KOLLYWOOD:ತಳಪತಿ ವಿಜಯ್ ತಾಯಿ ಶೋಭ ಜತೆಗಿನ ಹೊಸ ಫೋಟೋ ವೈರಲ್;

ಚೆನೈ:ಕಾಲಿವುಡ್​ನ ನಟ ದಳಪತಿ ವಿಜಯ್ ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದು , ಅವರು ಪಡೆದಿರುವ ಅಪಾರ ಅಭಿಮಾನಿ ಸಂಖ್ಯೆ ಬೇರೆ ನಟರಿಗೆ ಹೋಲಿಸಿದರೆ ತುಸು ಹೆಚ್ಚು ಎಂದೇ ಹೇಳಬೇಕು . ಹೀಗೆ , ಚಿತ್ರರಂಗದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ವಿಜಯ್ ಜನಪ್ರಿಯತೆಯನ್ನು ಗಳಿಸಿದ್ದರೂ , ಅವರ ತಂದೆ , ನಿರ್ದೇಶಕ ಎಸ್‌ಎ ಚಂದ್ರಶೇಖರ್ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು , ನಟನ ಈ ಯಶಸ್ಸಿಗೆ ಅವರ ಹೆತ್ತವರ ಕೊಡುಗೆ ತುಂಬಾನೆ ಇದೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ . ಹೀಗಿದ್ದರೂ , ನಟ ವಿಜಯ್ ಮತ್ತು ಅವರ ತಂದೆಯ ನಡುವಿನ ಇತ್ತೀಚಿನ ಕಾನೂನು ಘಟನೆಯು ಅವರ ಸಂಬಂಧವನ್ನು ಹದಗೆಡಿಸಿತು ಎಂಬುದು ಎಲ್ಲರಿಗೂ ನೋವುಂಟು ಮಾಡಿದೆ .

ಹೌದು , ತಮಿಳು ಸೂಪರ್‌ಸ್ಟಾರ್ ವಿಜಯ್ ಅವರು ತಮ್ಮ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ಅವರ ತಾಯಿ ಶೋಬಾ ಸೇರಿದಂತೆ 11 ಜನರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು . ನಟ ವಿಜಯ್ ಅವರ ತಂದೆ ಮತ್ತು ಅವರ ಅಭಿಮಾನಿಗಳ ಸಂಘದ ಸದಸ್ಯರಾದ ‘ವಿಜಯ್ ಮಕ್ಕಳ್ ಇಯಕ್ಕಂ’ನ 11 ಮಂದಿ ಚುನಾವಣಾ ಸಮಯದಲ್ಲಿ ನಟನ ಹೆಸರು ಮತ್ತು ಛಾಯಾಚಿತ್ರಗಳನ್ನು ಬಳಸಲು ಪ್ರಯತ್ನಿಸಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ವಿಜಯ್ ಸಿವಿಲ್ ಕೇಸ್ ಹಾಕಿದ್ದರು . ಹೀಗಾಗಿ , ತಮ್ಮ ತಾಯಿ – ತಂದೆಯ ಹಾಗೂ ನಟ ವಿಜಯ್ ಅವರ ನಡುವಿನ ಸಂಬಂಧ ಅಷ್ಟೇನು ಚೆನ್ನಾಗಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದ್ದವು .

ಏತನ್ಮಧ್ಯೆ , ವಿಜಯ್ ಅವರು ತಮ್ಮ ತಾಯಿ ಶೋಭ ಚಂದ್ರಶೇಖರ್ ಅವರ ಒಟ್ಟಿಗೆ ಇರುವ ಇತ್ತೀಚಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ ತೊಡಗಿದೆ . ಹಾಗಾಗಿ , ನಟನ ಈ ಸಂತೋಷದ ಫೋಟೋ , ಅವರ ಕುಟುಂಬ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇಟ್ಟು ಮತ್ತೆ ಒಂದಾಗಿದ್ದಾರೆ ? ಎಂಬ ಅನುಮಾನಗಳನ್ನು ಸೃಷ್ಟಿಸಿವೆ . ಹೀಗಿದ್ದರೂ , ನಟ ತಮ್ಮ ತಂದೆಯೊಂದಿಗೆ ಇನ್ನೂ ಅವರ ಭಿನ್ನಾಭಿಪ್ರಾಯವನ್ನು ಮುಂದುವರಿಸಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ . ಆದರೆ , ತಾಯಿ ಜತೆ ಮತ್ತೆ ಸೇರಿಕೊಂಡ ನಟ , ಅವರ ತಂದೆಯೊಂದಿಗೂ ಶೀಘ್ರದಲ್ಲೇ ಮತ್ತೆ ಚೆನ್ನಾಗಿರುತ್ತಾರೆ ಎಂಬುದು ಅಭಿಮಾನಿಗಳ ಆಸೆಯಾಗಿದೆ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BENGALURU:ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಲ್ಸನ್‍ಗಾರ್ಡನ್ ಠಾಣೆ;

Tue Jan 25 , 2022
ಬೆಂಗಳೂರು,ಜ.25-ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದಿಣ್ಣೂರು ಗ್ರಾಮದ ನಿವಾಸಿ ನರಸಿಂಹಪ್ಪ(60) ಬಂಧಿತ ವ್ಯಕ್ತಿ. ಈತ ಶಾಂತಿನಗರದ ಬಸ್ ಡಿಪೋ ಸಮೀಪ ಚೀಲದಲ್ಲಿ ಜಿಂಕೆ ಕೊಂಬುಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಿಂಹಪ್ಪನನ್ನು ಬಂಸಿ 9 […]

Advertisement

Wordpress Social Share Plugin powered by Ultimatelysocial