ಪಕ್ಷದ ಕಮಲ ಚಿಹ್ನೆಯಡಿ ಯಾರೇ ಸ್ಪರ್ಧಿಸಿದರೂ ಗೆಲುವು ಖಚಿತ-ಅಶ್ವತ್‌ ನಾರಾಯಣ

ಉಪ ಚುನಾವಣೆಗೆ ಬಿಜೆಪಿ ತಯಾರಿ ನಡೆಸಿದ್ದು, ಪಕ್ಷದ ಕಮಲ ಚಿಹ್ನೆಯಡಿ ಯಾರೇ ಸ್ಪರ್ಧಿಸಿದರೂ  ಗೆಲುವು ಸಾಧಿಸುತ್ತಾರೆ ಎಂದು ಉನ್ನತ  ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಗೆ ಪಕ್ಷದಿಂದ ಎಲ್ಲ ತಯಾರಿ ಆಗಿದೆ. ಪಕ್ಷ ಬೂತ್    ಮಟ್ಟದಲ್ಲೂ ಸಹ ತಯಾರಿ ನಡೆಸಿದೆ.‌ ಎಲ್ಲ ರೀತಿಯಿಂದಲೂ ಜನರು ನಮಗೆ ಮತ ನೀಡಲು ಬೆಂಬಲ ಕೊಡಲು ತಯಾರಿದ್ದಾರೆ. ಜನರ ಆರ್ಶಿವಾದದಿಂದ ಎರಡು ಕ್ಷೇತ್ರದಲ್ಲಿ ಖಂಡಿತ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಎಲ್ಲರಿಗೂ ಅವಕಾಶ ಸಿಗುತ್ತದೆ. ಎಲ್ಲರೂ ಪಕ್ಷದ ಕಾರ್ಯಕರ್ತರೇ ಎಂದು ವಿಜಯೇಂದ್ರ ಅವರಿಗೆ ಚುನಾವಣಾ ಉಸ್ತುವಾರಿ ನೀಡಿದ ಕುರಿತು ಪ್ರತಿಕ್ರಿಯಿಸಿದರು…

ನೂತನ ಶಿಕ್ಷಣ ನೀತಿ ಬಗ್ಗೆ ಸಚಿವ ಅಶ್ವತ್‌ ನಾರಾಯಣ ಪ್ರತಿಕ್ರಿಯೆ

ಕಳೆದ ಐದು ವರ್ಷಗಳ ಕಾಲ ಸಮಯ ತೆಗೆದುಕೊಂಡು ಬಹಳ ಸಮಾಲೋಚನೆ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಘೋಷಣೆ ಮಾಡಿ ಒಂದು ವರ್ಷವಾಗಿದೆ ಅನುಷ್ಠಾನದಲ್ಲಿ ಯಾವುದೇ ಗೊಂಲವಿಲ್ಲ ನಿರಾಳವಾಗಿ ಉನ್ನತ ಶಿಕ್ಷಣದಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಎಲ್ಲಾ ಸ್ವಯತ್ತ ವಿವಿಗಳು ಈ ದಿಕ್ಕಿನಲ್ಲಿ ತಯಾರಿ ಸಹ ಮಾಡಿಕೊಂಡಿವೆ ಶಿವಮೊಗ್ಗದ ಕುವೆಂಪು ವಿ.ವಿ ಎಲ್ಲ ಬೋರ್ಡ್‌ ನಲ್ಲೂ ಅನುಮೋದನೆ ಆಗಿದ್ದು,ಇದೇ ತಿಂಗಳು 18ರಿಂದ ಆರಂಭವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್‌ ನಾರಾಯಣ ಹೇಳಿದರು…. 

Please follow and like us:

Leave a Reply

Your email address will not be published. Required fields are marked *

Next Post

ತರಕಾರಿ ವ್ಯಾಪಾರಿಗಳ ಕರ್ಕಶ ಮೈಕ್ ವಿರುದ್ಧ ಪೊಲೀಸರ ಸಮರ...!

Wed Oct 6 , 2021
ತರಕಾರಿ ವ್ಯಾಪಾರಿಗಳ ಕರ್ಕಶ ಮೈಕ್ ವಿರುದ್ಧ ಪೊಲೀಸರ ಸಮರ…! ಈ ಕುರಿತು ಪ್ರಕಟಣೆ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು, ತರಕಾರಿ ವ್ಯಾಪಾರಿಗಳು ಬದುಕಿಗಾಗಿ ವ್ಯಾಪಾರ ಮಾಡುವುದು ತಪ್ಪಲ್ಲ. ಆದರೆ ಯಾರೂ ಮೈಕ್ ಬಳಿಸಿ ವೃದ್ಧರಿಗೆ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ತೊಂದರೆ ಮಾಡುವ ರೀತಿಯಲ್ಲಿ ಜೋರಾಗಿ ಕೂಗಬಾರದು. ಶಬ್ಧ ಮಾಲಿನ್ಯದಿಂದ ಜನರಿಗೆ ತೊಂದರೆ ಆಗುತ್ತಿದ್ದು, ಇಂತಹ ಪ್ರಕರಣಗಳು ಇನ್ನು ಮೂದೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು. […]

Advertisement

Wordpress Social Share Plugin powered by Ultimatelysocial