ವಿಜಯಪುರ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಗೆಂದು ಜಿಲ್ಲಾ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ನಾರ್ಮಲ್ ಡೆಲಿವರಿಯಾಗುತ್ತೆ ಎಂದು ಹೇಳಿದ್ದ ವೈದ್ಯರು. ರಕ್ತ ತರಲು ಸೂಚಿಸಿದ್ದ ವೈದ್ಯರು, ನಂತರ ತಾಯಿ ಮಗುವಿನ ಸಾವಿನ ವಿಚಾರವನ್ನ ಪೋಷಕರಿಗೆ ತಿಳಿಸಿದ್ದಾರೆ. ಕವಿತಾ ಅಂಜುಟಗಿ ಸಾವನ್ನಪ್ಪಿದ ತಾಯಿ, ಜೊತೆಗೆ ಮಗು ಕೂಡ ಸಾವು ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಿರುವ […]
ಮಧುಗಿರಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬೆಳದಿದ್ದ ನಿರುಪಯುಕ್ತ ಗಿಡ ಹಾಗೂ ಮುಳ್ಳಿನ ಗಿಡಗಳನ್ನು ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ನಂತರ ಮಾತನಾಡಿದ ತಹಶೀಲ್ದಾರ್ ಡಾ. ಜಿ.ವಿಶ್ವನಾಥ್ ಇಲಾಖೆಯ ಆವರಣದಲ್ಲಿ ಬೆಳೆದಿರುವ ನಿರುಪಯುಕ್ತ ಗಿಡಗಳು ಹಾಗೂ ಕಾಫಿ ಲೋಟಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ಹೆಚ್ಚಾಗಿದ್ದವು. ಇದರಿಂದ ರೋಗಗಳು ಹರಡದಂತೆ ಈ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಕಚೇರಿಗೆ ಕೆಲಸ ಕಾರ್ಯಗಳಿಗೆ ಬರುವ ಜನರು ಸ್ವಚ್ಚತೆಯನ್ನು ಕಾಪಾಡಬೇಕೆಂದು ತಿಳಿಸಿದರು. ಹಾಗೂ ಆಹಾರ […]
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಒಟ್ಟು 185 ಗಡಿ ದಾಟಿ ಮುನ್ನುಗ್ಗುತ್ತಿರುವ ಸೋಂಕಿತರ ಸಂಖ್ಯೆ. ಈ ಮದ್ಯೆಯು ಸೋಂಕಿಗೆ ತಲೆಕೆಡಿಸಿಕೊಳ್ಳದೆ ಹುಟ್ಟಹಬ್ಬ ಆಚರಿಸಿಕೊಂಡ ಗ್ರಾಮ ಪಂಚಾಯತಿ ಸದಸ್ಯ. ಲಾಕ್ಡೌನ್ ಇದ್ದರೂ ನಿಯಮ ಮೀರಿ ಹುಟ್ಟುಹಬ್ಬ ಆಚರಿಸಿಕೊಂಡ ವಾಜರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕೆಂಪರಾಜು. ಹುಟ್ಟುಇಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ ಇಲ್ಲ, ಒಬ್ಬರೂ ಸಹ ಮಾಸ್ಕ್ ದರಿಸಿಲ್ಲ. ಜವಬ್ದಾರಿ ಮರೆತು ಹುಟ್ಟು ಹಬ್ಬ ಆಚರಣೆಗೆ ಸ್ಥಳೀಯರ ಕಿಡಿ
ನೆಲಮಂಗಲದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನ ಬಂದಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ಮೂಲದ ರಂಗರಾಜು ಸಿ.ಪಿ ಅಲಿಯಾಸ್ ರಾಜು, ತಮಿಳುನಾಡು ರಾಜ್ಯ ಕೃಷ್ಣಗಿರಿ ಮೂಲದ ಶಶಿಕುಮಾರ್ ಅಲಿಯಾಸ್ ಶಶಿ, ಹಾಸನ ಮೂಲದ ಸಂದೀಪ್ ಟಿ.ಎನ್ ಅಲಿಯಾಸ್ ಕಿಟ್ಟಿ ಹಾಗೂ ಹಾಸನ ಮೂಲದ ಗೋಪಾಲ್ ಎ.ಬಿ ಬಂಧಿತ ಆರೋಪಿಗಳಾಗಿದ್ದು ಮೂರು ಜನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತೊಬ್ಬ ಮೆಕಾನಿಕ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಂದಿತರು ಬೆಂಗಳೂರು ಉತ್ತರ […]
ಸರ್ಕಾರದ ವಿರುದ್ಧ ಡಿಕೆಶಿ ವಾಕ್ಸಮರ ಹೊಸ ಪದಾಧಿಕಾರಿಗಳ ನೇಮಕಕ್ಕೆ ಡಿಕೆಶಿ ಸಿದ್ಧತೆ. ಸೆಪ್ಟಂಬರ್ ಮೊದಲ ವಾರದಲ್ಲೇ ಹೊಸ ಪದಾಧಿಕಾರಿಗಳ ನೇಮಕ ಪ್ರಸ್ತುತ ಇರುವ 270 ಪದಾಧಿಕಾರಿಗಳ ಸ್ಥಾನ ಮೊಟಕು 150 ಪದಾಧಿಕಾರಿಗಳ ಆಯ್ಕೆಗೆ ಡಿಕೆಶಿ ನಿರ್ಧಾರ. ಲೋಕಸಭೆ ಚುನಾವಣೆಯ ನಂತರ ಕೆಪಿಸಿಸಿ ವಿಸರ್ಜನೆ. ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನ ಬಿಟ್ಟು ಉಳಿದವರೆಲ್ಲರ ವಿಸರ್ಜನೆ. ಹೊಸ ಅಧ್ಯಕ್ಷ, ಮೂವರು ಕಾರ್ಯಾಧ್ಯಕ್ಷ ನೇಮಕ ಹೀಗಾಗಿ ಸ್ಟ್ರಾಂಗ್ ಪದಾಧಿಕಾರಿಗಳ ಟೀಂ ಕಟ್ಟಲು ಸಿದ್ಧತೆ. ಜಿಲ್ಲಾ ಮಟ್ಟದಿಂದಲೂ ಪಟ್ಟಿ […]
ಪ್ರಧಾನಿ ಕುರ್ಚಿಯ ಅಲುಗಾಟದ ನಡುವೆಯೇ ಕೆ.ಪಿ. ಶರ್ಮಾ ಓಲಿ, “ನನಗೆ ಬದಲಿ ಯಾರು?’ ಎಂಬ ಪ್ರಶ್ನೆಯನ್ನು ನೇಪಾಲದ ಕಮ್ಯುನಿಸ್ಟ್ ಪಕ್ಷದ ಮುಂದಿಟ್ಟಿದ್ದಾರೆ. “ಒಂದು ವೇಳೆ ನನ್ನನ್ನು ಬದಲಿಸುವುದಾದರೆ, ಮುಂದಿನ ಪ್ರಧಾನಿ ಅಭ್ಯರ್ಥಿಯನ್ನು ನನ್ನ ಸಿಪಿಎನ್ ಬಣದಿಂದಲೇ ನೇಮಿಸಬೇಕು’ ಎಂದು ಓಲಿ ಪಟ್ಟುಹಿಡಿದಿದ್ದಾರೆ. ಓಲಿಯ ಈ ನಿರ್ಧಾರ ಪ್ರಚಂಡ ಅವರ ಸಿಪಿಎನ್ ಬಣವನ್ನು ಕೆರಳಿಸಿದೆ. ೨೦೧೮ರಲ್ಲಿ ಉಭಯ ಪಕ್ಷಗಳು ವಿಲೀನಗೊಂಡು ನೇಪಾಲ ಕಮ್ಯುನಿಸ್ಟ್ ಪಕ್ಷವನ್ನು ರಚಿಸಿದ್ದವು. “ಪ್ರಚಂಡ ಅವರ ವಿರೋಧದ ಬಾಣದಿಂದ […]
ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ವೆಂಟಿಲೇಟರ್ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಎಂದಿದ್ದಾರೆ. ತಮಿಳುನಾಡು ಸರ್ಕಾರ 4.78 ಲಕ್ಷಕ್ಕೆ ವೆಂಟಿಲೇಟರ್ ಖರೀದಿಸಿದೆ. ಅದೇ ವೆಂಟಿಲೇಟರ್ ಗೆ ರಾಜ್ಯ ಸರ್ಕಾರ ದುಪ್ಪಟ್ಟು ನೀಡಿದ್ದು ಒಂದು ವೆಂಟಿಲೇಟರ್ ಗೆ 18.20 ಲಕ್ಷ ನೀಡಿ ಮೂರು ಪಟ್ಟು ಹೆಚ್ಚಿನ ಹಣವನ್ನ ನೀಡಿ ಖರೀದಿಸಿದೆ. ವೆಂಟಿಲೇಟರ್ ಸಿಗದೆ ಸೋಂಕಿತರು ಸಾಯ್ತಿದ್ದಾರೆ ಈ ಸಮಯದಲ್ಲೂ ಬಿಜೆಪಿ ಸಚಿವರು ಎಲ್ಲದರಲ್ಲೂ ಲೂಟಿ ಮಾಡ್ತಿದ್ದಾರೆ. ವೆಂಟಿಲೇಟರ್,ಪಿಪಿಎಕಿಟ್,ಬೆಡ್ […]
ಕೋಲಾರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರೋಗಿಗಳಿಗೆ ಬೆಡ್ ಗಳು ಕೊರತೆಯಾಗಬಾರದೆಂದು, ಜಿಲ್ಲಾಡಳಿತ ರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ.ಇದಕ್ಕೂ ಮುಂಚೆ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯಾದ ಆರ್.ಎಲ್.ಜಾಲಪ್ಪ ಆಸ್ಪತ್ರೆಯು ಕೋವಿಡ್ ರೋಗಿಗಳಿಗೆ ಬೆಡ್ ನೀಡಲು ಒಪ್ಪಿತ್ತು, ಆದರೆ ಈಗ ಆಸ್ಪತ್ರೆಯ ಆಡಳಿತ ಮಂಡಳಿ ಜಿಲ್ಲಾಡಳಿತ ಜೊತೆ ಸಹಕರಿಸದ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ರ್ಕಾರಿ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳು ಕುಸಿದು ಬಿದ್ದಿರುವ ಘಟನೆ ದೇವದುರ್ಗ ತಾಲ್ಲೂಕಿನ ಬುಂಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಬೀಮಶೇಪ್ಪ ಉಳಕಳ್ಳಿ ಎಂಬುವರರ ಮನೆ ಕುಸಿದು ಬಿದ್ದಿದ್ದು,ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಳೆಯ ಮನೆಯಾಗಿರುವುದರಿಂದ ನಿರಂತರ ಮಳೆಗೆ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕುಸಿದು ಬಿದ್ದಿರುವ ಮನೆಗಳನ್ನು ಪರಿಶೀಲನೆ ಮಾಡಬೇಕಿದೆ. ಇಂದಿಗೂ ಬಹುತೇಕ ಹಳೆಯದಾದ ಮನೆಗಳಲ್ಲಿ ವಾಸ ಮಾಡುತ್ತಿರುವ […]
ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅಬಕಾರಿ ಇಲಾಖೆಯಲ್ಲಿ ಆರು ಮಂದಿ ನೌಕರರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆ ಬಾರ್ ಮಾಲೀಕರು ಮತ್ತು ಅಲ್ಲಿನ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಲಾಕ್ಡೌನ್ಗೂ ಮುನ್ನ ನೆಲಮಂಗಲದ ಬಾರ್ಗಳಿಗೆ ಭೇಟಿ ಕೊಟ್ಟಿದ್ದ ಅಧಿಕಾರಿಗಳು ಮಾರಾಟದ ಲೆಕ್ಕ ಪಡೆದು ಅಂಗಡಿ ಸೀಲ್ ಮಾಡಿ ಬಂದಿದ್ದರು. ಇದರಿಂದ ಬಾರ್ಗಳ ಮಾಲೀಕರು ಹಾಗೂ ಸಿಬ್ಬಂದಿಗಳಲ್ಲಿ ಭಯ ಶುರುವಾಗಿದೆ, ನೆನ್ನೆ ಮೂರು ಜನರಲ್ಲಿ ಸೋಂಕು ದೃಢಪಟ್ಟಿತ್ತು ಒಟ್ಟು ಒಂಬತ್ತು ಜನರಲ್ಲಿ ಸೊಂಕು […]