ಬೆಂಗಳೂರು 23: ರೆಸಕೋರ್ಸ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರಿಗೆ ರಾಜ್ಯ ಮಟ್ಟದ ಮಾಳಿ-ಮಾಲಗಾರ ಸಮಾಜದ ಮುಖಂಡರು ಬೆಟ್ಟಿಯಾಗಿ ಸನ್ಮಾನಿಸಿ ಮಾಲಗಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಅನುಧಾನ ನೀಡುವ ಕುರಿತು ಮನವಿ ಪತ್ರ ನೀಡಿದರು. ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಮಾತನಾಡಿ ಮಾಲಗಾರ ಸಮಾಜದವರು ಮುಗ್ದರು ಹೆಚ್ಚಾಗಿ ಕೃಷಿ ಹಾಗೂ ವ್ಯಾಪಾರ ಮಾಡುತ್ತಾ ಬಂದಿರುವರು. ಸಮಾಜ ಶ್ರೇಯೋಭಿವೃದ್ಧಿಗೆ ಸದಾ ಸಿದ್ದನಿದ್ದನೆ.ರಾಜ್ಯದಲ್ಲಿ 25 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜವನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಬಜೆಟನಲ್ಲಿ ವಿಶೇಷ ಅನುದಾನ ನೀಡಿ ಸರಕಾರ ಸವಲತ್ತು ಪಡೆಯಲು ಆದೇಶ ನೀಡಲು ನೀಡುತ್ತೇನೆ . ಮಾಲಗಾರ ಸಮಾಜ ತೀರ ಹಿಂದುಳಿದಿದ್ದರಿಂದ ಮುಂಬರುವ ದಿನಗಳಲ್ಲಿ ರಾಜಕೀಯ ಮಟ್ಟದಲ್ಲಿ ಮುಂದುವರಿಯಲು ಸಂಪೂರ್ಣ ಬೆಂಬಲ ನೀಡುತ್ತೇವೆ.ತಮ್ಮ ಕುಟುಂಬದಲ್ಲಿ ಓ ಬಿ ಸಿ ಸಿಂಧುತ್ವ, ಜಾತಿ ಪ್ರಮಾಣ ಪತ್ರದಲ್ಲಿ ಹಿಂದೂ ಮಾಳಿ 2a,ಅಂಥ ನೀಡಲು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಲು ಭರವಸೆ ನೀಡಲಾಗುವುದು ಎಂದು ಹೇಳಿದರು. ಇದೆ ರೀತಿ ಗೋವಿಂದ ಕಾರಜೋಳ.ಶ್ರೀ ಬಾಲಚಂದ್ರ ಜಾರಕಿಹೊಳಿ. ಕೆ ಎಸ್ ಈಶ್ವರಪ್ಪ. ಲಕ್ಷ್ಮಣ ಸವದಿ.ಶಶಿಕಲಾ ಜೊಲ್ಲೆ.ಪಿ ರಾಜೀವ್. ಪಿ ಆರ್ ರಮೇಶ. ಬಿ ಶ್ರೀ ರಾಮುಲು. ಸತೀಶ ಜಾರಕಿಹೊಳಿ. ಬಸವರಾಜ ಹೊರಟ್ಟಿ. ಎಶ ವಂತರಾಯಗೌಡ ಪಾಟೀಲ. ಅರುಣ ಶಹಾಪುರ. ಬಸವರಾಜ ಹೊರಟ್ಟಿ. ಸುಭಾಸ ಗುತ್ತೇದಾರ. ನೆ ಲ ನರೇಂದ್ರ ಬಾಬು.ಆನಂದ ನ್ಯಾಮಗೋಡ.ಮುರಿಗೇಶ ನಿರಾಣಿ.ಉಮೇಶ ಕತ್ತಿ. ಅಣ್ಣಾಸಾಬ ಜೊಲ್ಲೆ. ಶ್ರೀಮಂತ ಪಾಟೀಲ. ಸಿದ್ದು ಸವದಿ. ಇವರೆಲ್ಲರಿಗೂ ಕೂಡಾ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರನ್ನು ಬೆಟ್ಟಿಯಾಗಲು ಸಹಕಾರ ನೀಡಿ ಮುತುವರ್ಜಿ ವಹಿಸಿದ ಕೆ ಎಮ್ ಎಫ್ ಅಧ್ಯಕ್ಷ ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಾಲಗಾರ ಸಮಾಜದಿಂದ ಅಭಿನಂದನೆಗಳನ್ನು ಸಲ್ಲಿಸಿದರು.ಮಾಳಿ-ಮಾಲಗಾರ ಸಮಾಜದ ಮುಖಂಡರಾದ ಡಾ ಸಿ ಬಿ ಕೂಲಿಗೋಡ. ಬಸವರಾಜ ಬಾಳಿಕಾಯಿ. ಬಸವರಾಜ. ಬೂಟಾಳಿ. ಮುರಿಗೆಪ್ಪ ಮಾಲಗಾರ.ನೀಲಪ್ಪ ಕೇವಟಿ. ಅಶೋಕ ಲಿಂಬಿಗಿಡದ. ಸಂತೋಷ ಬಡಕಂಬಿ. ಮಾದೇವ ತೇರದಾಳ.ಚನ್ನಬಸು ಬಡ್ಡಿ.ಮಾದೇವ ಕೋರೆ. ಸೋಮಲಿಂಗ ಮೇತ್ರೆ. ಮಲ್ಲಿಕಾರ್ಜುನ ತಡಕಲೆ.ಪಂಡಿತ ಸೆರೆಕರ. ಅಶೋಕ ಶಿವಾಪೂರ. ಹಾಗೂ ಬೆಳಗಾವಿ, ವಿಜಯಪುರ, ಬಾಗಲಕೋಟ, ಆಳಂದ, ಗುಲ್ಬರ್ಗ ಹಾಗೂ ರಾಜ್ಯದ ನೂರಾರು ಸಮಾಜದ ಮುಖಂಡರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada