ಸಂಬಳ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಧಿಕ್ಕಾರ ಕೂಗಿದ ಕಾರ್ಮಿಕರು 9 ತಿಂಗಳಿಂದ ಸಂಬಳನೀಡದೆಸತಾಯಿಸುತ್ತಿರುವ ಮಾನ್ವಿ ತಾಲೂಕ ಅಧಿಕಾರಿ ಅಂಬವ್ವನಾವು ಬದುಕುವುದಾದರು ಹೇಗೆ ಸ್ವಾಮಿ ಮುಖ್ಯಮಂತ್ರಿ ಬೊಮ್ಮಾಯಿ ಸಾಹೇಬ್ರೆ
ನಮ್ಮ ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕೆ ತೊಂದರೆ ಎಂದು ನೋವು ವ್ಯಕ್ತಪಡಿಸಿದ ಕಾರ್ಮಿಕರು.ಸರಕಾರ ಹಾಸ್ಟೆಲ್ ನ ಅಡುಗೆ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ನೀಡುತ್ತಿದ್ದೇವೆ ಎಂದು ಹೇಳುತ್ತೆ. ಆದರೆ ರಾಯಚೂರು ಜಿಲ್ಲೆಯಲ್ಲಿ 9 ತಿಂಗಳಿಂದ ಸಂಬಳ ನೀಡದಿರುವುದಕ್ಕೆ ಕಾರ್ಮಿಕರು ನಮಗೆ ನ್ಯಾಯಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಮಾನ್ವಿ ತಾಲೂಕಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ಅಂಬವ್ವ ಕಾರ್ಮಿಕರನ್ನು ದುಡಿಸಿಕೊಂಡು ಸಂಬಳ ನೀಡದೆ ಸತಾಯಿಸುತ್ತಿದ್ದಾರೆ.ಬಡ ಕಾರ್ಮಿಕರು 9ತಿಂಗಳಿಂದ ಸಂಬಳ ಪಡೆದಿಲ್ಲ, ಅವರ ಜೀವನ ಹಾಗು ಮಕ್ಕಳ ಶಿಕ್ಷಣಕ್ಕೆ ಫೀ ಕಟ್ಟದಾಗಿದೆ.ತಾಲೂಕ ಅಧಿಕಾರಿ ಅಂಬವ್ವ ಅವರೆ ನೀವು ಸರಕಾರದ ಸಂಬಳ ತಿಂದು ಆಯಾಗಿ ಇರುತ್ತೀರಾ.ಆದರೆ ಬಡ ಕಾರ್ಮಿಕರನ್ನು ದುಡಿಸಿಕೊಂಡು ಈ ರೀತಿಯಾಗಿ ಸಂಬಳ ಕೊಡದೆ ಸತಾಯಿಸುತ್ತಿದ್ದೀರಲ್ಲಾ ನಿಮಗೆ ಶೋಭೆ ತರುತ್ತಾ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ನೋಡಿ ಕಾರ್ಮಿಕರನ್ನು ದುಡಿಸಿಕೊಂಡು ಈ ರೀತಿಯಾಗಿ ಸಂಬಳ ನೀಡದೆ ಸತಾಯಿಸುತ್ತಿರುವ ತಾಲೂಕ ಅಧಿಕಾರಿ ಅಂಬವ್ವ ವಿರುದ್ಧ ಕ್ರಮ ಜರುಗಿಸಿ ಇಲ್ಲವೆ. ಮುಂದಿನ ದಿನಗಳಲ್ಲಿ ಕಾರ್ಮಿಕರು ನಿಮಗೆ ಧಿಕ್ಕಾರ ಹಾಕುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada