ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ನಂಗಲಿ ಪೊಲೀಸರು ಯಶ್ವಸಿಯಾಗಿದ್ದಾರೆ.ಮುನಿರಾಜು, ಅಶ್ವಥ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 7 ಲಕ್ಷ ಬೆಲೆ ಬಾಳುವ 19 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ..ಕಳ್ಳರು ಕೋಲಾರ ಸೇರಿದಂತೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಮತ್ತಿತರ ಕಡೆ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ :ಕಾರು ಪಲ್ಟಿಹೊಡೆದು ಅಪಘಾತ
ಪ್ರಮುಖಸುದ್ದಿ
ಕಾರು ಪಲ್ಟಿಹೊಡೆದು ಅಪಘಾತ ಸಂಭವಿಸಿದ ಘಟನೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ದಿಂದಾ ಹೈದ್ರಾಬಾದ್ ಗೆ ತೆರಳುತ್ತಿದ್ದ ವೇಳೆ NH9 ಬಳಿ ನಡೆದಿದೆ. ಕಾರು ಚಾಲಕ ಎದುರು ಬರುತ್ತಿರುವ ಬಸ್ ನೀಂದ ಆಗುವ ಅಪಘಾತವನ್ನು ತಪ್ಪಿಸುವ ಸಂಧರ್ಬದಲ್ಲಿ ಕಾರನ್ನು ಬೇರೆಡೆಗೆ ತಿರಿಗಿಸುವಾಗ ಸಂಪೂರ್ಣವಾಗಿ ಪಲ್ಟಿ ಯಾಗಿದೆ. ಚಾಲಕನಿಗೆ ಎದೆಯ ಮೇಲೆ ಸ್ವಲ್ಪ ಗಾಯವಾಗಿದ್ದು ಇನ್ನುಳಿದ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದನ್ನೂ ಓದಿ:ಪೆಟ್ರೋಲ್ ಬೆಲೆಯಲ್ಲಿ 24 ರಿಂದ 25 – […]
ಮೊದಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರ್ವಜನಿಕರಿಗೆ ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್ – ಡಿಸೇಲ್ ಬೆಲೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ.ಇಂದೂ ಕೂಡಾ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 24 ರಿಂದ 25 ಪೈಸೆ ಹಾಗೂ ಡಿಸೇಲ್ ಬೆಲೆಯಲ್ಲಿ 30 ರಿಂದ 31 ಪೈಸೆಗಳಷ್ಟು ಏರಿಕೆಯಾಗಿದೆ.ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 87.85 ರೂಪಾಯಿಗಳಾಗಿದ್ದರೆ, ಲೀಟರ್ ಡಿಸೇಲ್ ಬೆಲೆ 78.03 ರೂಪಾಯಿಗಳಾಗಿದೆ. ಇನ್ನು […]
ಆಕಸ್ಮಿಕ ಬೆಂಕಿಯಿಂದ ಎರಡು ಟ್ರ್ಯಾಕ್ಟರ್ ಹಾಗೂ ರಾಗಿ ಹುಲ್ಲು ಬೆಂಕಿಗೆ ಆಹುತಿಯಾದ ಘಟನೆ ಗುಬ್ಬಿ ತಾಲೂಕಿನ ಕಿಟ್ಟ ಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೈಜಿನ್ ಸಬ್ ಎನ್ನುವವರಿಗೆ ಸೇರಿದ ರಾಗಿ ಹುಲ್ಲು ಇಂದು ಮಧ್ಯಾಹ್ನ ಆಕಸ್ಮಿಕ ಬೆಂಕಿಯಿಂದ 60 ಸಾವಿರಕ್ಕಿಂತ ಹೆಚ್ಚು ಬೆಲೆಬಾಳುವ ಹುಲ್ಲು ಸಂಪೂರ್ಣ ಸುಟ್ಟುಕರಕಲಾಗಿದೆ. ಸ್ಥಳಕ್ಕೆ ಅಗ್ನಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾಗಿ ಹುಲ್ಲು ಹೊಗೆಯಿಂದ ಕೂಡಿದ್ದು ಬಳಕೆಗೆ ಬರದಂತ ಸ್ಥಿತಿಗೆ ಬಂದಿದೆ. […]
ಡ್ರಗ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನುಬಂಧಿಸಿದ್ದಾರೆ. ಕೇರಳ ಮೂಲದ ಅನಗೇಶ್ ,ಎಂ ಡಿ ಫರೀಸ್ ಎಂಬಾತರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಅನಗೇಶ್ ,ಎಂ ಡಿ ಫರೀಸ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿಗಳ 1.3 ಲೀಟರ್ ಹ್ಯಾಶೀಶ್ ಆಯಿಲ್ ,2 […]
ಅಭಿಮಾನಿಗಳ ದಾಸ ದರ್ಶನ್ ನಾಯಕನಾಗಿ ಬೆಳ್ಳಿ ಪರದೆ ಮೇಲೆ ಮಿಂಚಿದ ಮೆಜೆಸ್ಟಿಕ್ ಸಿನಿಮಾ ತೆರೆ ಕಂಡು 19 ವರ್ಷಗಳು ಕಳೆದಿವೆ. ಫೆ. 8ರಂದು ಮೆಜೆಸ್ಟಿಕ್ ಚಿತ್ರ ತೆರೆ ಕಂಡಿತ್ತು. ದರ್ಶನ್ ಅವರ ಸ್ಟೈಲ್ ಹಾಗೂ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಮೆಜೆಸ್ಟಿಕ್ ಸಿನಿಮಾ 19 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಭಿಮಾನಿಗಳು ದರ್ಶನ್ ಅವರ ಮನೆಗೆ ಹೋಗಿ ಸನ್ಮಾನ ಮಾಡಿದ್ದಾರೆ. ನೆಚ್ಚಿನ ನಟನಿಗೆ ಹಾರ ಹಾಕಿ,ಹೂ ಗುಚ್ಛ ಕೊಟ್ಟು ಸಂಭ್ರಮಿಸಿದ್ದಾರೆ. ನಂತರ […]
ಜ.22ರಂದು KSRTC ಚಾಲಕನಿಗೆ ಚಾಕು ಇರಿದು ಪರಾರಿಯಾಗಿದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದಂತ ವೇಳೆಯಲ್ಲಿ, ಪರಾರಿಯಾಗಲು ಯತ್ನಿಸಿ ಪೊಲೀಸರ ಗುಂಡೇಟಿಗೆ ನರಳಿದ್ದಾರೆ. ಆರೋಪಿಗಾಗಿ ಬಲೆ ಬಿಸಿದ್ದ ಬಿಳಿಕೆರೆ ಠಾಣೆ ಪೊಲೀಸರು ಆರೋಪಿಗಳ ಇರುವ ಖಚಿತ ಮಾಹಿತಿಯನ್ನು ಪಡೆದು ಜಯಂತ್, ವಿಘ್ನೇಶ್ ಹಾಗೂ ದೀಪಕ್ ಬಂಧಿಸಿ ಕರೆದೊಯ್ಯುತ್ತಿದ್ದರು. ಹುಣಸೂರು ತಾಲೂಕಿನ ಹಂದನಹಳ್ಳಿ ಗೇಟ್ ಬಳಿ ಕರೆದೊಯ್ಯುತ್ತಿದ್ದಂತ ವೇಳೆಯಲ್ಲಿ ಆರೋಪಿ ಜಯಂತ್, ಹೆಡ್ ಕಾನ್ಸ್ ಟೇಬಲ್ ರವಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. […]
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದ್ದು, ಸಿನಿಮೀಯ ರೀತಿ ಜಯನಗರ ಠಾಣೆ ಪೊಲೀಸರು ಮನೆಗಳ್ಳನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ದೇವರ ಬೀಸನಳ್ಳಿ ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿ, ಕಳೆದ ಒಂದು ವಾರದಲ್ಲಿ ನಾಲ್ಕು ಮನೆ ದೋಚಿ ಪರಾರಿಯಾಗಿದ್ದ ಖದೀಮ ಜಯನಗರ ಅಪಾರ್ಟ್ಮೆಂಟ್ ಒಂದರ ಬಳಿ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಬಂಧಿಸಲು ಮುಂದಾದ ಖಾಕಿ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲು ಮುಂದಾಗಿದ್ದಾನೆ, ಕೂಡಲೇ ಇನ್ಸ್ಪೆಕ್ಟರ್ […]
ಮನೆ ಮಾಲೀಕ ಮತ್ತು ಕುಟುಂಬಸ್ಥರನ್ನು ಕೂಡಿ ಹಾಕಿ ಮನೆ ದರೋಡೆ ಮಾಡಿದ್ದ 7 ಮನೆ ಕೆಲಸದವರನ್ನು ಕೋರಮಂಗಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮದನ್ ಮೋಹನ್ ರೆಡ್ಡಿ ಎಂಬುವವರ ಮನೆಯಲ್ಲಿ ಕೆಲಸ ಮಾಡಿಕೊಂಡೇ ಚಿನ್ನಕ್ಕಾಗಿ ಸ್ಕೆಚ್ ಹಾಕಿದ್ದ ನೇಪಾಳ ಮೂಲದ ಟಿಕಾ ರಾಮ್, ಪ್ರೇಮ್ ಬಹದ್ದೂರ್, ಧನಾ ಬಿಸ್ಟಾ, ಜನಕ್ ಕುಮಾರ್,ಕಮಲ್ಜಾಜೋ, ಜನಕ್ ಜೈಶಿ, ಸುನೀಲ್ ಬಹದ್ದೂರ್ 60 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ […]
ಬೆಳ್ಳಂಬೆಳಗ್ಗೆ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಭಾರಿ ಗಾತ್ರದ ವಾಹನವೊಂದು ಅಂಡರ್ಪಾಸ್ನಲ್ಲಿ ಸಿಲುಕಿಕೊಂಡಿದೆ.ದೊಡ್ಡ ಗಾತ್ರದ ವಾಹವನ್ನು ಅಂಡರ್ಪಾಸ್ ಮೂಲಕ ಚಲಾಯಿಸಲು ಚಾಲಕ ಪ್ರಯತ್ನಿಸಿರುವುದೇ ಘಟನೆಗೆ ಕಾರಣವಾಗಿದೆ. ಚಾಲಕನ ಅಜಾಗರೂಕತೆಯಿಂದ ಈ ಅವಘಡ ನಡೆದಿದೆ. ಮೆಟ್ರೋ ನಿಲ್ದಾಣದ ಅಂಡರ್ಪಾಸ್ನಲ್ಲಿ ಸಿಲುಕಿದ ಭಾರಿ ಗಾತ್ರದ ವಾಹನ ಬೆಳಗಿನ ಜಾವ 3.30 ರಿಂದ 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಮೆಟ್ರೋ ಅಧಿಕಾರಿಗಳು ವಾಹನವನ್ನು ತೆರವುಳಿಸುತ್ತಿದ್ದಾರೆ. TN-01 AQ-9079 ನಂಬರಿನ […]