ಚಾರ್ಲಿ ಚಾಪ್ಲಿನ್ 1889ರ ಏಪ್ರಿಲ್ 16ರಂದು ಜನಿಸಿದ. ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ವಾಲ್ ವರ್ತ್ ಎಂಬ ಲಂಡನ್ನಿನ ಸಮೀಪದ ಊರಿನಲ್ಲಿ. ಎಂಬತ್ತೆಂಟು ವರ್ಷ ಬದುಕಿ 1977ರ ಕ್ರಿಸ್ಮಸ್ ದಿನದಂದು ಸ್ವಿಟ್ಸರ್ಲೆಂಡಿನಲ್ಲಿ ನಿಧನನಾದ. ಚಾಪ್ಲಿನ್ ಚಿತ್ರಗಳನ್ನು ಆಸ್ವಾದಿಸಿದ ನಮಗೆ ಚಾಪ್ಲಿನ್ನನಷ್ಟು ಆತ್ಮೀಯರು ಮತ್ತೊಬ್ಬರಿದ್ದಾರೆಯೇ ಎನಿಸುತ್ತದೆ. ಇಡೀ ವಿಶ್ವಕ್ಕೆ ಸಂತೋಷ ಕೊಟ್ಟ ಅಪರೂಪದ ವ್ಯಕ್ತಿ ಆತ. ಚಾಪ್ಲಿನ್ನನಿಗೆ ಹೇಳಬೇಕೆನಿಸುತ್ತಿದೆ “ಚಾಪ್ಲಿನ್ ನೀನು ಯಾವ ಲೋಕದಲ್ಲಿದ್ದರೂ ಅಲ್ಲಿನ ಜನರನ್ನು ಸಂತೋಷವಾಗಿ ಇಟ್ಟಿರುವೆ!” ‘ದಿ […]
#dailynews ##Newupdates #Kannadanews #Latestnews #Updates #Speednews #Kannadanews # receipe#masala chatnnty
ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 9ನೇ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡೆಲ್ ಪಡೆದಿದ್ದಾರೆ ಅನುಪಮಾ ಗೌಡ. ಇನ್ನೂ ‘ಕಳಪೆ’ ಪಟ್ಟ ಆರ್ಯವರ್ಧನ್ ಗುರೂಜಿ ಪಾಲಾಗಿದೆ. ಆರ್ಯವರ್ಧನ್ ಗುರೂಜಿ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿರುವ ಕಾರಣ ಇಂದು ಅವರು ಜೈಲುವಾಸ ಅನುಭವಿಸಿಲ್ಲ.ಅನುಪಮಾ ಗೌಡ ಈ ವಾರ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ ಎಂದು ಅಮೂಲ್ಯ ಗೌಡ, ವಿನೋದ್ ಗೊಬ್ಬರಗಾಲ, ದಿವ್ಯಾ ಉರುಡುಗ, ಕಾವ್ಯಶ್ರೀ ಗೌಡ, ಅರುಣ್ ಸಾಗರ್, ರಾಕೇಶ್ ಅಡಿಗ […]
ಸ್ಯಾಂಡಲ್ವುಡ್ನ ಹಲವು ತಾರೆಯರು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಈಗ ಸ್ಪರ್ಶ ರೇಖಾ ಕಿರುತೆರೆಯತ್ತ ಹೆಜ್ಜೆ ಹಾಕಿದ್ದು, ಸದ್ಯದಲ್ಲೇ ಆರಂಭವಾಗಲಿರುವ ‘ತ್ರಿಪುರ ಸುಂದರಿ’ ಸೀರಿಯಲ್ನಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ.‘ಸ್ಪರ್ಶ’, ‘ಮೆಜೆಸ್ಟಿಕ್’ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ರೇಖಾ ಮದುವೆ ಮಾಡಿಕೊಂಡು ಚಿತ್ರರಂಗದಿಂದ ದೂರ ಉಳಿದಿದ್ದರು. ಕೆಲ ವರ್ಷಗಳ ಹಿಂದೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ನಂತರ ಸಿನಿಮಾಗಳಲ್ಲಿ […]
ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ‘ದಿಯಾ’ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹಾಡು ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಚಿತ್ರತಂಡ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ.ನಗು ನಗುತ ಆವರಿಸೋ ಈ ಹುಡುಗಿ’ […]
ಈಗಾಗಲೇ ತನ್ನ ವಿಭಿನ್ನವಾದ ಟೈಟಲ್ನಿಂದ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ಸಾಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಕ್ಲೈಮಾಕ್ಸ್ ಹಾಸ್ಯಲೇಪನದೊಂದಿಗೆ ಸಾಕಷ್ಟು ಅಚ್ಚರಿ ಮೂಡಿಸಲಿದೆ ಎನ್ನುತ್ತಿದೆ ಚಿತ್ರತಂಡದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಿಲಿಂದ್ ನಾಯಕ ನಟನಾಗಿ ನಟಿಸುತ್ತಿದ್ದು, ನಾಯಕಿಯಾಗಿ ರೇಚಲ್ ಡೇವಿಡ್ ನಟಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಾಯಕ, ನಾಯಕಿ ಒಳಗೊಂಡಂತೆ ಸಾಧುಕೋಕಿಲ, ಸುಂದರ್, ವೀಣಾ […]
ರಮೇಶಚಂದ್ರ ಮಜುಮ್ದಾರ್ 1888ನೇ ವರ್ಷದ ಡಿಸೆಂಬರ್ 4ರಂದು ಫರೀದ್ಪುರ ಜಿಲ್ಲೆಯ ಕಾಂದಾರಪಾಡದಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) ಹುಟ್ಟಿದರು. ತಂದೆ ಹಲಧರ ಮಜುಮ್ದಾರ್ ಅವರು ಮತ್ತು ತಾಯಿ ವಿದುಮುಖಿದೇವಿ ಅವರು. ಕಾಂದಾರ್ಪಾಡದಲ್ಲಿಯ ಶಾಲೆಯಲ್ಲಿ ಏಳು ವರ್ಷಗಳ ಕಾಲ ಶಿಕ್ಷಣ ಪಡೆದ ಮಜುಮ್ದಾರ್ ಅವರು ತಮ್ಮ ಅಣ್ಣನ ಕೆಲಸ ಸ್ಥಳ ವರ್ಗಾವಣೆಯಿಂದಾಗಿ ವಿದ್ಯಾಭ್ಯಾಸಕ್ಕಾಗಿ ಊರಿಂದೂರಿಗೆ ಅಲೆದಾಟ ಮಾಡಬೇಕಾಯಿತು. 1900ರಲ್ಲಿ ಕಲ್ಕತ್ತೆಗೆ ಬಂದು ಸೌತ್ ಸಬರ್ಬನ್ ಶಾಲೆ ಸೇರಿದರು. ಅನಂತರ ಡಾಕ್ಕಾ, ಹೂಗ್ಲಿ, […]
ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಇಂದು ಈ ಮಹಾನ್ ಸಂತರ ಸಂಸ್ಮರಣಾ ದಿನ. ಅರವಿಂದರು 1872ರ ಆಗಸ್ಟ್ 15ರಂದು, ಕಲಕತ್ತೆಯಲ್ಲಿ ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರರಾಗಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯವರು ಅರವಿಂದರಿಗೆ ‘ಒರೊಬಿಂದೋ ಅಕ್ರಾಯ್ಡ್ ಘೋಷ್’ ಎಂಬ ಜನ್ಮನಾಮವನ್ನು ಕೊಟ್ಟರು. ಭಾರತೀಯತೆಯ ಪ್ರಭಾವ ತಮ್ಮ ಮಕ್ಕಳ ಮೇಲೆ ಬೀಳಬಾರದೆಂಬ ಉದ್ದೇಶದಿಂದ ಅವರನ್ನು ಇಂಗ್ಲೆಂಡಿಗೆ ರವಾನಿಸಿದರು. ಇಂಗ್ಲೆಂಡಿನಲ್ಲಿಯೇ 13ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ […]
ಆತ ಈ ಲೋಕದಿಂದ ದೂರವಾಗಿದ್ದು 2013ರ ಡಿಸೆಂಬರ್ 5ರಂದು. ಇದ್ದಾಗಲೂ ಸತ್ತು ಬದುಕಿದವರು. ಬದುಕು – ಸಾವು, ಜೈಲು – ರಾಷ್ಟ್ರಾಧ್ಯಕ್ಷತೆ, ನೊಬಲ್ ಪ್ರಶಸ್ತಿ – ತೆಗಳಿಕೆ ಎಲ್ಲಕ್ಕೂ ಅತೀತರಾಗಿದ್ದವರು. ನೆಲ್ಸನ್ ಮಂಡೇಲ ಅವರು ಹುಟ್ಟಿದ್ದು 1918ರ ಜುಲೈ 18ರಂದು. ಈ ಸಂದರ್ಭದಲ್ಲಿ ಪಿ. ಲಂಕೇಶರು ಮಾರ್ಚ್ 18, 1990ರಲ್ಲಿ ಬರೆದ ‘ಟೀಕೆ – ಟಿಪ್ಪಣಿ’ ಯಲ್ಲಿರುವ ಮಾತುಗಳೊಂದಿಗೆ ಈ ಮಹಾತ್ಮನನ್ನು ನೆನೆಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಮೊದಲು […]
ಅವರು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಹಿರಿಯ ಮೊಮ್ಮಗ. ಅವರ ತಂದೆ ಸುಬ್ರಹ್ಮಣ್ಯಂ ಮತ್ತು ತಾಯಿ ಪದ್ಮಾವತಮ್ಮ. ಇಂದು ಅವರ ಸಂಸ್ಮರಣೆ ದಿನ. ನಾನು ಚಿಕ್ಕವನಿದ್ದಾಗಲಿಂದಲೂ ಕುತೂಹಲದಿಂದ ನೋಡುತ್ತಾ ಇದ್ದಿದ್ದು ನನ್ನ ತಂದೆಯವರ ಬಳಿ ಇದ್ದ ಪುಟ್ಟ ಚೀಲ, ಅದರಲ್ಲಿ ಅವರಿಗೆ ಪ್ರಿಯವಾದ ಕೆಲವು ಕೃತಿಗಳು ಇರುತ್ತಿದ್ದವು. ಅವುಗಳಲ್ಲಿ ನನ್ನ ಗಮನ ಸೆಳೆದಿದ್ದು ‘ಸಂಗೀತ ಸರಿತಾ’. ಅದನ್ನು ಅವರು ಮತ್ತೆ ಮತ್ತೆ ಓದುತ್ತಿದ್ದರು. ಈ ಪುಟ್ಟ ಕೃತಿಯನ್ನು ಅಷ್ಟು ಸಲ […]
ಅಂಬೇಡ್ಕರ್ 1891ರ ಏಪ್ರಿಲ್ 14ರಂದು ಮಧ್ಯಪ್ರದೇಶದ ಮಾಹೊವ್ ಗ್ರಾಮದಲ್ಲಿ ಜನಿಸಿದರು. ತಂದೆ ರಾಮಜಿ ಮಾಲೋಜಿ ಸಕ್ಪಾಲ್. ತಾಯಿ ಭೀಮಾಬಾಯಿ. ಈ ದಂಪತಿಗಳಿಗೆ ಅಂಬೇಡ್ಕರ್ ಹದಿನಾಲ್ಕನೆಯ ಸಂತಾನ. ಭೀಮರಾವ್ ಸಕ್ಪಾಲ್ ಅಂಬವಾಡೇಕರ್ ಎಂಬ ಅವರ ವಂಶೀಯ ಹೆಸರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಎನ್ನುವ ಅವರಿದ್ದ ಹಳ್ಳಿಯನ್ನು ಸೂಚಿಸುತ್ತದೆ. ಅವರನ್ನು ಶಾಲೆಯಲ್ಲಿ ಪ್ರೀತಿಯಿಂದ ಕಂಡ ಮಹದೇವ್ ಅಂಬೇಡ್ಕರ್ ಎಂಬವರು ಅವರ ಹೆಸರನ್ನು ಶಾಲೆಯ ದಾಖಲೆಗಳಲ್ಲಿ ಅಂಬೇಡ್ಕರ್ ಎಂದು ಮೂಡಿಸಿದರು. […]