ತೆಂಗಿನ ಕಾಯಿ ಒಡೆಯುವಾಗ ಸಿಗುವ ನೀರನ್ನು ವ್ಯರ್ಥವೆಂದು ಸಿಂಕ್ ಗೆ ಚೆಲ್ಲುತ್ತೀರಾ, ಬೇಡ. ಇದರಲ್ಲಿರುವ ಪೌಷ್ಟಿಕಾಂಶಗಳು ಎಳನೀರಿಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ. ತೆಂಗಿನಕಾಯಿ ನೀರು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಸಿಲಿನ ಬೇಗೆಯಿಂದ ನಿರ್ಜಲೀಕರಣಗೊಳ್ಳುವ ದೇಹಕ್ಕೆ ಬೇಕಿರುವ ನೀರಿನಾಂಶವನ್ನು ಒದಗಿಸುತ್ತದೆ. ದೇಹಕ್ಕೆ ತಂಪನ್ನು ಒದಗಿಸುವ ಸಕ್ಕರೆ ಮತ್ತು ಇಲೆಕ್ಟ್ರೋಲೈಟ್ಸ್ ಸಮನಾಗಿ ಬೆರೆತಿರುವ ಪೇಯದ ಅವಶ್ಯಕತೆ ನಮ್ಮ ದೇಹಕ್ಕಿದೆ. ತೆಂಗಿನ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಂಜೀಮ್ಗಳಿದ್ದು […]
ರಾಜ್ಯ
ತನ್ನ ದೇಹದ ಎಲ್ಲಾ ಭಾಗವನ್ನೂ ಇತರರಿಗೆ ನೆರವಾಗುವಂತೆ ಬಿಟ್ಟುಕೊಡುವ ಅಪರೂಪದ ಗಿಡ ಬಾಳೆ. ಬಾಳೆಕಾಯಿ, ಹಣ್ಣು, ಹೂ, ಒಳಗಿನ ದಿಂಡು ಎಲ್ಲವೂ ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು, ವಿಟಮಿನ್ ಗಳನ್ನು ಒದಗಿಸುತ್ತದೆ. ಬಾಳೆ ದಿಂಡಿನ ಪ್ರಯೋಜನಗಳೇನು ಎಂದಿರಾ ಇಲ್ಲಿ ಕೇಳಿ. ಬಾಳೆ ದಿಂಡು ಸಾಕಷ್ಟು ಒಗರನ್ನು ಒಳಗೊಂಡಿರುತ್ತದೆ. ಬಲಿತಿರುವ ಬಾಳೆ ಗೊನೆ ಕಡಿದ ಬಳಿಕ ಅದರ ತಿರುಳನ್ನು ಬಗೆದು ಒಳಗಿರುವ ದಿಂಡನ್ನು ತೆಗೆಯಬೇಕು. ಇದು ಕಿಡ್ನಿ ಸ್ಟೋನ್ ಗೆ ರಾಮಬಾಣ. […]
ಪ್ರತಿ ಬಾರಿಯೂ ಹೊಸವರ್ಷದ ಸಮಯದಲ್ಲಿ ಈ ಬಾರಿ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಂದುಕೊಳ್ಳುವುದು ಸಾಮಾನ್ಯ, ಆದರೆ ಅದನ್ನ ಪೂರ್ಣ ಮಾಡುವುದು ಸುಲಭವಲ್ಲ. ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಖಿನ್ನತೆಯಿಂದ ಯುವಕರು ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಆಹಾರ ನಮ್ಮ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಅರ್ಧದಷ್ಟು ಕಾಯಿಲೆ ಬರುತ್ತದೆ. ಇದು ವಿಶೇಷವಾಗಿ ತೂಕ ಹೆಚ್ಚಾಗಲು ಮೊದಲ ಕಾರಣವಾಗಿದೆ. ಆದ್ದರಿಂದ ಸಂಸ್ಕರಿತ […]
ಚಿತ್ರದುರ್ಗ : ಖಾಲಿ ಜಾಗದಲ್ಲಿ ನೂರಾರು ಆಧಾರ್ ಕಾರ್ಡ್ಗಳು ಚೆಲ್ಲಾಪಿಲ್ಲಿಯಾಗಿ ಬೀದಿಪಾಲು ಆಗಿರುವ ಘಟನೆಯೊಂದು ನಡೆದಿದೆ. ಈ ಘಟನೆಯು ಚಿತ್ರದುರ್ಗದ ಚಳ್ಳಕೆರೆಯ ಕಂದಾಯ ಬಡಾವಣೆ ಜಾಗದಲ್ಲಿ ನಡೆದಿದ್ದು, ವಿದ್ಯಾರ್ಥಿಗಳಿಗೆ ಸೇರಿದ ಆಧಾರ್ ಕಾರ್ಡ್ಗಳು ಬೀದಿಪಾಲು ಆಗಿದೆ. ಬೀದಿಪಾಲಾದ ಆಧಾರ್ ಕಾರ್ಡ್ಗಳನ್ನು ಕಂಡು ಸ್ಥಳೀಯರ ಆಕ್ರೋಶವನ್ನೂ ಹೊರಹಾಕಿದ್ದು, ಸ್ಥಳೀಯರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಬೆಳಗಾವಿ : ಗಡಿ ಭಾಗದಲ್ಲಿ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಸಂಘಟನೆ ನಿಷೇಧ ಮಾಡಲು ನಮ್ಮ ಆಗ್ರಹವಿದೆ. ಆದರೆ, ಕರ್ನಾ ಟಕ ಬಂದ್ ಮಾಡಲು ನಮ್ಮ ಬೆಂಬಲ ಇಲ್ಲ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು. ನಗ ರದಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮೇಲೆ ನಿಷೇಧ ಹೇರ ಬೇಕೆಂದು ಬೆಂಗಳೂರಿನ ಕೆಲ ಕನ್ನಡ ಪರ ಸಂಘಟನೆಗಳು ಡಿ.31 ರಂದು ಕರ್ನಾಟಕ ಬಂದ್ಗೆ […]
ಮಂಡ್ಯ :- ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಚಳವಳಿಗೆ ಹುಟ್ಟಿದ ಸಂಘಟನೆಯೇ ಕಾಂಗ್ರೆಸ್ ಪಕ್ಷ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಶಿವಪುರದಲ್ಲಿ ನಡೆದ 137 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ 136 ವರ್ಷ ಕಳೆದಿದೆ ಇಂದು 137ನೇ ವರ್ಷಾಚರಣೆ ಮಾಡ್ತಿದ್ದೇವೆ. ಸ್ವಾತಂತ್ರ್ಯ ಹೋರಾಟ ಮಾಡಲಿಕ್ಕೆ ಮಾತ್ರ ಹುಟ್ಟಿದ್ದಲ್ಲ ಕಾಂಗ್ರೆಸ್ ಪಕ್ಷ ಭಾರತೀಯರ ಕಷ್ಟ […]
ಬೆಳಗಾವಿ: ಹಲವು ವರ್ಷಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಪೋರ್ಚುಗೀಸ್ ಕಾಲದ ರಸ್ತೆಯನ್ನು ಅಭಿವೃದ್ಧಿಪಡಿಸಲು ಗೋವಾ ಸರ್ಕಾರ ಹಸಿರು ನಿಶಾನೆ ತೋರಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪರ್ವಾಡ, ಕಣಕುಂಬಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯು ಗೋವಾದ ಸತ್ರೆಯಿಂದ ಕರ್ನಾಟಕದ ಪರ್ವಾಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗೋವಾ ಸರ್ಕಾರದ ಈ ನಿರ್ಧಾರವು ಪರ್ವಾಡ ಗ್ರಾಮಸ್ಥರು ಒಂದು ಗಂಟೆಯೊಳಗೆ ಕಾಲ್ನಡಿಗೆಯಲ್ಲಿ ಗೋವಾ ಗಡಿಯನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಅವರ […]
ನವದೆಹಲಿ: ಎರಡು ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯೊಬ್ಬರು, ಲೋಡ್ ಸಾಗಿಸಲು ಕ್ಯಾರಿಯರ್ ಹೊಂದಿರುವ ಮಾರ್ಪಡಿಸಿದ ದ್ವಿಚಕ್ರ ವಾಹನವನ್ನು ಓಡಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನಸೆಳೆದಿದೆ. ಇದನ್ನು ನೋಡಿದ ನಂತರ ಉದ್ಯಮಿ ಆನಂದ್ ಮಹೀಂದ್ರ ಸೋಮವಾರ ಆ ವ್ಯಕ್ತಿಗೆ ವಿಶೇಷವಾದ ಆಫರ್ ಒಂದನ್ನು ನೀಡಿದ್ದಾರೆ. ವಿಶೇಷ ಚೇತನ ವ್ಯಕ್ತಿಯೋರ್ವ ಮನೆಯ ಜವಾಬ್ದಾರಿ ಹೊತ್ತುಕೊಂಡು ವಿಭಿನ್ನವಾಗಿ ವಿನ್ಯಾಸ ಮಾಡಿರುವ ಬೈಕ್ ಸಹಾಯದಿಂದ ಕೂಲಿ ಕೆಲಸ ಮಾಡುತ್ತಾರೆ. ಅದರಿಂದ ಬರುವ ಹಣದಿಂದ ಹೆಂಡತಿ, ಇಬ್ಬರು ಮಕ್ಕಳು ಹಾಗೂ ವಯಸ್ಸಾದ […]
ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಆರ್ಭಟ ಹಾಗೂ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಆರೋಗ್ಯ ಕಾರ್ಯಕರ್ತರು ಮನೆ ಮನೆ ಸರ್ವೆ ನಡೆಸಿ, ಐಎಲ್ಐ ಹಾಗೂ ಸಾರಿ ಪ್ರಕರಣಗಳ ಕುರಿತಂತೆ ಸರ್ವೆ ನಡೆಸುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಸಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 29-12-2021ರ ನಾಳೆಯಿಂದ 15-01-2022ರವರೆಗೆ ಒಂದು ಬಾರಿ ಐಎಲ್ಐ […]
ಉತ್ತರಪ್ರದೇಶದ ಕಾನ್ಪುರ್ನಲ್ಲಿ ಇತ್ತೀಚೆಗೆ ಸಿಕ್ಕ ದಾಖಲೆ ಇಲ್ಲದ ಸುಮಾರು 250 ಕೋಟಿ ಕ್ಯಾಶ್ ಬಗ್ಗೆ ಇವತ್ತು ಪ್ರಧಾನಿ ಮೋದಿ ಮಾತನಾಡಿದ್ದಾರೆ. ನಮ್ಮ ರಾಜಕೀಯ ವಿರೋಧಿಗಳು ಎಲ್ಲವನ್ನ ತಾವು ಮಾಡಿದ್ದು, ತಾವು ಮಾಡಿದ್ದು ಅಂತ ಕ್ರಡಿಟ್ ತಗೋತಾರೆ. ಹಾಗಿದ್ರೆ ಇಲ್ಲಿ ಸಿಕ್ಕಿರೋ ಬಾಕ್ಸ್ಗಟ್ಟಲೇ ನೋಟನ್ನ ಕೂಡ ಅವರದ್ದೇ ಅಂತ ಹೇಳ್ತಿಲ್ಲ, ಈ ಕ್ರೆಡಿಟ್ ಅನ್ನ ತಗೋತಿಲ್ಲ. ಈಗ ಬಾಯಿಗೆ ಬೀಗ ಹಾಕ್ಕೊಂಡು ಸುಮ್ಮನೆ ಕೂತಿದ್ದಾರೆ ಅಂತ ಪ್ರಧಾನಿ ಮೋದಿ ಕಾನ್ಪುರ್ನಲ್ಲಿ ಕುಟುಕಿದ್ದಾರೆ. […]