ. ಗಡಿ ಜಿಲ್ಲೆ ಬೀದರ್ ಬೆಡಗಿ ಅರುಣಾ ಪಾಟೀಲ 2021ನೇ ಸಾಲಿನ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗ್ಲೊಬಲ್ ಪ್ಲೆಜೆಂಟ್ಸ್ ನವದೆಹಲಿಯಲ್ಲಿ ಸಂಘಟಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಿಸಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯು ಸಾಂಪ್ರದಾಯಿಕ ಸೌಂದರ್ಯ, ಬುದ್ಧವಂತಿಕೆ ಹಾಗೂ ಸೂಕ್ಷ್ಮತೆ ಆಧಾರಿತ ಸ್ಪರ್ಧೆಯಾಗಿದ್ದು, ಜಗತ್ತಿಗೆ […]

ಅಪರಿಚಿತ ಮಹಿಳೆಯ ಶವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಅಯ್ಯನ ಕೆರೆಯಲ್ಲಿ ಪತ್ತೆಯಾಗಿದೆ.ಸುಮಾರು 55- 60 ವಯಸ್ಸಿನ ಮಹಿಳೆಯ ಅನುಮಾನಾಸ್ಪದವಾಗಿ ಸಾವನ್ನಪಿದ್ದಾರೆ.ಕಡೂರಿನಿಂದ ಸಖರಾಯಪಟ್ಟಣಕ್ಕೆ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಮಹಿಳೆ ಬಂದಿದ್ದು, ಮಹಿಳೆಯ ಗುರುತು ಪತ್ತೆಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.ಶವದ ಬಳಿ ಮಂಗಲ್ ದೀಪ್ ಶೋ ರೂಂ ಪರ್ಸ್ ಪತ್ತೆಯಾಗಿದೆ.ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ :ಆತ್ಮಹತ್ಯತೆಗೆ ಶರಣಾಗಿರುವ ಶಶಿಕಲಾ

Advertisement

Wordpress Social Share Plugin powered by Ultimatelysocial