ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದ ಮುಂಭಾಗದಲ್ಲಿ ಮಾನ್ಯ ಆಡಳಿತಗಾರರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.ಅಭಿಯಾನದ ಅಂಗವಾಗಿ ಪಾಲಿಕೆ ಅಧಿಕಾರಿ,ನೌಕರರುಗಳು, 1000ಕ್ಕೂ ಹೆಚ್ಚು ಅಧಿಕಾರಿ,ನೌಕರರು ಭಾಗವಹಿಸಿ ನಾಡಗೀತೆ, ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಹಾಗೂ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನು ಹಾಡಲಾಯಿತು ಹಾಗೂ ಸಂಕಲ್ಪ ವನ್ನು ತೆಗೆದುಕೊಳ್ಖಲಾಯಿತು…ಈ ವೇಳೆ ವಿಶೇಷ ಆಯುಕ್ತರುಗಳು ಅಧಿಕಾರಿ,ನೌಕರರುಗಳು ಉಪಸ್ಥಿತರಿದ್ದರು ಹಾಗೂ ಬಿಬಿಎಂಪಿಯ ಎಲ್ಲಾ ವಲಯಗಳಲ್ಲಿಯೂ ಸಹ “ಮಾತಡ್ ಮಾತಡ್ ಕನ್ನಡ” ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada