ಮಾನವೀಯತೆ ಸೇವೆಯಿಂದ ಜನ ಮತಾಂತರಗೊಳ್ಳುತ್ತಾರೆ : ಗುಲಾಂ ನಬಿ ಅಜಾದ್

ಉದಯಂಪುರಂ,ಡಿ.26- ಮಾನವೀಯತೆಯ ಸೇವೆ ಮಾಡುವ ಧರ್ಮವನ್ನು ಕಂಡಾಗ ಜನರು ಮತಾಂತರಗೊಳ್ಳುತ್ತಾರೆ ಹೊರತು ಭಯದಿಂದಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.

ಜಮ್ಮುಕಾಶ್ಮೀರದ ಉದಯಂಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರಾಜ್ಯಗಳಲ್ಲಿ ಪರಿಚಯಿಸಲಾಗುತ್ತಿರುವ ಮತಾಂತರ ವಿರೋ ಮಸೂದೆಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಯಾರಾದರೂ ಜನರನ್ನು ಮತಾಂತರ ಮಾಡುತ್ತಿದ್ದರೆ ಕತ್ತಿಯನ್ನು ಬಳಸುತ್ತಿಲ್ಲ, ಅದು ವ್ಯಕ್ತಿಗಳ ಒಳ್ಳೆಯ ಕೆಲಸ ಮತ್ತು ಅವರ ಪಾತ್ರ ಮತಾಂತರಕ್ಕೆ ಪ್ರಭಾವಿಸುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ನಡೆದ ಚಳಿಗಾಲದ ಅವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಲು ರಾಜ್ಯದಲ್ಲಿ ಮತಾಂತರ ವಿರೋ ಮಸೂದೆಯನ್ನು ಪ್ರಸ್ತಾಪಿಸಲಾಗುತ್ತಿದೆ ಪ್ರತಿಪಕ್ಷಗಳು ಆರೋಪಿಸಿದ ನಂತರ ಅಜಾದ್ ಅವರಿಂದ ಈ ಹೇಳಿಕೆ ಬಂದಿದೆ.

ಯಾವುದೇ ವ್ಯಕ್ತಿಯನ್ನು ತಪ್ಪು ನಿರೂಪಣೆ, ಬಲ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಅಥವಾ ಮದುವೆಯ ಮೂಲಕ ನೇರವಾಗಿ ಅಥವಾ ಬೇರೆ ಯಾವುದೇ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸಬಾರದು ಅಥವಾ ಮತಾಂತರಿಸಲು ಪ್ರಯತ್ನಿಸಬಾರದು ಎಂದು ಈ ಕಾಯ್ದೆ ಹೇಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಧಿಕಾ-ಯಶ್​ಗಾಗಿ ಸಾಂಟಾ ಕ್ಲಾಸ್​ ಆದ ಯಥರ್ವ್​​; ಕ್ಯೂಟ್​ ಆಗಿ ನಕ್ಕ ಆಯ್ರಾ

Sun Dec 26 , 2021
ಯಶ್​ ಹಾಗೂ ರಾಧಿಕಾ ಪಂಡಿತ್​ ಮನೆಯಲ್ಲಿ ಚಿಕ್ಕದಾಗಿ ಕ್ರಿಸ್​ಮಸ್​ ಟ್ರೀ ಒಂದನ್ನು ಇಡಲಾಗಿದೆ. ಈ ಮರಕ್ಕೆ ಚೆಂದದ ಅಲಂಕಾರ ಮಾಡಲಾಗಿದೆ. ಈ ಫೋಟೋಗೆ ರಾಧಿಕಾ ಚೆಂದದ ಕ್ಯಾಪ್ಶನ್​ ನೀಡಿದ್ದಾರೆ.ಇಡೀ ವಿಶ್ವಾದ್ಯಂತ ಕ್ರಿಸ್​ಮಸ್​ ಆಚರಣೆ ಜೋರಾಗಿ ನಡೆದಿದೆ. ಕೊವಿಡ್​ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿರುವುದರಿಂದ ಕೆಲ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಈ ಹಬ್ಬ ಆಚರಣೆ ಮಾಡಲಾಗಿದೆ. ಕೇವಲ ಕ್ರೈಸ್ತ ಧರ್ಮದವರು ಮಾತ್ರವಲ್ಲದೆ, ಹಿಂದು ಹಾಗೂ ಮುಸ್ಲಿಂ ಸಮುದಾಯದವರೂ ಈ ಹಬ್ಬವನ್ನು ಸರಳವಾಗಿ […]

Advertisement

Wordpress Social Share Plugin powered by Ultimatelysocial