ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಸಸಿಗೊಳ್ಳಿ ಸಮಯದ ಎಲ್ಡಮಕ್ಕಿ ಗ್ರಾಮದಲ್ಲಿ ಘಟನೆ.ಗೀತಾ ಶಶಿಕುಮಾರ್ ದಂಪತಿ ಮಗು.ಕಳೆದ ನಾಲ್ಕು ದಿನಗಳಿಂದ ತೀವೃ ಉಸಿರಾಟ ಸಮಸ್ಯೆ ಯಿಂದ ಬಳಲುತ್ತಿದ್ದ ಮಗು.ಆದರೆ ತುಮರಿ ಪ್ರಾಥಮಿಕ ಆಸ್ಪತ್ರೆಯಲ್ಲಿರಬೇಕಿದ್ದ ಅಂಬುಲೆನ್ಸ್ ಸೇವೆ ಮೂರಿ ದಿನಗಳಿಂದ ಇರಲಿಲ್ಲ.ವಾಹನ ರಿಪೇರಿಗೆ ಹೋಗಿತ್ತೆಂದು ಆರೋಗ್ಯ ಅಧಿಕಾರಿಗಳ ಸಬೂಬುಅಂಬುಲೆನ್ಸ್ ಇಲ್ಲದ ಕಾರಣ ಖಾಸಗಿ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಸೇರಿಸುವುದು ತಡವಾಗಿದ್ದರಿಂದ ಸಾವು.ತುಮರಿ ಭಾಗದಲ್ಲಿ ಅಂಬುಲೆನ್ಸ್ ಸೇವೆ ಸಾಕಾಲದಲ್ಲಿ ಸಿಗದೆ ಸಾವನ್ನಪ್ಪಿದ ಮೂರನೆ ಪ್ರಕರಣ ಇದಾಗಿದೆ.ಎರಡು ಸಾವುಗಳ ನಂತರ ಸ್ಥಳೀಯರು ಅಂಬುಲೆನ್ಸ್ ಸೇವೆ ನೀಡುವಂತೆ ಪ್ರತಿಭಟನೆ ನಡೆಸಿದ್ದರು. ನಂತರ ವೆಂಟಿಲೇಟರ್ ಇರುವ ಅಂಬುಲೆನ್ಸ್ ನೀಡಲಾಗಿತ್ತು..ಆದರೂ ಮಂಗಳವಾರ ರಾತ್ರಿ ಅಂಬುಲೆನ್ಸ್ ಸೇವೆ ಸೂಕ್ತಕಾಲದಲ್ಲಿ ಸಿಗದೆ ಮಗು ಸಾವನ್ನಪ್ಪಿರುವುದು ದ್ವೀಪ ಪ್ರದೇಶದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada