ಪೋರ್ಬ್ಸ್ ಮ್ಯಾಗಜೀನ್‌ನಲ್ಲಿ ರಾಕಿಂಗ್ ಸ್ಟಾರ್  ಹವಾ

ನಾನ್‌ ಬರೋವರೆಗೂ ಮಾತ್ರ ಬೇರೆವ್ರ ಹವಾ  ನಾನ್‌ ಬಂದ್‌ ಮೇಲೆ ನಂದೆ ಹವಾ ಈ ಮಾತು ಈಗ ಸತ್ಯವಾಗಿದೆ ಎಸ್‌ ಈ ಡೈಲಾಗ್‌ ರಾಕಿಂಗ್‌ ಸ್ಟಾರ್‌ ಯಶ್‌ ಅವರದ್ದು  ‘ಕೆಜಿಎಫ್’ ನಂತರ ಯಶ್‌ ನಸೀಬೆ ಬದಲಾಗದೆ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರೋದು ಎಲ್ಲಾರಿಗೂ ಗೊತ್ತಿರೊಹಂತದ್ದು  ‘ಕೆಜಿಎಫ್’ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಯಶ್ ಇದೀಗ ವಿಶೇಷ ಗೌರವೊಂದಕ್ಕೆ ಪಾತ್ರರಾಗಿದ್ದಾರೆ. ನಟ ಯಶ್‌ ಪೋರ್ಬ್ಸ್ ಮ್ಯಾಗಜೀನ್‌ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು,  ಫೋರ್ಬ್ಸ್ ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ನಟ ಎಂಬ ಖ್ಯಾತಿಗೆ ನಟ ಯಶ್ ಪಾತ್ರರಾಗಿದ್ದಾರೆ.

ಫೋರ್ಬ್ಸ್ ಮ್ಯಾಗಜೀನ್ ಈ ಬಾರಿ ದಕ್ಷಿಣ ಭಾರತ ಸಿನಿಮಾಗಳ ಕತೆಗಳು ಬದಲಾದ ರೀತಿ, ದಕ್ಷಿಣ ಭಾರತದ ಸಾಮಾಜಿಕ ಜಾಲತಾಣ ಸೆಲೆಬ್ರಿಟೀಸ್ ಹೀಗೆ ದಕ್ಷಿಣ ಭಾರತ ಮನೊರಂಜನಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಸಂಚಿಕೆ ಹೊರತಂದಿದ್ದು, ದಕ್ಷಿಣ ಭಾರತದ ಸಿನಿರಂಗದ ಪ್ರತಿನಿಧಿಯಂತೆ ನಟ ಯಶ್‌ ಪೋಟೋ ಮುಖಪುಟದಲ್ಲಿ ಮುದ್ರಿಸಿದ್ದಾರೆ.ನಟ ಯಶ್‌ ಬಗ್ಗೆ ಫೋರ್ಬ್ಸ್ ಮುಖಪುಟ ಲೇಖನವನ್ನೂ ಪ್ರಕಟಿಸಿದ್ದು, ‘ಫೀಲ್ಡ್ಸ್ ಆಫ್ ಗೋಲ್ಡ್’ ಎಂಬ ಹೆಡ್‌ಲೈನ್ ಸಹ ನೀಡಿದೆ. ‘ಮೈಸೂರಿನಿಂದ ಬೆಂಗಳೂರಿಗೆ ಬಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಜನಪ್ರಿಯ ನಟರಾದ ಯಶ್‌ ಜೀವನದ ಬಗ್ಗೆ ಆಳವಾದ ಮಾಹಿತಿ” ಎಂದು ಫೋರ್ಬ್ಸ್ ಹೇಳಿದೆ. ನಟ ಯಶ್‌ ಜೀವನ ಪಯಣ, ಎದುರಿಸಿದ ಅಡೆ-ತಡೆಗಳು, ಅವಕಾಶಗಳು, ‘ಕೆಜಿಎಫ್’ ಅವರ ಜೀವನದಲ್ಲಿ ತಂದ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಫೋರ್ಬ್ಸ್ ಜೊತೆ ಮಾತನಾಡಿದ್ದಾರೆ ಯಶ್.

 

ಪೋರ್ಬ್ಸ್‌ ಮ್ಯಾಗಜೀನ್ನಲ್ಲಿ  ಸಖತ್ ಪೋಸು ಕೊಟ್ಟು ಮಿಂಚಿದ್ದಾರೆ ಯಶ್. ನಟ ಯಶ್ ತಮ್ಮ ಲುಕ್‌ ಬದಲಾಯಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮುಂಬೈಗೆ ಭೇಟಿ ನೀಡಿರುವ ಯಶ್, ಪ್ರಸಿದ್ಧ ಹೇರ್ ಸ್ಟೈಲಿಶ್ ಆಲಿಮ್ ಹಕೀಮ್ ಅನ್ನು ಭೇಟಿ ಮಾಡಿ ಹೇರ್‌ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಯಶ್‌ ಹೊಸ ಹೇರ್‌ಸ್ಟೈಲ್‌ನಲ್ಲಿ ಮುಂಬೈನಲ್ಲಿ ಓಡಾಡುತ್ತಿರುವ ಪೋಟೋಸ್ ಸಖತ್ ವೈರಲ್ ಆಗಿವೆ. ಕೆಲವು ದಿನಗಳ ಹಿಂದೆ ಜಾಹೀರಾತು ಚಿತ್ರೀಕರಣಕ್ಕಾಗಿ ನಟ ಯಶ್ ಮುಂಬೈಗೆ ಭೇಟಿ ನೀಡಿದ್ರು, ಒಟ್ಟಿನಲ್ಲಿ ಯಶ್‌ ಸಕತ್‌ ಬ್ಯೂಸಿಮ್ಯಾನ್‌ ಅಂತಾನೇ ಹೇಳಬೋದು.

Please follow and like us:

Leave a Reply

Your email address will not be published. Required fields are marked *

Next Post

BSYರನ್ನು ನಾನು ತಡರಾತ್ರಿ ಭೇಟಿ ಹೆಚ್‌ .ಡಿ.ಕೆ ಸಾಬೀತುಪಡಿಸಿದರೆ; ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ;ಸಿದ್ದರಾಮಯ್ಯ

Wed Oct 13 , 2021
ಬಿ.ಎಸ್. ಯಡಿಯೂರಪ್ಪ ಅವರನ್ನು ನಾನು ತಡರಾತ್ರಿ ಭೇಟಿ ಮಾಡಿರುವುದನ್ನು ಹೆಚ್‌ .ಡಿ. ಕುಮಾರಸ್ವಾಮಿ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರು ತಡರಾತ್ರಿ ಭೇಟಿ ಮಾಡಿದ್ದೇ ಆದಾಯ ತೆರಿಗೆ ದಾಳಿಗೆ ಮೂಲಕ ಕಾರಣ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ […]

Advertisement

Wordpress Social Share Plugin powered by Ultimatelysocial