ದಾವಣಗೆರೆ: ಶಾಸಕರು ಹಾಗೂ ಸಂಸದರು ಕಿತ್ತಾಟ ನಡೆಸಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೋವಿಡ್-೧೯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ. ಮಾಡಾಳು ವಿರುಪಾಕ್ಷ, ಆರ್ಓ ಪ್ಲಾಂಟ್ ರಿಪೇರಿ ವಿಚಾರವಾಗಿ ಮಾತನಾಡುತ್ತಿದ್ದ ವೇಳೆ ಸಂಸದ ಸಿದ್ದೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏ ಏನೋ ಮಾತಾಡ್ತೀಯಾ ನೀನು ಅಂತ ಸಿದ್ದೇಶ್ವರ್ ಅಂದ್ರೆ ಏ ಕೂತುಕೊಳ್ಳೊ ನೀನು, ನಿಂದೇನು ಅಂತ ಮಾಡಾಳು ವಿರುಪಾಕ್ಷ ಗುಡುಗಿದ್ದಾರೆ. ಈ ಇಬ್ಬರ ನಡುವಿನ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಎಸ್ಪಿ ಹನುಮಂತರಾಯ ಗಲಾಟೆಗೆ ಬ್ರೇಕ್ ಹಾಕಿದ್ದಾರೆ.
ಸಂಸದ ಹಾಗೂ ಶಾಸಕರ ನಡುವೆ ಕಿತ್ತಾಟ
Please follow and like us: