ಮೋದಿ ಆಡಳಿತ ಹಾಗೂ ಕಾರ್ಮಿಕರ, ಬಡವರ, ರೈತರ ವಿರುದ್ಧ ರೂಪಿಸುತ್ತಿರುವ ಕಾಯ್ದೆ ಹಾಗೂ ಕಾರ್ಪೊರೇಟ್ ಬಂಡವಾಳ ಪರ ರೂಪಿಸುತ್ತಿರುವ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕೊಪ್ಪಳ ಗಂಗಾವತಿಯಲ್ಲಿ 23 ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಇಂದು ಚಾಲನೆಯನ್ನು ನೀಡಲಾಯಿತು.ಕಾರ್ಯಕ್ರಮವನ್ನು ನವದೆಹಲಿಯ ಪೊಲಿಟ್ ಬ್ಯೂರೋ ಸದಸ್ಯ ಕಾಂ.ಪ್ರಕಾಶ್ ಕಾರಟ್ ಉದ್ಘಾಟಿಸಿದರು.ಸಮ್ಮೇಳನದಲ್ಲಿ ಕಾರ್ಮಿಕ ಹಕ್ಕುಗಳ ಬಗ್ಗೆ ಚರ್ಚಿಸಲಾಯಿತು.ದೇಶದಲ್ಲಿ 2 ನೇ ಬಾರಿ ಮೋದಿ ಸರ್ಕಾರ ಆಡಳಿತಕ್ಕೆ ಬಂದಿದ್ದು ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುತ್ತಿದೆ ಅಂತಾ ಗಂಭೀರ ಆರೋಪಗಳನ್ನು ಮಾಡಲಾಯಿತು. ಭದ್ರತಾ,ಸರಕ್ಷ,ಆರೋಗ್ಯ, ಕೈಗಾರಿಕ ಸಂಹಿತಿಗಳನ್ನು ಕಾರ್ಮಿಕರ ವಿರೋಧಿಯಾಗಿ ರೂಪಿಸಿದೆ.ಇದರಿಂದ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗದಂತೆ ಮೋದಿ ಸರ್ಕಾರ ಬಂಡವಾಳ ಪರ ಕೆಲಸ ಮಾಡುತ್ತಿದೆ.ಇಷ್ಟೆ ಅಲ್ದೆ ಕೃಷಿ ಕಾಯ್ದೆಗಳನ್ನು ರೂಪಿಸಿ ರೈತರು ತಮ್ಮ ಬೆಳೆಯನ್ನು ಸ್ವಾತಂತ್ರ್ಯವಾಗಿ ಮಾರದಂತೆ, ಮಾರುಕಟ್ಟೆ ರೂಪಿಸಿಕೊಳ್ಳದಂತ ಸ್ಥಿತಿಯನ್ನು ತರಲು ಹೊರಟಿದೆ. ಒಟ್ಟಾರೆ ರೈತ, ಕಾರ್ಮಿಕ, ದಲಿತ ವಿರೋಧಿಯಾಗಿರುವ ಮೋದಿ ಸರ್ಕಾರ ಬಡವರ, ರೈತರ, ಕಾರ್ಮಿಕ ಹಕ್ಕುಗಳನ್ನು ದಮನ ಮಾಡಲು ಹೊರಟಿದ್ದು, ದುಡಿಯುವ ವರ್ಗದ ವಿರೋಧಿಯಾಗಿದೆ ಅಂತಾ ಕೇಂದ್ರ ಸರ್ಕಾರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: