ನವದೆಹಲಿ: ಗುಂಡಿನ ದಾಳಿ ಹಿನ್ನೆಲೆ: ಓವೈಸಿಗೆ ‘ಝಡ್‌’ ಶ್ರೇಣಿಯ ಭದ್ರತೆ ಒದಗಿಸಿದ ಕೇಂದ್ರ

 

ನವದೆಹಲಿ: ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ತಕ್ಷಣವೇ ಜಾರಿಗೆ ಬರುವಂತೆ ‘ಝಡ್‌’ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.ಈ ಕುರಿತು ಶುಕ್ರವಾರ ಟ್ವೀಟಿಸಿರುವ ಎಎನ್‌ಐ, ‘ವಿಶ್ವಾಸಾರ್ಹ ಮೂಲಗಳ ಪ್ರಕಾರ, ಭಾರತ ಸರ್ಕಾರವು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿಯ ಭದ್ರತೆಯನ್ನು ಪರಿಶೀಲಿಸಿದೆ’ ಎಂದು ತಿಳಿಸಿದೆ.ತಕ್ಷಣವೇ ಜಾರಿಗೆ ಬರುವಂತೆ ಅವರಿಗೆ ಸಿಆರ್‌ಪಿಎಫ್‌ನ ಝಡ್‌ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.ಉತ್ತರ ಪ್ರದೇಶದ ಮೀರತ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಮುಗಿಸಿ ದೆಹಲಿಗೆ ತೆರಳುತ್ತಿದ್ದಾಗ ಓವೈಸಿ ಅವರ ಬೆಂಗಾವಲು ವಾಹನದ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿತ್ತು.ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್ಮುಂದೆ ದೀರ್ಘ‌ ಬರಹಕ್ಕೆ ಟ್ವಿಟರ್‌ನಲ್ಲೂ ಅವಕಾಶ?

Fri Feb 4 , 2022
ವಾಷಿಂಗ್ಟನ್‌: ಟ್ವಿಟರ್‌ನಲ್ಲಿ ಹೆಚ್ಚೆಂದರೆ 280 ಕ್ಯಾರೆಕ್ಟರ್‌ಗಳ ಟ್ವೀಟ್‌ ಮಾಡಬಹುದು. ಅದಕ್ಕಿಂತ ದೀರ್ಘ‌ ಟ್ವೀಟ್‌ ಮಾಡಬೇಕೆಂದರೆ ಅದನ್ನು ಎಲ್ಲಾದರೂ ಬರೆದು ಅದರ ಸ್ಕ್ರೀನ್‌ ಶಾಟ್‌ ಮಾತ್ರ ಹಂಚಿಕೊಳ್ಳಬಹುದಷ್ಟೇ.ಆದರೆ ಇನ್ನು ಮುಂದೆ ಹಾಗಿರುವುದಿಲ್ಲ.ಫೇಸ್‌ಬುಕ್‌ ರೆಡ್ಡಿಟ್‌ ರೀತಿಯಲ್ಲೇ ದೀರ್ಘ‌ ಬರಹಗಳನ್ನು ನೀವು ಟ್ವಿಟರ್‌ನಲ್ಲೂ ಹಂಚಿಕೊಳ್ಳಬಹುದು. ಅದಕ್ಕೆಂದು ಸಂಸ್ಥೆ ಹೊಸ ಅಪ್‌ಡೇಟ್‌ ಒಂದರ ಮೇಲೆ ಕೆಲಸ ಮಾಡುತ್ತಿದೆ.ಡಿಜಿಟಲ್‌ ಪತ್ತೆದಾರಿಕೆ ಕೆಲಸ ಮಾಡುವುದಕ್ಕೆ ಪ್ರಸಿದ್ಧರಾಗಿರುವ ಜಾನೆ ಮಂಚುನ್‌ ವೊಂಗ್‌ ಈ ಬಗ್ಗೆ ಟ್ವಿಟರ್‌ನಲ್ಲೇ ಮಾಹಿತಿ ಹಂಚಿ ಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial