ಸೆಕ್ಸ್​ಗೆ ಒತ್ತಾಯಿಸುತ್ತಿದ್ದ ಗೆಳೆಯನ ತಲೆ ಮೇಲೆ ಕಲ್ಲು ಎತ್ತಾಕಿ ಕೊಂದ

ದೆಹಲಿ: ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ಗೆಳೆಯನನ್ನ ಕೊಲೆ ಮಾಡಿದ ಯುವಕ ಜೈಲು ಸೇರಿದ್ದಾನೆ. ರಾಜಧಾನಿ ದೆಹಲಿಯ ಮಯೂರ ವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.

monu
monu

 

ಭರತ್ ಗೆಳೆಯನಿಂದ ಕೊಲೆಯಾದ ಯುವಕ. ಮಯೂರ ವಿಹಾರ ಠಾಣಾ ವ್ಯಾಪ್ತಿಯ ತ್ರಿಲೋಕಪುರಿಯ ನಿವಾಸಿ ಮೋನು ಹಾಗೂ ಭರತ್ ನಡುವೆ ಸ್ನೇಹವಿತ್ತು. ಮೃತ ಭರತ್ ಗೆಳೆಯ ಮೋನುಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನು. ಇದರಿಂದ ಕೋಪಗೊಂಡ ಮೋನು ಗೆಳೆಯನನ್ನು ಕೊಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಇಂದು ಸಂಜೆ ಸುಮಾರು 4.30ಕ್ಕೆ ಪ್ಯಾಟ್ರೋಲಿಂಗ್ ವೇಳೆ ತ್ರಿಲೋಕಪುರಿ ಬಳಿ ಪೊಲೀಸರ ಕಣ್ಣಿಗೆ ಮೋನು ಕಂಡಿದ್ದಾನೆ. ಮೋನು ಬಟ್ಟೆ, ಕೈ ರಕ್ತಮಯವಾಗಿದ್ದರಿಂದ ಅನುಮಾನಗೊಂಡ ಪೊಲೀಸರು ತಡೆದು ಆತನನ್ನು ವಿಚಾರಿಸಿದ್ದಾರೆ. ಆಗ ಮೋನು ಗೆಳೆಯ ಭರತ್ ನನ್ನು ಕೊಲೆ ಮಾಡಿ ಬಂದಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೇ ಮೋನುನನ್ನ ವಶಕ್ಕೆ ಪಡೆದುಕೊಂಡು ಠಾಣೆಗೆ ವಿಷಯ ತಿಳಿಸಿ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

ಪೊಲೀಸರ ತನಿಖೆಗೆ ಸಹಕರಿಸಿದ ಮೋನು, ಕೊಲೆ ನಡೆದ ಸ್ಥಳ ಮತ್ತು ಮೃತದೇಹ ಇರೋ ಜಾಗದ ಬಗ್ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳದ ಪರಿಶೀಲನೆ ನಡೆಸಿ, ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ…

ಭರತ್ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತಿದ್ದನು. ಇಬ್ಬರ ನಡುವೆ ಹಣಕಾಸಿನ ವ್ಯವಹಾರದ ಮನಸ್ತಾಪ ಉಂಟಾಗಿತ್ತು. ಸದ್ಯ ಕೊಲೆ ಮಾಡಿರೋದನ್ನ ಆರೋಪಿ ಮೋನು ಒಪ್ಪಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ತೆಲ್ಕೂರ್ ಸೂಚನೆ

Tue Mar 23 , 2021
ಸೇಡಂ : ಗುತ್ತಿಗೇದಾರರು ಉತ್ತಮ ಹಾಗೂ ದೀರ್ಘಕಾಲ ಬಾಳಿಕೆ ಬರುವ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು. ಕಳಪೆ ಮಾಡುತ್ತಿರುವ ಮಾಹಿತಿ ಬಂದಲ್ಲಿ ಲೈಸನ್ಸ್ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಡಿಸಿಸಿ ಬ್ಯಾಂಕ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಎಚ್ಚರಿಕೆ ನೀಡಿದರು. ಪಟ್ಟಣದ ಚಿಂಚೋಳಿ ಕ್ರಾಸ್ ನಿಂದ ಅಗ್ಗಿ ಬಸವೇಶ್ವರ ಕಾಲೋನಿ ವರೆಗೂ ನಡೆಯುತ್ತಿರು ಚತುಷ್ಪಥ ರಸ್ತೆ ಕಾಮಗಾರಿ ವಿಕ್ಷಣೆ ಮಾಡಿ, […]

Advertisement

Wordpress Social Share Plugin powered by Ultimatelysocial