ಕನಕಪುರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆಯನ್ನು ಮಾಡಿ ಜಿಂಕೆ ಬೇಟೆಗಾರರನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ, ಕನಕಪುರ ತಾಲೂಕಿನ, ತಿಗಳರ ಹೊಸಳ್ಳಿಯ ಬೈಪಾಸ್ ಬಳಿ ಘಟನೆ ನಡೆದಿದೆ. ತಿಗಳರ ಹೊಸಳ್ಳಿಯ ಬೈಪಾಸ್ ಬಳಿ ಒಂದು ಚೀಲ ಹಿಡಿದುಕೊಂಡು ಅನುಮಾನಸ್ಪದವಾಗಿ ನಿಂತಿದ್ದ ಜಿಂಕೆ ಬೇಟೆಗಾರರು…ಮಾಹಿತಿ ತಿಳಿದು ರಹಸ್ಯವಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ 5 ಜಿಂಕೆ ಚರ್ಮಗಳು ಸೇರಿದಂತೆ ಒಂದು ಡಿಯೋ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಆರೋಪಿಗಳದ ರೆಹಮಾನ್, […]

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವ ಘಟನೆ ಕಲಬುರ್ಗಿಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ. ಜೇವರಗಿ ಪಟ್ಟಣದ ಗಡ್ಡಿಪೂಲ ಬಳಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ಶವ ದೊರೆತಿದ್ದು ಶವದ ಬಗ್ಗೆ ನಿಕಾರ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಜೇವರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ :ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚಿ ಪರಾರಿ

ಬಾರ್ ಕ್ಯಾಷಿಯರ್ ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ 7 ದರೋಡೆಕೋರರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.ಚಿಕ್ಕೆಗೌಡ, ಭರತ್ ಕುಮಾರ್, ಲಗ್ಗೆರೆಯ ತೇಜಸ್, ವಿನಯ್, ಕಾರ್ತಿಕ್, ವಿಕ್ರಂ, ಕೆಂಗೇರಿಯ ರಜತ್ ಹಾಗೂ ಬಾಶೆಟ್ಟಿಹಳ್ಳಿಯ ಚೇತನ್ ಬಂಧಿತ ಆರೋಪಿಗಳು. ಆರೋಪಿಗಳು ದರೋಡೆ, ಸುಲಿಗೆ, ಕಳುವು ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಂಧಿತರಿಂದ 11 ಲಕ್ಷ 90 ಸಾವಿರ ರೂ. ಮೌಲ್ಯದ ಚಿನ್ನಾಭರಣ ,ಮೂರು ದ್ವಿಚಕ್ರ […]

K.S.R.T.C. ಬಸ್‌ ಹಾಗೂ ಮಾನ್‌ ಟಿಪ್ಪರ್‌ ಮುಖಾಮುಖಿ  ಡಿಕ್ಕಿಯಾಗಿ ಅಪಘಾತವಾಗಿರುವ ಘಟನೆ ಬಾಗಲಕೋಟೆಯ ಇಳಕಲ್ಲನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ… ಗಾಯಾಳುಗಳನ್ನು ಇಳಕಲ್ಲ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಒನ್‌ ವೇ ಇದ್ದರೂ ಪದೇ ಪದೇ ರಾಂಗ್‌ ರೂಟ್ನಲ್ಲಿ ಹೋಗುವ ಕಾರಣ ಅನೇಕ ಅಪಘಾತ ಸಂಭವಿಸಿ ಸಾವುಗಳಾಗಿದೆ. ಅಪಘಾತ ಕುರಿತು ಸ್ಥಳಿಯರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಸರಕಾರ ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು. ಇದನ್ನೂ […]

ಕರಡಿ ಬಾವಿಗೆ ಬಿದ್ದು ಸಾವನ್ನಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದೊಗ್ಗನಹಳ್ಳಿ ಬಳಿ ನಡೆದಿದೆ…ಆಹಾರ ಅರಸಿ ಗ್ರಾಮದ ಬಳಿ ಬಂದಿದ್ದ ಕರಡಿ, ದೊಗ್ಗನಹಳ್ಳಿಯ ಹನುಮಂತರಾಯಪ್ಪ ಎನ್ನುವರಿಗೆ ಸೇರಿದ ಬಾವಿಗೆ ಬಿದ್ದಿದ್ದೆ…ಸ್ಥಳಕ್ಕೆ ಕೊರಟಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ಇದನ್ನೂ ಓದಿ :ಚಿರತೆ ದಾಳಿಗೆ ಎರಡು ಕುರಿ ಬಲಿ

ಚಿರತೆ ದಾಳಿಗೆ ಎರಡು ಕುರಿ ಬಲಿಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ದಿನ್ನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ. ನಾರಾಯಣಪ್ಪ ನವರಿಗೆ ಸೇರಿದ ಕುರಿಗಳು ಬೆಳಗ್ಗಿನ ಜಾವ ಸುಮಾರು 3 ಘಂಟೆಯ ಸಮಯದಲ್ಲಿ ಚಿರತೆ ದಾಳಿಮಾಡಿದೆ. ಪದೇ ಪದೇ ಗ್ರಾಮದ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿರುವ ಚಿರತೆ. ಅರಣ್ಯ ಇಲಾಖೆಯ ವಿರುದ್ಧ ಶಾಪ ಹಾಕುತ್ತಿರುವ ಗ್ರಾಮದ ಜನರು… ಇದನ್ನೂ ಓದಿ :ಟಿಸಿಯಲ್ಲಿ ಹೊತ್ತಿ ಉರಿದ ಬೆಂಕಿ

ವಿದ್ಯುತ್ ಪರಿವರ್ತಕ(ಟಿಸಿ)ಯಲ್ಲಿ ಸಣ್ಣದಾದ ಬೆಂಕಿ ಕಾಣಿಸಿಕೊಂಡು ಟಿಸಿ ಸ್ಪೋಟಗೊಂಡು ಭಾರೀ ಬೆಂಕಿ ಅನಾಹುತ ಸಂಭವಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದಾಪುರ ಆಶ್ರಯ ಕಾಲೊನಿಯಲ್ಲಿ ನಡೆದಿದೆ…ಟಿಸಿ ಸಂಪೂರ್ಣವಾಗಿ ಸುಟ್ಟು ಹೋಗಿ ಟಿಸಿಯನ್ನು ನೋಡಿ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಸ್ಥಳಕ್ಕೆ ವಿದ್ಯುತ್ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಡಿತಗೊಳಿಸಿದ್ದಾರೆ…. ಇದನ್ನೂ ಓದಿ :ಬ್ಯಾಂಕ್ ಗೆ ಕನ್ನಹಾಕಿದ್ದ ಹೈಪೈ […]

ಬೆಳಗಾವಿ ಮಹಾಂತೇಶ ನಗರದ ಕಿತ್ತೂರು ರಾಣಿ ಚನ್ನಮ್ಮ ಸಹಕಾರಿ ಬ್ಯಾಂಕಗೆ ಕನ್ನಹಾಕಿದ್ದ ಹೈಪೈ ಕಳ್ಳನನ್ನು ಬಂಧಿಸುವಲ್ಲಿ ಬೆಳಗಾವಿ ಮಾಳಮಾರುತಿ ಪೊಲೀಸರು ಯಶ್ವಸಿ ಕಾರ್ಯಾಚರಣೆ ನಡೆಸಿದ್ದಾರೆ..ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಮುಜಫರ್ ಶೇಖ್ ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ 15 ಲಕ್ಷ ಮೌಲ್ಯದ 301 ಗ್ರಾಂ ಚಿನ್ನಾಭರಣ, 101650 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 6 ಲಕ್ಷ 50 ಸಾವಿರ ಮೌಲ್ಯದ ಹಾರ್ಲೆ ಡೇವಿಡ್ಸನ್ ಬೈಕ್ ವಶಕ್ಕೆ ಪಡೆದಿದ್ದಾರೆ.. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ […]

ಕರ್ನಾಟಕ ತಮಿಳುನಾಡು ರಾಜ್ಯದ ಗಡಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ… ಕೃಷ್ಣಗಿರಿ ಜಿಲ್ಲೆಯ ಸೂಲಗಿರಿ ಬಳಿಯ ಕಾಮನ್ ದೊಡ್ಡಿ ಅರಣ್ಯದಿಂದ ಒಂಟಿ ಆನೆಯೊಂದು ಗ್ರಾಮಕ್ಕೆ ಬಂದಿದ್ದು ,ಕೂಲಿ ಕೆಲಸಕ್ಕೆ ಹೋಗುವವರಿಗೆ ಅರಣ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ನೀಡಿದೆ.. ಇದನ್ನೂ ಓದಿ :ಆಕಸ್ಮಿಕ ಬೆಂಕಿ,ನಾಲ್ಕು ಗುಡಿಸಲುಗಳು ಸುಟ್ಟು ಭಸ್ಮ  

ಆಕಸ್ಮಿಕ ಬೆಂಕಿಯಿಂದ ನಾಲ್ಕು ಗುಡಿಸಲುಗಳು ಸುಟ್ಟು ಭಸ್ಮವಾಗಿದ ಘಟನೆಯು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸೋರೇಕುಂಟೆ ಗ್ರಾಮದಲ್ಲಿ ನಡೆದಿದೆ. ಒಂದರಿಂದ ಮತ್ತೊಂದು ಗುಡಿಸಲಿಗೆ ಬೆಂಕಿ ತಗುಲಿದ್ದು,ಇದರಿಂದ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಕೂಡಿಟ್ಟಿದ್ದ ಚಿನ್ನಾಭರಣ, ದವಸ ಧಾನ್ಯ , ದಿನಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ :ಪೆಟ್ರೋಲ್ ಸುರಿದು ವಾಹನಗಳ ನಾಶ

Advertisement

Wordpress Social Share Plugin powered by Ultimatelysocial