ಸಿಂಧನೂರು: ಟ್ರ್ಯಾಕ್‌ ದಟ್ಟಣೆ ತಪ್ಪಿಸಲು ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಾಣವಾಗಬೇಕೆಂಬ ಬಹುದಿನಗಳ ಬೇಡಿಕೆ ಈಡೇರುವ ಮುನ್ಸೂಚನೆ ದಟ್ಟವಾಗಿದ್ದು, ಭೂಸ್ವಾ ಧೀನಕ್ಕೆ ಅಗತ್ಯವಿದ್ದ ಅನುದಾನ ನೀಡಲು ರಾಜ್ಯ ಸರಕಾರ ಅಸ್ತು ಎಂದಿದೆ. ರಾಜ್ಯ-ಕೇಂದ್ರ ಸರಕಾರಶೇ.50/50 ಆಧಾರದಲ್ಲಿ ಭೂಸ್ವಾಧೀನಕ್ಕೆ ಹಣ ವಿನಿಯೋಗಿಸ ಬೇಕಿದ್ದು, ರಾಜ್ಯ ಸರಕಾರ ತನ್ನ ಪಾಲಿನ ಹಣ ಕೊಡಲುಮುಂದಾಗಿದೆ. ಕಳೆದ ಫೆಬ್ರವರಿಯಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದ ರಾಜ್ಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನಕ್ಕೆ ತಗಲುವ 87.55 ಕೋಟಿ ರೂ. ಅನುದಾನ ನಿರೀಕ್ಷೆಯಲ್ಲಿತ್ತು.ಈ ನಿಟ್ಟಿನಲ್ಲಿ […]

ಹುಬ್ಬಳ್ಳಿ: ಪಕ್ಷದ ರಾಜ್ಯ ಕಾರ್ಯಕಾರಣಿಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಕ್ಷದ ಸಂಘಟನೆ, ಮುಂಬರುವ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕಾರಣಿ ಅಜೆಂಡಾ ಬಗ್ಗೆ ಪಕ್ಷ ಹೇಳುತ್ತದೆ. ಸಂಪುಟ ವಿಸ್ತರಣೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಪ್ರೀತಿಯಿಂದ ಸಲಹೆ: ಶಾಸಕ ಎಂ.ಪಿ.ಕುಮಾರಸ್ವಾಮಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ. ಅದಕ್ಕೆ ನನ್ನ ವಿಶ್ರಾಂತಿ ಬಗ್ಗೆ […]

ಬೆಂಗಳೂರು,ಡಿ.28- ಕೊರೋನಾ ರೂಪಾಂತರಿ ವೈರಸ್ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ 10 ದಿನಗಳ ನೈಟ್ ಕಫ್ರ್ಯೂ ಇಂದಿನಿಂದ ಜಾರಿಯಲ್ಲಿದ್ದು, ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧವಿರುತ್ತದೆ. ಅಗತ್ಯ ಸೇವೆಗಳಾದ ಹಾಲು, ಹಣ್ಣು, ತರಕಾರಿ, ವೈದ್ಯಕೀಯ, ಸರಕು ಸಾಗಾಣಿಕೆ ಸೇರಿದಂತೆ ತುರ್ತು ಸೇವೆಗಳು ಯಥಾಸ್ಥಿತಿಯಲ್ಲಿ ಇರಲಿವೆ. ಖಾಸಗಿ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಗುರುತಿನ ಚೀಟಿಯನ್ನು ಪ್ರದರ್ಶಿಸಿ ಪ್ರಯಾಣಿಸಬಹುದು. ಒಂದು […]

ಹುಬ್ಬಳ್ಳಿ: ಪಕ್ಷ ಸಂಘಟನೆ, ವಿಧಾನಸಭಾ ಚುನಾವಣಾ ತಯಾರಿ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆ ಚರ್ಚೆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಾಲನೆ ದೊರೆತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಗೋಪೂಜೆ ಮಾಡಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕಾರಿಣಿಗೆ ಚಾಲನೆ ನೀಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಸೋಲು, ಪಂಚಾಯತ್ ಚುನಾವಣೆ, ವಿಧಾನಸಭಾ ಚುನಾವಣೆಗೆ ತಯಾರಿ, ಸಚಿವ ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಸೇರಿದಂತೆ ಹಲವು ಮಹತ್ವದ […]

“ದೊನ್ನೆ ಬಿರಿಯಾನಿ” ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರ ಅತ್ಯಂತ ಜನಪ್ರಿಯ ಬಿರಿಯಾನಿಯಾಗಿದೆ. ಅಂತಹದ್ದೆ ಒಂದು “ದೊನ್ನೆ ಬಿರಿಯಾನಿ ಅಂಗಡಿ ಮನೆ” ಹೊಟೆಲ್ ಇತ್ತಿಚಿಗೆ ಬೆಂಗಳೂರಿನ ಮತ್ತಿಕೇರೆ ರಸ್ತೆಯಲ್ಲಿರುವ ರಾಮಯ್ಯ ಆಸ್ಪತ್ರೆ ಬಸ್ ನಿಲ್ದಾಣ ಬಳಿ ಆರಂಭವಾಗಿದೆ. ಉದಯಗೌಡ ಹಾಗೂ ಅನುಪಲ್ಲವಿ ದಂಪತಿಗಳು ಆರಂಬಿಸಿರುವ “ದೊನ್ನೆ ಬಿರಿಯಾನಿ ಅಂಗಡಿ ಮನೆ” ಬಿರಿಯಾನಿ ಪ್ರಿಯರ ಅಚ್ಚುಮೆಚ್ಚಿನ ಹೊಟೆಲ್ ಆಗಿದೆ. ರುಚಿ ಹಾಗೂ ಶುಚಿತ್ವಕ್ಕೆ ಉದಯ ಗೌಡ ಹಾಗೂ ಅನುಪಲ್ಲವಿ ದಂಪತಿಗಳು ಅಷ್ಟೇ ಮಹತ್ವ ಕೊಡುತ್ತಾರೆ. ಒಮ್ಮೆ ಇಲ್ಲಿ ಬಿರಯಾನಿ ಸವಿದವರು […]

ಹುಬ್ಬಳ್ಳಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಮವಾರದ ಸಂತೆಯಲ್ಲಿ ತರಕಾರಿ ಬೆಲೆ ಕಳೆದ ವಾರಕ್ಕಿಂತ ದುಪ್ಪಟ್ಟಾಗಿದೆ. ಬದನೆಕಾಯಿ ಕೆ.ಜಿ.ಗೆ ₹ 200, ಹಸಿ ಮೆಣಸಿನಕಾಯಿ ₹ 150 ಹಾಗೂ ಬೆಂಡೆಕಾಯಿ ಬೆಲೆ ಕೆ.ಜಿ.ಗೆ ₹ 100ಕ್ಕೆ ಏರಿಕೆಯಾಗಿದೆ. ಕಳೆದ ವಾರ ಒಂದು ಕೆ.ಜಿ ಬದನೆಕಾಯಿ ಹಾಗೂ ಹಸಿ ಮೆಣಸಿನಕಾಯಿ ಬೆಲೆ ಕೆ.ಜಿ.ಗೆ ತಲಾ ₹ 80-₹ 100 ಇತ್ತು. ಬೆಂಡೆಕಾಯಿ ₹ 60-₹ 70 ಇತ್ತು. ಆದರೆ ಈ ವಾರ […]

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ ಬಹಳ ಜನಪ್ರಿಯರಾಗಿದ್ದಾರೆ ಮತ್ತು ಎಲ್ಲರೂ ಅವರನ್ನು ವಿಶ್ವದ ಅತ್ಯುತ್ತಮ ನಾಯಕ ಎಂದು ಪರಿಗಣಿಸುತ್ತಾರೆ. 40ರ ಹರೆಯದಲ್ಲಿಯೂ ಕಳೆದ ಐಪಿಎಲ್ ಋತುವಿನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಬಾರಿಯೂ ಸಹ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022 ಸೀಸನ್‌ಗಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಆದರೆ, […]

ಮುಂದಿನ ವರ್ಷ ನಡೆಯಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಷಯಗಳಿಂದ ವಿಶೇಷವೆನಿಸಿಕೊಳ್ಳುತ್ತಿದೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿದ್ದು, ಇದಕ್ಕೆಲ್ಲಾ ಕಾರಣ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗುತ್ತಿರುವುದು. ಹೌದು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಕೂಡ ಕಣಕ್ಕಿಳಿಯಲಿದ್ದು ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಈಗಾಗಲೇ ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳ […]

ಪತ್ನಿ ಹಾಗೂ ಮಗು ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬ ಇಬ್ಬರನ್ನು ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದಾಗ ಆತನ ಪತ್ನಿ ಮಗುವಿನೊಂದಿಗೆ ಮನೆಯ ಕಿಟಕಿ ಒಡೆದು ಓಡಿ ಹೋಗಿದ್ದಾಳೆ. ಬಂಗಾಳದ ಪಿಂಗ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಬಡಗಿಯಾಗಿರುವ ಪತಿ, ಪತ್ನಿ ಮತ್ತು ಮಗುವನ್ನು ಹುಡುಕಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದ್ದು ವ್ಯರ್ಥವಾಗಿದೆ. ಕೊನೆಯ ಉಪಾಯವಾಗಿ, ಅವರು […]

  ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಓ ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಹೊರಬೀಳಲಿದೆ. ಆದರೂ ಸಹ ಎಲ್​​ಐಸಿ ಪಾಲಿಸಿದಾರರು ತಮ್ಮ ಪಾನ್​ ಕಾರ್ಡ್​ನ್ನು ಪಾಲಿಸಿಯ ಜೊತೆಗೆ ಲಿಂಕ್​ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಎಲ್​ಐಸಿಯು ಇತ್ತೀಚಿಗೆ ತನ್ನೆಲ್ಲ ಪಾಲಿಸಿದಾರರಿಗೆ ಅನ್ವಯವಾಗುವಂತೆ ಕಂಪನಿಯ ಮುಂಬರುವ ಐಪಿಓ ಚಂದಾದಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ಕಂಪನಿಯ ದಾಖಲೆಗಳಲ್ಲಿ ತಮ್ಮ ಪಾನ್​ ಕಾರ್ಡ್​ನ್ನು ಲಿಂಕ್​ ಮಾಡಿದರೆ ಮಾತ್ರ ಅದರ ಮುಂಬರುವ ಐಪಿಓದ ಚಂದಾದಾರರಾಗಬಹುದು […]

Advertisement

Wordpress Social Share Plugin powered by Ultimatelysocial