ಬೆಳಗಿನ ಜಾವದಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆನಾಡು ಚಿತ್ರದುರ್ಗದ ಜನರು ನಲುಗಿಹೋಗಿದ್ದಾರೆ.ನಗರದ ಹಲವಡೆ ರಸ್ತೆಗಳೆಲ್ಲಾ ನೀರಿನಲ್ಲಿ ಮುಳುಗಡೆಯಾಗಿವೆ. ವಾಹನಸವಾರರು ಹರಸಾಹಸ ಪಡುವಂತಾಗಿದೆ. ಅಲ್ದೇ, ತೀವ್ರ ಮಳೆಯಿಂದಾಗಿ ಮಲ್ಲಾಪುರದ ಕೆರೆ ಸಹ ಭರ್ತಿಯಾಗಿ ಒಂದೇ ವರ್ಷದಲ್ಲಿ ಸತತ ಐದನೇ ಬಾರಿ ಕೋಡಿ ಬಿದ್ದಿದೆ.ಹೀಗಾಗಿ ಕೆರೆಯ ಅಕ್ಕ ಪಕ್ಕದಲ್ಲಿರುವ ಜಮೀನುಗಳು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿವೆ.ಜೊತೆಗೆ ತುರುವನೂರು ರಸ್ತೆಯ ರೈಲ್ವೆ ಅಂಡರ್ ಪಾಸ್ ಸೇರಿದಂತೆ ಹಲವು ಭಾಗಗಳಲ್ಲಿ ಜನನಿಬಿಡ ಪ್ರದೇಶಗಳಿಗೆ ಮಳೆ ನೀರು ನುಗ್ಗಿರುವ ಪರಿಣಾಮ.
ಇದನ್ನೂ ಓದಿ:ಧ್ರುವ ಕಟೋಟ್ ಮುಂದೆ 101 ತೆಂಗಿನಕಾಯಿ ಹೊಡೆದ ಅಭಿಮಾನಿಗಳು