ಕೊರೋನ ವೈರಸ್ನ ಓಮಿಕ್ರಾನ್ ರೂಪಾಂತರದ BA.2 ಉಪಪ್ರಬೇಧವು ವೇಗವಾಗಿ ಹರಡುವುದು ಮಾತ್ರವಲ್ಲದೆ ಹೆಚ್ಚು ತೀವ್ರವಾದ ಸೋಂಕು ಉಂಟುಮಾಡಬಹುದು ಎಂದು ಪ್ರಯೋಗಾಲಯದ ಅಧ್ಯಯನವೊಂದು ತಿಳಿಸುತ್ತಿದೆ. ಬಯೋರಿಕ್ಸ್ವಿನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಸಂಶೋಧನೆಯ ಈ ಅಂಶಗಳು ಇನ್ನೂ ಉನ್ನತ ಹಂತದ ವಿಶ್ಲೇಷಣೆಗೆ ಒಳಗಾಗಿಲ್ಲ. BA.2 ಉಪ-ವ್ಯತ್ಯಯವು ಕೊರೊನಾ ವೈರಸ್ ನ ಹಳೆಯ ರೂಪಾಂತರಗಳಂತೆ ಗಂಭೀರವಾದ ಅನಾರೋಗ್ಯ ಉಂಟುಮಾಡುವ ಸಾಮರ್ಥ್ಯ ಹೊಂದಿರಬಹುದು ಎಂದು ಈ ಅಧ್ಯಯನ ತೋರಿಸುತ್ತದೆ. BA.2 ರೂಪಾಂತರವು BA.1ಗಿಂತ ಹೆಚ್ಚು ಹರಡುತ್ತದೆ […]
ನಿಮಗೆ ಸೇರದ ಒಂದು ಆಹಾರ ತಿಂದರೆ ಸಾಕು, ಆ ದಿನ ಪೂರ್ತಿ ತಲೆ ನೋವಿನಿಂದ ಬಳಲಬೇಕಾಗುತ್ತದೆ. ಕೆಲವರಿಗೆ ತಲೆನೋವಿನಿಂದ ವಾಂತಿ ಕೂಡ ಉಂಟಾಗುವುದು.ಆದ್ದರಿಂದ ಮೈಗ್ರೇನ್ ಸಮಸ್ಯೆ ಇರುವವರು ಈ ಬಗೆಯ ಆಹಾರಗಳನ್ನು ದೂರ ಇಡಬೇಕು:ನೀವು ಕಾಫಿ ಹೆಚ್ಚಾಗಿ ಕುಡಿದರೆ ಅಥವಾ ಕೆಫೀನ್ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ತಲೆ ನೋವು ಹೆಚ್ಚಾಗುವುದು.ತಲೆನೋವು ಬಂದಾಗ ಕೆಲವರು ಟೀ ಅಥವಾ ಕಾಫಿ ಕುಡಿದರೆ ರಿಲೀಫ್ ಆಗುತ್ತದೆ ಎಂದು ಕುಡಿಯತ್ತಾರೆ, ಆದರೆ ಹೆಚ್ಚು […]
ನೂರಾರು ಕನಸುಗಳನ್ನು ಹೊತ್ತುಕೊಂಡು, ಬದುಕನ್ನು ಬೇಕಾದ ಸ್ತರದಲ್ಲಿ ರೂಪಿಸಿಕೊಳ್ಳಬಹುದೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ತಾಯ್ನಾಡನ್ನು ತೊರೆದು ಬರುವ ಉದ್ಯೋಕಾಂಕ್ಷಿಗಳ ಕತೆ ವ್ಯಥೆಗಳ ಒಟ್ಟು ಸಂಕಲನವೇ “ದ್ವೀಪವ ಬಯಸಿ”. “ಇಷ್ಟು ವಿಶಾಲ ಲೋಕವಿರುವಾಗ ನಾವೊಂದು ನೀರಿನ ಗುಳ್ಳೆಯೊಳಗೆ ಬದುಕು ಸವೆಸಬೇಕೇ? ದಿನಬೆಳಗಾದರೆ ಆ ಗುಳ್ಳೆ ಒಡೆಯುತ್ತದೆಂಬ ಅಂಜಿಕೆಯಲ್ಲಿ ಕಾಲ ಹಾಕಬೇಕೇ? ಯಾವ ಕಾರಣಕ್ಕಾಗಿ ಪರಿಮಿತಿಯ ಜೀವನ ಸಾಗಿಸಬೇಕು? ಯಾವ ಕಾರಣಕ್ಕಾಗಿ ಉದ್ಯೋಗವೆನ್ನುವುದು ಮುಸ್ಸಂಜೆಯ ನೆರಳಿನಂತೆ ನಮಗಿಂತಲೂ ಉದ್ದವಾಗಿ ಬೆಳೆಯಬೇಕು?” ಕಥಾ ನಾಯಕ ಶ್ರೀಕಾಂತನ ನುಡಿಗಳಿವು. […]
ಟೈಪ್ 2 ಡಯಾಬಿಟಿಸ್ ಪೀಡಿತರಿಗೆ ಮದ್ಯಪಾನ ಮಾಡುವ ವಿಚಾರದಲ್ಲಿ ಏನು ಹೇಳಬೇಕೆಂದು ವೈದ್ಯರಿಗೂ ಭಾರೀ ತಲೆನೋವು ಕೊಡುವ ಸಂಗತಿ. ಸೀಮಿತ ಪ್ರಮಾಣದಲ್ಲಿ ಮದ್ಯಪಾನ ಮಾಡುವುದರಿಂದ ಹೃದಯಾಘಾತದ ರಿಸ್ಕ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ ಕಾರಣ, ಡಯಾಬಿಟಿಕ್ ಪೀಡಿತರಿಗೂ ಒಂದು ಮಟ್ಟದಲ್ಲಿ ಇದು ಸಿಹಿ ಸುದ್ದಿಯೇ ಎನ್ನಬಹುದು.ಮತ್ತೊಂದೆಡೆ, ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಲು ಮುಂದಾಗಿದ್ದಾರೆ. ಆದರೆ ಒಂದು ದಿನದಲ್ಲಿ […]
ಮಗಳ ವಿಚ್ಛೇದನದ ಸುದ್ದಿ ಸೂಪರ್ಸ್ಟಾರ್ ರಜನಿಕಾಂತ್ ಮಾನಸಿಕವಾಗಿ ಕುಗ್ಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ರಜನಿಕಾಂತ್ ಸದ್ಯ ಸಿನಿಮಾ ಮಾಡುವುದು ಅನುಮಾನ ಎನ್ನುವ ಮಾತು ಕೇಳಿಬಂದಿತ್ತು. ಆದರೆ, ರಜನಿ ಆ ಎಲ್ಲಾ ಊಹಾ-ಪೋಹಗಳಿಗೆ ಹೊಸ ಸಿನಿಮಾ ಅನೌನ್ಸ್ ಮಾಡಿ ತೆರೆ ಎಳೆದಿದ್ದಾರೆ.ರಜನಿಕಾಂತ್ 169ನೇ ಸಿನಿಮಾವನ್ನು ಕೆಲವೇ ದಿನಗಳ ಹಿಂದೆ ಘೋಷಣೆ ಮಾಡಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.ರಜನಿಕಾಂತ್ 169ನೇ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ತಲೈವಾ ಅಭಿಮಾನಿಗಳಿಗೆ […]
ಕಚ್ಚಾ ಬಾದಾಮ್ ಹಾಡಿದ ನಿಜವಾದ ಗಾಯಕ ಭುವನ್ ಬಡ್ಯಾಕರ್ ಅವರನ್ನು ಸಂಗೀತಾ ಸಂಸ್ಥೆಯೊಂದು ಗುರುತಿಸಿ ಮೂರು ಲಕ್ಷ ನಗದು ಹಣವನ್ನು ನೀಡಿದೆ. ಕಚ್ಚಾ ಬಾದಾಮ್ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ, ತನ್ನ ವ್ಯಾಪಾರಕ್ಕಾಗಿ ತಾನೇ ಪದಕಟ್ಟಿ ಹಾಡಿದ ಈ ಹಾಡು ಇದೀಗ ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿನಾದ್ಯಂತ ಪ್ರಸಿದ್ದವಾಗಿ ಈ ವ್ಯಕ್ತಿಗೆ ಇದೀಗ ಸ್ಟಾರ್ ಸಿಂಗರ್ ಆಗಿದ್ದಾನೆ. ಅಷ್ಟೇ ಅಲ್ಲದೆ ಅಚ್ಚರಿಯಂತೆ ತಾನು ದಿನ ಬೆಳಗಾಗೋದೊರಳಗೆ ಪಡೆದ ಜನಪ್ರಿಯತೆ […]
ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ ರಾಜ್ಯದ ಹಲವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮುಂದುವರೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜವಂಶಸ್ಥ ಯದುವೀರ್ ಒಡೆಯರ್, ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ.ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ಹಾಗೂ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಕಟಿಬದ್ಧರಾಗಿರಬೇಕು. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.ಹಿಜಾಬ್ ವಿವಾದ ಕುರಿತು ಹೈಕೋರ್ಟ್ […]
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್(84) ಇನ್ನು ನೆನಪು ಮಾತ್ರ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಫೆ.19) ಕೊನೆಯುಸಿರೆಳೆದಿದ್ದಾರೆ.ವೀರ ಸಂಕಲ್ಪ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ರಾಜೇಶ್ ಅವರು ಸೊಸೆ ತಂದ ಸೌಭಾಗ್ಯ, ಬಿಡುಗಡೆ, ಕ್ರಾಂತಿವೀರ, ವಿಷಕನ್ಯೆ, ದೇವರ ದುಡ್ಡು, ಕಲಿಯುಗ, ವಸಂತ ನಿಲಯ, ದೇವರ ಮನೆ, ತವರು ಮನೆ, ಭಲೇ ಭಾಸ್ಕರ, ನಮ್ಮ ಬದುಕು, ದೇವರ ಮಕ್ಕಳು, ಕಾಣಿಕೆ, ಎರಡು […]
ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯ ಕುರಿತು ರಾಜೇಶ್ ಅಳಿಯ, ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.ಬೆಂಗಳೂರು: ಹಿರಿಯ ರಾಜೇಶ್ ಇಂದು (ಶನಿವಾರ, ಫೆ.19) ಮುಂಜಾನೆ ನಿಧನರಾಗಿದ್ದಾರೆ. ಅವರ ಕುರಿತು ಹಾಗೂ ಅಂತ್ಯಕ್ರಿಯೆಯ ಕುರಿತು ರಾಜೇಶ್ ಅಳಿಯ, ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. ಈ ದಿನ ದುಃಖಕರವಾದ ದಿನ ಎಂದಿರುವ ಅರ್ಜುನ್ ಸರ್ಜಾ, ”ಕನ್ನಡ ಚಿತ್ರರಂಗದಲ್ಲಿ 50 ವರ್ಷಕ್ಕೂ ಹೆಚ್ಚು ಇದ್ದವರು ರಾಜೇಶ್. ಡಾ.ರಾಜ್ಕುಮಾರ್ರವರ ಪಂಕ್ತಿಯವರು. […]
ಚಿತ್ರದುರ್ಗ: ಹಿಜಾಬ್ ವಿವಾದ ಶುಕ್ರವಾರ ನಗರದಲ್ಲಿ ತೀವ್ರ ಸ್ವರೂಪ ಪಡೆಯಿತು. ನಗರದ ಎಸ್ಆರ್ಎಸ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ವಾಗ್ವಾದಗಳಿಗೆ ವೇದಿಕೆಯಾಯಿತು.ಗುರುವಾರ ಸಂಜೆವರೆಗೂ ಕಾಲೇಜಿನ ಪ್ರವೇಶ ದ್ವಾರದಲ್ಲಿ ಪಟ್ಟುಸಡಿಲಿಸದೆ ಪ್ರತಿಭಟನೆ ನಡೆಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶುಕ್ರವಾರ ಬೆಳಿಗ್ಗೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದರು.’ನಿಮ್ಮ ವರ್ತನೆಯಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ತರಗತಿಗೆ ತೆರಳಲು ಅವಕಾಶ ನೀಡಿ’ ಎಂದು […]