ಪೆಟ್ರೋಲ್ ಸುರಿದು ಕಾರು ಮತ್ತು 8 ಬೈಕ್ ಗಳನ್ನು ದುಷ್ಕರ್ಮಿ ಸುಟ್ಟು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಶ್ರೀನಗರ ರೈಲ್ವೆ ಸ್ಟೇಷನ್ ಸಮೀಪ ನಡೆದಿದೆ..ಮುಸುಕು ಧರಿಸಿ ಬಂದು ಬೀದಿಯಲ್ಲಿ ನಿಂತಿದ್ದ ಕಾರಿಗೆ ನಂತರ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಪೆಟ್ರೋಲ್ ಸುರಿದ್ದು,ದುಷ್ಕರ್ಮಿಗಳು ದುಶ್ಕೃತ್ಯ ಎಸಗಿರುವ ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ…ಆರೋಪಿ ಇನ್ನೂ ಪತ್ತೆಯಾಗಿಲ್ಲ ಜೊತೆಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… […]

ಕೇಂದ್ರ ಸರ್ಕಾರ ಈಗಾಗ್ಲೇ ಚಿತ್ರಮಂದಿರಗಳಿಗೆ 100 ಪಸೆರ್ಂಟ್ ಆಕ್ಯಪೆನ್ಸಿ ಕೊಟ್ಟಿದೆ.. ಆದ್ರೆ ರಾಜ್ಯ ಸರ್ಕಾರ ಮಾತ್ರ ಕೇಂದ್ರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ತಿದೆ.. ಕೊರೋನಾ ಹವಳಿ ಇನ್ನೂ ಕಡಿಮೆಯಾಗಿಲ್ಲ, ಅಲ್ಲದೆ ಕೊರತೋನಾ ಹೊಸ ಅಲೆ ಬರುವ ಸಾಧ್ಯತೆ ಹೆಚ್ಚಾಗಿದೆ.. ಹಾಗಾಗಿ ಫೆಬ್ರವರಿ ಕೊನೆಯವರೆಗೂ ಥಿಯೇಟರ್ ಗಳಲ್ಲಿ ಕೇವಲ 50 ಪಸೆರ್ಂಟ್ ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಎಂದು ಪಟ್ಟು ಹಿಡಿದಿದೆ.. ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಸದ್ಯ ಇಡೀ ಸ್ಯಾಂಡಲ್ ವುಡ್ […]

ಕೇಂದ್ರ ವರ ಕೊಟ್ಟರು ರಾಜ್ಯ ಸರ್ಕಾರ್ ವರ ಕೊಡಲಿಲ್ಲ ಎನ್ನುವ ಪರಿಸ್ಥಿತಿ ಈಗ ಸ್ಯಾಂಡಲ್ ವುಡ್ ಗೆ ಬಂದಿದೆ.  ರಾಜ್ಯದ ಚಿತ್ರಮಂದಿರ ಮಾಲೀಕರು ತಮ್ಮ ಬೇಸರವನ್ನು ಹೊರಹಾಕುತ್ತಿದ್ದಂತೆ, ಸ್ಟಾರ್ ಕಲಾವಿದರು ಕೂಡ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಪೊಗರು ಚಿತ್ರದ ಬಿಡುಗಡೆಯ ತಯಾರಿಯಲ್ಲಿರುವ ಧ್ರುವ ಸರ್ಜಾ ಮತ್ತು ಕೆಜಿಎಫ್- ಚಾಪ್ಟರ್-2 ಚಿತ್ರವನ್ನು ತೆರೆಗೆ ತರಲು ಸಜ್ಜಾಗುತ್ತಿರುವ ಪ್ರಶಾಂತ್ ನೀಲ್  ‘ಮಾರ್ಕೇಟ್ ನಲ್ಲಿ ಗಿಜಿಗಿಜಿ’ ಬಸ್ ನಲ್ಲೂ […]

ಕಾರು ಹಾಗೂ ಲಾರಿ ನಡುವೆ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಜಮ್ಮನಹಳ್ಳಿ ಗೇಟ್ ಬಳಿ ನಡೆದಿದೆ… ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು,ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ…ಮಾಲೂರು ತಾಲ್ಲೂಕಿನ ಶಿವನಾಪುರ ಗ್ರಾಮದ ಪಾರ್ವತಮ್ಮ (50) ಮೃತ ಮಹಿಳೆಯಾಗಿದ್ದು,ಮುಳಬಾಗಿಲು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ಇದನ್ನೂ ಓದಿ:ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿ

ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿಗೆ ಸ್ಥಳಿಯರು ಪೂಜೆಗೆ ಮುಂದಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ. ಸಿಬಾರಗಟ್ಟಿ ಕಟ್ಟೆಯ ಮೇಲಿಟ್ಟು ಪೂಜೆ ಮಾಡಿದ್ದು,ಕಲ್ಲಿನಲ್ಲಿ ಬಸವಣ್ಣ ಹೋಲಿಕೆ ಮೂರ್ತಿ ಪ್ರತ್ಯಕ್ಷ ಸುದ್ದಿ ತಿಳಿದಿದೆ.ನಂತರ ಅನೇಕರು ಬಂದು ಕಾಯಿ ಒಡೆದು, ಊದುಬತ್ತಿ ಬೆಳಗಿ ಪೂಜಿಸಿ ನಮಸ್ಕರಿಸಿ ಹೋಗುತ್ತಿದ್ದಾರೆ. ಕಲ್ಲಿನಲ್ಲಿ ಬಸವಣ್ಣ ಆಕೃತಿಯ ಮೂರ್ತಿಯನ್ನು ದೇವರಂತೆ ಪೂಜಿಸಲು ಮುಂದಾಗಿದ್ದು, ಜನ ಮರಳು ಜಾತಕ ಮರಳು ಯಾತಕ್ಕೆ ಮರಳು ಶಂಭೋಲಿಂಗ […]

4 ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ಬೀದರ್ ಜಿಲ್ಲೆಯ ಹೂಲಸೂರು ತಾಲೂಕಿನ ಸೊಲದಾಪಕ ಗ್ರಾಮದಲ್ಲಿ ನಡೆದಿದೆ..ತಡರಾತ್ರಿ ಸುಮಾರಿನಲ್ಲಿ ಕಳ್ಳತನ ನಡೆದಿದ್ದು ಒಟ್ಟು 1 ಲಕ್ಷದ 48 ಸಾವಿರ ಹಣ, ಚಿನ್ನಾಭರಣ, ಮೊಬೈಲ್ ಕಳ್ಳತನವಾಗಿದೆ. ಇನ್ನು ಕಳ್ಳರು ನಂದಿನಿ ಹಾಲಿನ ಡೈರಿಯನ್ನು ಹೊಡೆದು ಗಲ್ಲಾಪೆಟ್ಟಿಗೆಯ ಹಣ ದೋಚಿದ್ದಾರೆ.ಸಂಜು ರಂಗರಾವ್, ರಾಜಕುಮಾರ್ ಮಾಡಜೆ, ವೆಂಕಟ್ ಸಿಂಗ್ ರಜಪೂತ್, ಮತ್ತು ಉಮಾಕಾಂತ್ ಮಾಸಳೆ ಯವರ ಮನೆಗಳಲ್ಲಿ ಕಳ್ಳತನವಾಗಿದ್ದು ಇವರು ನಮ್ಮ ವರದಿಗಾರರ […]

ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಗಳು ಕಾಡಾನಡಗಳ ದಾಳಿಯಿಂದ ಹಾನಿಯಾಗಿರುವ ಘಟನೆ ಕೋಲಾರದ ಗಡಿ ಭಾಗದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಭೀಮಗಾನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು,ರೈತನ ಒಂದು ಎಕರೆ ಟೊಮ್ಯಾಟೊ ತೋಟ ಸಂಪೂರ್ಣ ನಾಶವಾಗಿದೆ. ಇತ್ತೀಚೆಗಷ್ಟೇ ರೈತನು ಸಾಲ‌ಮಾಡಿ ಟೊಮ್ಯಾಟೊ ಬೆಳೆದಿದ್ದ, ಇನ್ನೇನು ಫಸಲು ಬಿಡುವಷ್ಟರಲ್ಲಿ ಕಾಡಾನೆಗಳ ದಾಳಿಯಿಂದ ಇಡೀ ತೋಟ ಹಾನಿಯಾಗಿದೆ. ಇದಲ್ಲದೆ ಭೀಮಗಾನಹಳ್ಳಿ ಸುತ್ತಮುತ್ತಲಿನಲ್ಲಿ ಹಲವಾರು ರೈತರು ಬಾಳೆ, ಕ್ಯಾಪ್ಸಿಕಂ ಸೇರಿದಂತೆ ವಿವಿಧ […]

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿರುವ ವಸಿಷ್ಠ ಸಿಂಹ ಒಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ನೂತನ ವರ್ಷಾರಂಭ ಮಾಡಿದ್ದಾರೆ … ವಸಿಷ್ಠ ಸಿಂಹ ಇಂದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಗೆ ಭೇಟಿ ನೀಡಿದ್ದರು … ಬೇಟಿ ನೀಡಿದ ಕಾರಣವೆಂದರೆ ವಸಿಷ್ಠ ಸಿಂಹ ಅವರು ಒಂದು ಸಿಂಹದ ಮರಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ವನ್ಯಜೀವಿ ಗಳ ಮೇಲೆ ತಮಗಿರುವ ಒಲವನ್ನು ತೋರಿಸಿದ್ದಾರೆ … […]

ನಿಯಂತ್ರಣ ತಪ್ಪಿ ಟಿಪ್ಪರ್ ವಾಹನ ಅಂಗಡಿಗೆ ನುಗ್ಗಿದ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದಿದೆ….ವಾಹನ ನುಗ್ಗಿದ ಪರಿಣಾಮ ರಸ್ತೆಯಲ್ಲಿ ಓಡಾಡುತ್ತಿರುವ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು,ಮೂವರ ಸ್ಥಿತಿ ಚಿಂತಾಚನಕವಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ…ನಿಯಂತ್ರಣ ತಪ್ಪಿ ಏಕಾಏಕಿ ಸ್ಟೋನ್ ಶಾಪ್ಗೆ ನುಗ್ಗಿ ಟಿಪ್ಪರ್ ನಿಂದ ಎರಡು ಬೈಕ್ ಗಳು, ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿಯಾಗಿದ್ದು,ಔರಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ಇದನ್ನೂ ಓದಿ  :ತಿಪ್ಪೆ ಗುಂಡಿಯಲ್ಲಿ ಅನಾಥ […]

ತಿಪ್ಪೆ ಗುಂಡಿಯಲ್ಲಿ ಅನಾಥ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ…. ನವಜಾತ ಶಿಶುವನ್ನು ಗೋಣಿ ಚೀಲದಲ್ಲಿ ಹಾಕಿ ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದ್ದು,ಶಿಶು ಕೂಗನ್ನು ಗಮನಿಸಿದ ಸ್ಥಳೀಯರಿಂದ ಶಿಶುವಿನ ಆರೈಕೆ ಮಾಡಲಾಗಿದೆ..ತೊರಲಕ್ಕಿ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ….. ಇದನ್ನೂ ಓದಿ :ಬೆಳ್ಳಂಬೆಳಗ್ಗೆ ರೈತರ ಜಮೀನಿನಲ್ಲಿ ಪ್ರತ್ಯಕ್ಷವಾದ ಕಾಡಾನೆ  

Advertisement

Wordpress Social Share Plugin powered by Ultimatelysocial