ಬದಲಾವಣೆ ಜಗತ್ತಿನ ನಿಯಮ ಬದಲಾವಣೆಗೆ ಹೊಂದಕೊಂಡು ಮುಂದೆ ಹೋದವರು ಯಶಸ್ಸು ಕಾಣುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ….ಬೆಳಗಾವಿಯ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು,ಅರ್ಥ ಮತ್ತು ಪುರುಷಾರ್ಥ ಮೊದಲಿತ್ತು. ಪುರುಷಾರ್ಥ ಬದಲಾಗಿ ಸ್ತ್ರೀ ಆರ್ಥ ಕೂಡ ಆಗಿದೆ.ಸಮಾಜವನ್ನ ಸಿದ್ಧ ಮಾಡುವ ಕೆಲಸ ಎಲ್ಲರೂ ಮಾಡಬೇಕು.ಉದ್ಯೋಗ ಮೇಳದಲ್ಲಿ ಬಂದ 78 ಕಂಪನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸ್ವಾಭಿಮಾನದ ವ್ಯಕ್ತಿತ್ವ ನಿರ್ಮಿಸುವ ಕಾರ್ಯವನ್ನ ಕಂಪನಿಗಳು ಮಾಡುತ್ತಿವೆ..ಕಂಪನಿಗಳ ಮುಖ್ಯಸ್ಥರಲ್ಲಿ ಮನವಿ ಯುವಕರನ್ನ ಬೆಳಿಸಬೇಕು.ವೈಜ್ಞಾನಿಕ ಉದ್ಯೋಗ ಮೇಳ ಇದಾಗಿದೆ. ಯಾವುದೇ ರಾಜ್ಯದಲ್ಲಿ ಎಂಪ್ಲಾಯಮೆಂಟ್ ಪಾಲಿಸಿ ಇಲ್ಲ.ರಾಜ್ಯದಲ್ಲಿ ಎಂಪ್ಲಾಯಮೆಂಟ್ ಪಾಲಿಸಿ ಜಾರಿಗೆ ತರಲಾಗುತ್ತಿದೆ.ಪಬ್ಲಿಸಿಟಿಗಾಗಿ ಈ ಮೇಳವನ್ನ ಆಯೋಜಿಸಿಲ್ಲ ನಮ್ಮ ಸರಕಾರ ರಾಜ್ಯದ ಜನರ ಭವಿಷ್ಯ ನಿರ್ಮಿಸುವ ಸರಕಾರ ನಮ್ಮದಾಗುತ್ತದೆ ಎಂದು ಹೇಳಿದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada