ಕರ್ನಾಟಕ ರತ್ನ ಪುನೀತ್ ರಾಜ್ ಅವರ ನೆನಪಿನಲ್ಲಿ ಬೆಂಗಳೂರು ಮತ್ತು ಚಾಮರಾಜ ನಗರ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಐದು ದಿನಗಳ ಉಲ್ಲಾಸ್ ತರಬೇತಿ ಶಾಲೆ ಮತ್ತು ಅಪ್ಪು ಮಕ್ಕಳ ಚಿತ್ರೋತ್ಸವದ ಚಾಲನೆ ನೀಡಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಸಮುದಾಯಭವನ ಉದ್ಘಾಟನೆ ಮಾಡಲಾಗಿದ್ದು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.ಇದಲ್ಲದೆ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪುನೀತ್ ರಾಜ್ ಕುಮಾತ್ ತಮ್ಮ ಜೀವಿತಾವಧಿಯಲ್ಲಿ ಎಂದೂ ಮರೆಯದ ಕೆಲಸಗಳ ಮೂಲಕ ಅಜರಾಮರವಾಗಿದ್ದಾರೆ.ಪುನೀತ್ ಅವರ ಭಾವಚಿತ್ರಕ್ಕರ ಪುಷ್ಪನಮನ ಸಲ್ಲಿಸುವುದು ಬೇಸರದ ಸಂಗತಿ ಎಂದರು.ಅಪ್ಪು ಮಕ್ಕಳ ಚಿತ್ರೋತ್ಸವವನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಶಾಶ್ವತ ಕಾರ್ಯಕಾರ್ಯಕ್ತಮ ರೂಪಿಸಿ, ಸರ್ಕಾರದಿಂದಲೂ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ ಡಾ.ರಾಜ್ ಕುಮಾರ್ ಅವರ ಕುಟುಂಬ ಸಾವಿರಾರು ವರ್ಷ ಕಳೆದರೂ ಅವರ ಹೆಸರು ಅಜರಾಮರವಾಗಲಿದೆ. ಪುನೀತ್ ರಾಜ್ ಕುಮಾರ್ ಅವರು ಹೆಸರು ಶಾಶ್ವತವಾಗರಲಿದೆ ಎಂದಿದ್ದಾರೆ.ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿ, ಉಲ್ಲಾಸ್ ಮತ್ರು ಅಪ್ಪು ಮಕ್ಕಳ ಚಿತ್ರೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ ಮಾತನಾಡಿ, ಉಲ್ಲಾಸ್ , ಅಪ್ಪು ಚಿತ್ರೊತ್ಸವ ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ.ಮಕ್ಕಳ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡುವ ಮುನ್ನವೇ ಚಿತ್ರಮಂದಿರದಿಂದ ಚಿತ್ರ ತೆಗೆದು ಹಾಕ್ತಾರೆ. ಮುಂದೊಂದು ದಿನ ಉಲ್ಲಾಸ್ ಶಾಲೆ ಅಂತರಾಷ್ಡ್ರೀಯ ಮಟ್ಟಕ್ಕೆ ಏರಲಿ.ಶಾಲೆ ಕಲಾವಿದರನ್ನು ತಯಾರು ಮಾಡುವ ಕಾರ್ಖಾನೆಯಾಗಲಿ ಎಂದು ಹಾರೈಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada