ಬೈಕ್ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ವಿಜಯಪುರ ಸಿಂದಗಿಯ ಹೆದ್ದಾರಿ ಬಳಿ ನಡೆದಿದೆ. ಬೈಕ್ ಸವಾರನನ್ನು ವಿಜಯಪುರ ತಾಲೂಕಿನ ಆಹೇರಿ ತಾಂಡಾದ ನಿವಾಸಿ ಸುನಿಲ್ ರಾಠೋಡ್ ಎಂದು ಗುರುತಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ವಿಜಯಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ :ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ಅಲಸಂದಿ ಬೆಳೆ..?

ಜಮೀನಿನಲ್ಲಿ ಮಾರಾಟಕ್ಕೆಂದು ಸಂಗ್ರಹಿಸಲಾಗಿದ್ದ 7.977 ಗ್ರಾಂ. ಗಾಂಜಾವನ್ನು  ವಿಜಯಪುರ ಗ್ರಾಮೀಣ ಪೊಲೀಸರು ಜಪ್ತಿ ಮಾಡಿದ್ದಾರೆ. ಗಾಂಜಾ ಮಾರಾಟ ಮಾಡಲು ಯತ್ನಿಸಿದ  ಮೂವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಡೋಮನಾಳ ದೊಡ್ಡಿ ಗ್ರಾಮದ  ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗಾಂಜಾದ ಬಗ್ಗೆ ಮಾಹಿತಿ ಪಡೆದ ವಿಜಯಪುರ ಪೊಲೀಸರು ದಾಳಿ ನಡೆಸಿ ಬಂಧಿತರಿಂದ 7.977 ಗ್ರಾಂ. ಗಾಂಜಾ, ಹೋಂಡಾ ಶೈನ್ ಬೈಕ್  ಅನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧಿತರನ್ನು ಜರಕ ಡೋಮನಾಳ, ಆಕಾಶ ಅನಿಲ್ ಬೊರಾಕರ್ […]

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನಲ್ಲಿ ಮನುಕಲಕುವ ಘಟನೆಯೊಂದು ನಡೆದಿದೆ. ನವಜಾತು ಗಂಡು ಶಿಶುವನ್ನು ಪ್ಲಾಸ್ಟಿಕ್ ಕವರನಲ್ಲಿ ಸುತ್ತಿ ತಬ್ಬಲಿ ಮಾಡಿ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇನ್ನು ರಾತ್ರಿ ಯಾರು ಇಲ್ಲದ ವೇಳೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಮಗು ಹುಟ್ಟಿದ ಸಂಗತಿಯನ್ನು ಮುಚ್ಚಿಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಮೂರಗೋಡ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ತಕ್ಷಣವೇ […]

ಇಂದು ರಾಜ್ಯದ್ಯಂತ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಯಾಗಿದೆ. ಇಂತಹ ಸಂದರ್ಭದಲ್ಲಿ ವಿವಿಧೆಡೆ ನಟ ದರ್ಶನ್ ಅಭಿಮಾನಿಗಳು, ಹಾಲು, ಪುಷ್ಟ ಸೇರಿದಂತೆ ವಿವಿಧ ಅಭಿಷೇಕಗಳನ್ನು ದರ್ಶನ್ ಕಟೌಟ್ ಗೆ ಮಾಡುತ್ತಿದ್ದಾರೆ. ಆದರೆ ತುಮಕೂರಿನಲ್ಲಿ ಮಾತ್ರ, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಕಟೌಟ್ ಗೆ  ಮದ್ಯಾಭಿಷೇಕ ಮಾಡಿ, ಅತಿರೇಕ ಮೆರೆದಿದ್ದಾರೆ. ತುಮಕೂರಿನ ತ್ರಿಮೂರ್ತಿ ಚಿತ್ರಮಂದಿರದಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಟೌಟ್ ಗೆ ದರ್ಶನ್ ಅಭಿಮಾನಿಗಳು ಮದ್ಯದ […]

ತಾನು ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ ನಡೆಸಿದ ಹಿನ್ನೆಲೆಯಲ್ಲಿ ಮನನೊಂದ ಪ್ರಿಯಕರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಯತ್ನ ನಡೆಸಿದ ಘಟನೆ, ಚಿಕ್ಕಮಗಳೂರು ಜಿಲ್ಲೇಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ. ಬಣಕಲ್ ನ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ ಯುವಕ. ರಾಘವೇಂದ್ರನು ಯುವತಿಯನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಯುವತಿಯ ಪೋಷಕರು ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದರು.ಈ ವಿಚಾರ ತಿಳಿದು ಮನನೊಂದ ರಾಘವೇಂದ್ರ […]

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಾಫಿ ತೋಟಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯಿಂದ ಕೂಲಿ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಕಳೆದ ವಾರ ವ್ಯಕ್ತಿಯ ಮೇಲೆ ಆನೆ ದಾಳಿಮಾಡಿದ್ದು, ಇಂದು ಮತ್ತೆ ತೋಟದಲ್ಲಿ ಆನೆಗಳ ಗುಂಪು ಓಡಾಟ ಜಾಸ್ತಿಯಾಗಿದೆ. ಕೂಲಿಕಾರ್ಮಿಕರಿಗೆ ಅರಣ್ಯ ಇಲಾಖೆಯವರು ಮುಂಜಾಗೃತ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಫಿ ತೋಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಚಲಿಸುತ್ತಿದ್ದ ಟ್ರಾಕ್ಟರ್ ಪಲ್ಟಿ, ಓರ್ವ ಸಾವು

ಚಲಿಸುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಾದಾಚಾರಿ ಮೇಲೆ ಮುಗುಚಿಬಿದ್ದು ಪಲ್ಟಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ದಾಸೇನಹಳ್ಳಿಯಲ್ಲಿ ನಡೆದಿದೆ. ಪಾದಾಚಾರಿ 16 ವರ್ಷದ ವಿರೇಶ್ ಎಂದು ತಿಳಿದು ಬಂದಿದ್ದು. ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬಡವನಹಳ್ಳಿಯ ಪಿ.ಎಸ್.ಐ ಹನುಮಂತರಾಯಪ್ಪ ಭೇಟಿ ನೀಡಿದ್ದು ,ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ,ಓರ್ವ ಸಾವು..

ಹುಣಸೇಹಣ್ಣು ತುಂಬಿಕೊಂಡು ಹೋಗ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಹೊಡೆದಿರುವ ಘಟನೆ ಶಿರಾ ತಾಲ್ಲೂಕಿನ ಬಡೇನಹಳ್ಳಿ ತಿರುವಿನಲ್ಲಿ ನಡೆದಿದೆ. ಶಿರಾದಿಂದ ಅಮಾರಪುರಕ್ಕೆ ಹೋಗ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ವಾಹನ ಪಲ್ಟಿಹೊಡೆದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಐವರಿಗೆ ಗಾಯವಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪಟ್ಟನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ:KSRTC ಬಸ್ ಚಾಲಕನ ಅಜಾಗೃತೆಗೆ ಮಹಿಳೆ ಬಲಿ

ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಅಜಾಗೃತೆಯಿಂದ ರಸ್ತೆ ದಾಟುತ್ತಿದ್ದ 65 ವರ್ಷದ ಮಹಿಳೆ ಸಾವನಪ್ಪಿದ್ದು. ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡದವಾಡಿ ಗ್ರಾಮದ ಗೇಟ್ ಬಳಿ ಈ ಘಟನೆ ಸಂಭವಿಸಿದೆ. KSRTC ಚಾಲಕ ಹೂವಿನ ವ್ಯಾಪಾರಿಯಾಗಿದ್ದ ಮೃತ ಮಹಿಳೆ ವಸಂತಮ್ಮನ ಮೇಲೆ ಬಸ್ ಹತ್ತಿಸಿ ಬಸ್ ಸಮೇತ ಪರಾರಿಯಾಗಿದ್ದಾನೆ . ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ತನಿಖೆ ನಡೆಯುತ್ತಿದೆ. ಇದನ್ನೂ ಓದಿ:ನಂದಿಬೆಟ್ಟ ಬೆಂಕಿ

ಚಿಕ್ಕಬಳ್ಳಾಪುರದ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಯಾರೋ ದುಷ್ಕರ್ಮಿಗಳು ಮಾಡಿದ ಕೃತ್ಯಕ್ಕೆ ಅರ್ಧ ನಂದಿಬೆಟ್ಟ ಬೆಂಕಿಗಾಹುತಿಯಾಗಿದೆ. ಬೆಂಕಿ ಆರಿಸಲು ಬೆಟ್ಟದ ಸಿಬ್ಬಂಧಿಗಳು ಹರಸಾಹಸಪಟ್ಟರು ಈ ಬೆಂಕಿಯ ಕೆನ್ನಾಲಿಗೆಗೆ ಅರ್ಧ ಬೆಟ್ಟ ಸುಟ್ಟುಹೋಗಿ ಅಲ್ಲಿದ್ದಂತಹ ನೀಲಗಿರಿ ತೋಪು ಭಾಗಶಹ ಸುಟ್ಟುಹೋಗಿದೆ… ಅಲ್ಲಿದ್ದಂತಹ ನವಾನರ ಸೈನ್ಯ ಬೆಂಕಿಗೆ ಹೆದರಿ ಗಾಬರಿಯಾಗಿ ಹಳ್ಳಿಗಳ ಕಡೆ ಮುಖ ಮಾಡಿವೆ. ಇಷ್ಟೆಲ್ಲಾ ಆದರೂ ಅಗ್ನಿಶಾಮಕದಳಕ್ಕೆ ವಿಚಾರ ಹೋದರೂ ಸಹ ಭಾರದ ಅಗ್ನಿಶಾಮಕದಳದವರು. ಇದನ್ನೂ ಓದಿ:ಸಾವಿನ ಜೊತೆಯಾದ ತಂದೆ ಮಗು  

Advertisement

Wordpress Social Share Plugin powered by Ultimatelysocial