ಜೆಡಿಎಸ್ ಬೃಹತ್ ಸಮಾವೇಶ ಯಶಸ್ವಿಗಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ಜಾನಕಿರಾಮ್ ಮನವಿ ಮಾಡಿದರು
ಕೆ ಆರ್ ಪೇಟೆ ಪಟ್ಟಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ನಿವಾಸದಲ್ಲಿ ಪತ್ರಿಕಾಗೋಷ್ಠಿಲ್ಲಿ
ಮಾತನಾಡಿದ ಪಕ್ಷದ ಬೃಹತ್ ಸಮಾವೇಶ ಪಟ್ಟಣ ಹಳೆ ಕಿಕ್ಕೇರಿ(ಅಂಬೇಡ್ಕರ್)ರಸ್ತೆಯ ಬಜಾಜ್ ಮೋಟಾರ್ಸ್ ಪಕ್ಕ ಆವರಣದಲ್ಲಿ 14-2-2023 ಮಂಗಳವಾರ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು ಅವರನ್ನ ಟಿ ಬಿ ಸರ್ಕಲ್ ನಿಂದ ಬೃಹತ್ ಬೈಕ್ ರಾಲಿ ಮುಖಂತರ ಸ್ವಾಗತಿಸಿ ನಂತರ ಬೃಹತ್ ಸಮಾವೇಶದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವಕೀಲ ವಿ ಎಸ್ ಧನಂಜಯ ಕುಮಾರ್ ಅವರ ನೂರಾರು ಬೆಂಬಲಿಗರು ಹಾಗೂ ಸ್ನೇಹಿತರು ಹಾಗೂ ಹಿತೈಷಿಗಳು ಸೇರಿದಂತೆ ಸಮುದಾಯದ ಜನತೆ ಹಲವರು ಮುಖಂಡರು ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಅಕ್ಕಿಹೆಬ್ಬಾಳು ಹೋಬಳಿ ಮಟ್ಟ ಸಮಾವೇಶ ಕಾರ್ಯಕ್ರಮವಿದ್ದು ತಾಲೂಕಿನ ಕಾರ್ಯಕರ್ತರು ಮತ್ತು ಎಲ್ಲಾ ಸಮುದಾಯದ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಜೆಡಿಎಸ್ ತಾಲೋಕು ಪಂಚಾಯಿತಿ ಮಾಜಿ ಸದಸ್ಯರು ಮಲ್ಲೇನಹಳ್ಳಿ ಮೋಹನ್,ಅಕ್ಕಿಹೆಬ್ಬಾಳು ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ, ಸಂತೆಬಾಚಹಳ್ಳಿ ಹೋಬಳಿ ಅಧ್ಯಕ್ಷ ರವಿಕುಮಾರ್, ಬಿರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಿರೇಗೌಡ, ಸೇರಿದಂತೆ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada