ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ !

 

ಬ್ರೇಕಪ್​ ನಂತರದಲ್ಲಿ ಬಹುತೇಕರು ಬೇಸರಕ್ಕೆ ತುತ್ತಾಗುತ್ತಾರೆ. ಕಿಯಾರಾ ಈ ನೋವಿನಿಂದ ಹೊರ ಬಂದಂತೆ ಇದೆ. ಸಂದರ್ಶನವೊಂದರಲ್ಲಿ ಮಾತನಾಡುವಾಗ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.ನಟಿ ಕಿಯಾರಾ ಅಡ್ವಾಣಿ  ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಅವರ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ‘ಜುಗ್ ಜುಗ್ ಜಿಯೋ’ ಚಿತ್ರದ  ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿರುವ ಅವರು, ವೈಯಕ್ತಿಕ ಜೀವನದಲ್ಲೂ ಖುಷಿಯಿಂದ ಇದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ಸ್ವತಃ ಕಿಯಾರಾ ಅಡ್ವಾಣಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಆದರೆ, ಇದನ್ನು ಅವರು ಖಚಿತಪಡಿಸಿಲ್ಲ. ಅವರದ್ದು ಬ್ರೇಕಪ್ ಆಗಿದೆ ಎಂಬ ವರದಿಗಳು ಕೂಡ ಪ್ರಕಟಗೊಂಡವು. ಈ ಬಗ್ಗೆಯೂ ಕಿಯಾರಾ ಮೌನ ತಾಳಿದ್ದಾರೆ. ಬ್ರೇಕಪ್​ ನಂತರದಲ್ಲಿ ಬಹುತೇಕರು ಬೇಸರಕ್ಕೆ ತುತ್ತಾಗುತ್ತಾರೆ. ಕಿಯಾರಾ ಈ ನೋವಿನಿಂದ ಹೊರ ಬಂದಂತೆ ಇದೆ.

ನವಭಾರತ್ ಟೈಮ್ಸ್​ಗೆ ಕಿಯಾರಾ ಅಡ್ವಾಣಿ ಸಂದರ್ಶನ ನೀಡಿದ್ದಾರೆ. ಈ ವೇಳೆ ಬ್ರೇಕಪ್​ ಬಗ್ಗೆ ಪ್ರಶ್ನೆ ಮಾಡಲಾಯಿತು. ‘ನಾನು ಈ ಬಗ್ಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ನಾನು ಏನೂ ಹೇಳಿಲ್ಲ ಎಂದರೂ ಸುದ್ದಿ ಬರೆಯುತ್ತಾರೆ. ಇನ್ನು, ನಾನು ಏನಾದರೂ ಹೇಳಿದರೆ ಅದರ ಬಗ್ಗೆ ಹೇಗೆ ಬರೆಯುತ್ತಾರೋ ನನಗೆ ಗೊತ್ತಿಲ್ಲ. ನಾನು ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಖುಷಿಯಾಗಿದ್ದೇನೆ’ ಎಂದಿದ್ದಾರೆ ಅವರು.

ಕಿಯಾರಾಗೆ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತಿದೆ. ಕಾರ್ತಿಕ್ ಆರ್ಯನ್ ಜತೆಯಾಗಿ ನಟಿಸಿದ ‘ಭೂಲ್​ ಭುಲಯ್ಯ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 230 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಕಿಯಾರಾ ಇದರಿಂದ ಖುಷಿಯಾಗಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಜುಗ್​ ಜುಗ್​ ಜಿಯೋ’ದಲ್ಲಿ ವರುಣ್ ಧವನ್​ಗೆ ಜತೆಯಾಗಿ ಅವರು ನಟಿಸಿದ್ದಾರೆ. ಈ ಸಿನಿಮಾ ಆರು ದಿನಕ್ಕೆ 50 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಈ ವಾರ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಪುಷ್ಪ 2'ಗೂ ಮುನ್ನ ಮತ್ತೊಂದು ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ !

Fri Jul 1 , 2022
  ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ‘ಪುಷ್ಪ’ ಸಿನಿಮಾ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರುತ್ತಿದ್ದಂತೆ ಅಲ್ಲು ಅರ್ಜುನ್ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. ‘ಪುಷ್ಪ’ ಬ್ಲಾಕ್‌ ಬಸ್ಟರ್ ಹಿಟ್ ಆದ ಬಳಿಕ ‘ಪುಷ್ಪ 2’ಗಾಗಿ ಕಾದು ಕೂತಿದ್ದಾರೆ. ಅಲ್ಲು ಅರ್ಜುನ್‌ಗೆ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಸಿನಿಮಾ ‘ಪುಷ್ಪ’ ಬಳಿಕ ಸೀಕ್ವೆಲ್‌ಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಕಾದು ಕೂತಿದ್ದಾರೆ. ಆದ್ರೀಗ ‘ಪುಷ್ಪ 2’ಗೂ ಮುನ್ನ ಮತ್ತೊಂದು ಸಿನಿಮಾದಲ್ಲಿ […]

Advertisement

Wordpress Social Share Plugin powered by Ultimatelysocial