ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಡಾ. ಹೆಚ್.ನರಸಿಂಹಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 17 ನೇ ಪುಣ್ಯಸ್ಮರಣೆ. ಆಚರಣೆ ಮಾಡಿದರು.ಹೆಸರಾಂತ ಡಾ. ಹೆಚ್.ನರಸಿಂಹಯ್ಯ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು ಆಗಿದ್ದರುಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಚಿರಂಜೀವಿ,ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಘಟಕ ಅದ್ಯಕ್ಷರು ಮಹ್ಮದ್ ರಫಿ ,ಚಿನ್ನಪ್ಪ ,ಮುನ್ನಾ ಮುದಗಲ್, ಹುಲಗಪ್ಪ, ಶಿವು ರಾಜ್ ತಳವಾರ, ಬಸವರಾಜ್ ನಾಗರಾಜ್ , ಶೀಲಾ ಹಾಳಕೇರಿ ಕಮಲಮ್ಮ , ಪ್ರೇಮ, ಬಂಗರಮ್ಮ, ಅಂಜಲಿಮ್ಮ, ಸುನಂದಾ , ಪೂರ್ಣಿಮಾ ಸೇರಿದಂತೆ ಮುಂತಾದವರು ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada