ಪ್ರವಾಸಿಗರಿದ್ದ ಕಾರನ್ನು ಕಚ್ಚಿ ಎಳೆದ ಹುಲಿರಾಯ!

ವಿಡಿಯೊ: ಪ್ರವಾಸಿಗರಿದ್ದ ಕಾರನ್ನು ಕಚ್ಚಿ ಎಳೆದ ಹುಲಿರಾಯ!

ಬೆಂಗಳೂರು: ಪ್ರವಾಸಿಗರಿಂದ ತುಂಬಿದ ಕ್ಸೈಲೋ ಎಸ್‌ಯುವಿ ಕಾರನ್ನು ಹುಲಿಯೊಂದು ಕಚ್ಚಿ, ಹಿಂದಕ್ಕೆ ಎಳೆಯುವ ಮೂಲಕ ವ್ಯಾರ್ಘನ ಶಕ್ತಿಯೆಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.

ಕಾರಿನ ಹಿಂಬದಿಯ ಬಂಪರ್‌ಅನ್ನು ಬಲವಾಗಿ ಕಚ್ಚಿ ಹಿಡಿದೆಳೆಯುತ್ತಿರುವ ಹುಲಿಯ ವಿಡಿಯೊವನ್ನು ಮಹೀಂದ್ರ ಸಂಸ್ಥೆ ಮುಖ್ಯಸ್ಥ, ಉದ್ಯಮಿ ಆನಂದ್‌ ಮಹೀಂದ್ರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಮಿಳುನಾಡಿನ ತೆಪ್ಪಕ್ಕಾಡುವಿನ ಊಟಿ-ಮೈಸೂರು ರಸ್ತೆಯ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ.

1 ನಿಮಿಷ 30 ಸೆಕೆಂಡ್‌ ಇರುವ ವಿಡಿಯೊದಲ್ಲಿ ಮಹೀಂದ್ರ ಕ್ಸೈಲೋ ಎಸ್‌ಯುವಿ ಕಾರಿನ ಒಳಗೆ ಪ್ರವಾಸಿಗರು ಕುಳಿತಿರುವುದು ಇದೆ. ಕಾರಿನ ಹಿಂಬದಿಯ ಬಂಪರ್‌ಅನ್ನು ಕಚ್ಚುತ್ತಿರುವ ಹುಲಿಯೊಂದು, ಕೊನೆಗೆ ಕಾರನ್ನೇ ಹಿಂದಕ್ಕೆ ಎಳೆಯುತ್ತಿರುವ ದೃಶ್ಯ ಸೆರೆಯಾಗಿದೆ. ಕೊನೆಯಲ್ಲಿ ಮತ್ತೊಂದು ಹುಲಿಯೂ ಆಗಮಿಸುತ್ತಿರುವುದು ವಿಡಿಯೊದಲ್ಲಿದೆ.

‘ಹುಲಿ ಕ್ಸೈಲೋ ಕಾರನ್ನು ಕಚ್ಚುತ್ತಿರುವುದು ನನಗೇನು ವಿಶೇಷ ಎನಿಸುತ್ತಿಲ್ಲ. ಏಕೆಂದರೆ ಮಹೀಂದ್ರ ಕಾರುಗಳು ರುಚಿಕರ ಎಂಬ ನನ್ನ ಅನಿಸಿಕೆಯನ್ನೇ ಹುಲಿಯೂ ಹಂಚಿಕೊಂಡಿರಬೇಕು’ ಎಂದು ಆನಂದ್‌ ಮಹೀಂದ್ರ ಟ್ವೀಟ್‌ನಲ್ಲಿ ತಮಾಷೆಯಾಗಿ ಬರೆದಿದ್ದಾರೆ.

ಮಹೀಂದ್ರ ಕ್ರೈಲೋ ಎಸ್‌ಯುವಿ ಗಾಡಿ ಸುಮಾರು 1.8 ಟನ್‌ ಭಾರವಿದೆ. ಪ್ರವಾಸಿಗರು ತುಂಬಿದ್ದ ಕಾರನ್ನು ಹೀಗೆ ಕಚ್ಚಿ ಎಳೆದಿದ್ದನ್ನು ನೋಡಿದ ಮಂದಿ ವಿಸ್ಮಿತರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಓಮಿಕ್ರಾನ್ ಏರಿಕೆ: ಕೆಲವೆಡೆ ರೈಲು, ವಿಮಾನ ಸಂಚಾರ ರದ್ದು ಮತ್ತೆ ಲಾಕ್‍ಡೌನ್ ವಿಧಿಸುವ ಲಕ್ಷಣ;

Sun Jan 2 , 2022
ನವದೆಹಲಿ/ಕೋಲ್ಕತಾ/ಮುಂಬೈ,ಜ.2- ದೇಶ ದಲ್ಲಿ ದಿಢೀರನೆ ಓಮಿಕ್ರಾನ್ ರೂಪಾಂತರಿ ಮತ್ತು ಸಾಮಾನ್ಯ ಕೋವಿಡ್-19 ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು, ಹಲವು ರಾಜ್ಯಗಳಲ್ಲಿ ಲಾಕ್‍ಡೌನ್ ವಿಧಿಸುವ ಲಕ್ಷಣಗಳು ಗೋಚರಿಸಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ. ಏಳು ತಿಂಗಳ ಬಳಿಕ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 2000ರ ಗಡಿ ದಾಟಿದ್ದು, ಇದಾದ ಒಂದು ದಿನದ ನಂತರ ದೆಹಲಿ ಸಿಎಂ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ದೆಲಿಯಲ್ಲಿ 2,716 ಹೊಸ […]

Advertisement

Wordpress Social Share Plugin powered by Ultimatelysocial