ಚಾಮರಾಜನಗರ ತಾಲ್ಲೂಕಿನ ಕರಿಕಲ್ಲು ಗಣಿಗಾರಿಕೆಗೆ ತಮಿಳುನಾಡಿನಿಂದ ಕಲಬೆರೆಕ ಡೀಸೆಲ್ ಹಾಗೂ ಪೆಟ್ರೋಲ್ ಸರಬರಾಜು ಮಾಡುತ್ತಿದ್ದನ್ನು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಪಡಿಸಿಕೊಂಡಿರುವ ಘಟನೆ ನಡೆದಿದೆ.ತಮಿಳುನಾಡಿನ ನಾಮಕಲ್ ನ ಕಲಬೆರಕೆ ಡೀಸೆಲ್ ತುಂಬಿದ ಟ್ಯಾಂಕರ್ ನ್ನು ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಇರುವ ಶ್ರೀ ಕೃಷ್ಣ ಗ್ರಾನೈಟ್ ನಲ್ಲಿ ಕಲಬೆರಕೆ ಡೀಸೆಲ್ ಇಳಿಸುವಾಗ ಆಹಾರ ಇಲಾಖೆಯ ಉಪ ನಿರ್ಧೇಶಕ ಯೋಗಾನಂದ್ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಪಡಿಸಿಕೊಳ್ಳಲಾಯಿತು.ಬಲ್ಲ ಮೂಲಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ತಮಿಳುನಾಡಿನ ನಾಮಕಲ್ ನ ಆರ್ ಎಂ ಪೆಟ್ರೋಲಿಯಂ ಸಂಸ್ಥೆಯ 170 ಟ್ಯಾಂಕರ್ ಗಳಲ್ಲಿ ಕಲಬೆರಕೆ ಡೀಸೆಲ್ ಸರಭರಾಜು ಮತ್ತು ಮಾರಾಟ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಡೀಸೆಲ್ ಪ್ರತಿ ಲೀಟರ್ ಗೆ 51 ರೂ ಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.ಕಡಿಮೆ ಬೆಲೆಯಲ್ಲಿ ಡೀಸೆಲ್ ಮಾರಾಟ ಮಾಡುವುದರ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಆಹಾರ ಇಲಾಖೆಯ ಅಧಿಕಾರಿಗಳು 5 ಸಾವಿರ ಲೀಟರ್ ಡೀಸೆಲ್ ಇರುವ ಟ್ಯಾಂಕರ್ ನ್ನು ಮತ್ತು ಚಾಲಕನನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಮತ್ತೊಂದು ಮೂಲಗಳ ಪ್ರಕಾರ ಕಲಬೆರಕೆ ಡೀಸೆಲ್ ಟ್ಯಾಂಕರ್ ನಲ್ಲಿ 5 ಸಿಸಿ ಕ್ಯಾಮರಾ ಇದ್ದು ಜಿಪಿಎಸ್ ಅಳವಡಿಸಲಾಗಿದೆ ಎನ್ನಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada