ಬೆಂಗಳೂರು: ಆಗಷ್ಟೇ ಕೆಲಸ ಮುಗಿಸಿಕೊಂಡು ತರಕಾರಿ ಬ್ಯಾಗ್ (Vegetable Bag) ಸಮೇತ ಮನೆ ಕಡೆಗೆ ಹೊರಟಿದ್ದರು. ಮನೆಗೆ (Home) ಬರುವುದು ಮಗಳ (Daughter) ಕೈಗೆ ತರಕಾರಿ ಬ್ಯಾಗ್ ಕೊಟ್ಟು, ಅರ್ಜೆಂಟ್ ಕೆಲಸ ಇದೆ ಹೋಗಿ ಬರುತ್ತೇನೆ, ಮನೆ ಲಾಕ್ ಮಾಡಿಕೊಂಡು ಮಲಗಿ ಅಂತ ಹೇಳಿ ಹೋಗಿದ್ದರು. ಆದರೆ ಮುಂದೆ ಆಗಿದ್ದು ಮಾತ್ರ ಘನಘೋರ. ನಿರ್ಜನ ಪ್ರದೇಶದ ನಡು ರಸ್ತೆಯಲ್ಲಿ (Road) ವ್ಯಕ್ತಿಯನ್ನು ಕೊಚ್ಚಿ ಕೊಲೆ (Murder) ಮಾಡಿದ್ದರು. ಕೊಲೆಯಾದ ವ್ಯಕ್ತಿಯನ್ನು […]
#Newupdates #Kannadanews #Latestnews #Updates #Speednews #Kannadanews
ಬಿಡಿಎ ಮತ್ತು ಬಿಬಿಎಂಪಿಗೆ ಸೇರಿದ ಯಾವುದೇ ಜಾಗವನ್ನು ಒತ್ತುವರಿ ಮಾಡಲು ಬಿಡುವುದಿಲ್ಲ. ಭೂಸ್ವಾಧೀನ ಮತ್ತು ಸ್ವತ್ತುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಸ್ಪಷ್ಟತೆ ತರಲು ತಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಸದಸ್ಯ ಮರಿತಿಬ್ಬೇಗೌಡ, ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಬಳಿ ಬಿಡಿಎಗೆ ಸೇರಿದ 23 ಗುಂಟೆ ಜಮೀನು ಒತ್ತುವರಿಯಾಗಿದೆ. ಈ ಸಂಬಂಧ […]
ಬಹುನಿರೀಕ್ಷಿತ ಟ್ರಕ್ ಟರ್ಮಿನಲ್ ವಾರ್ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಪುಟಿದೆದ್ದು, ಬಿಜೆಪಿ ಮತ್ತು ಜೆಡಿಎಸ್ ನಡುವಿನ ಕಾಳಗಕ್ಕೆ ನಾಂದಿಯಾಗಿದೆ.ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿರುವ ಹಾಸನ ನಗರ ವ್ಯಾಪ್ತಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿ ಲಾರಿ ಮಾಲೀಕರು, ಚಾಲಕರು, ಕ್ಲೀನರ್ಗಳಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಜಿಲ್ಲಾಲಾರಿ ಮಾಲೀಕರ ಸಂಘದ ದಶಕದ ಮನವಿ ಜಿಲ್ಲೆಯಲ್ಲಿ 2645 ಲಾರಿಗಳು ಇದ್ದು, ನಗರ ಒಂದರಲ್ಲೇ ಒಂದೂವರೆ ಸಾವಿರಕ್ಕೂ ಹೆಚ್ಚು ಲಾರಿ, ಟ್ರಕ್ಗಳಿವೆ. ರೈಲ್ವೆ ಗೂಡ್ಸ್ ಶೆಡ್ಗೆ […]
ಕಾಲುವೆ ನಿರ್ಮಾಣ ಮಾಡಿ 50 ವರ್ಷ ಕಳೆದಿದರೂ ಇನ್ನೂ ನೀರು ಹರಿಸಿಲ್ಲ. ಜತೆಗೆ ಕಾಲುವೆ ಎಲ್ಲಿದೆ ಎಂದು ಹುಡುಕುವಂಥ ಸ್ಥಿತಿ. ಕಾಲುವೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಪರಿಹಾರವೂ ಸಿಕ್ಕಿಲ್ಲ. ಇದು ಘಟಪ್ರಭಾ ಎಡದಂಡೆ ಕಾಲುವೆಯ ವ್ಯಾಪ್ತಿಯ ರಾಯಬಾಗ ಉನ್ನತ ಮಟ್ಟದ ಕಾಲುವೆ (ಆರ್ಎಚ್ಎಲ್ಡಿ) ದುಸ್ಥಿತಿ.ರಾಯಬಾಗ ತಾಲೂಕಿನ ಕೆಂಪಟ್ಟಿ, ನಂದಿಕುರಳಿ ಮತ್ತು ಚಿಕ್ಕೋಡಿ ತಾಲೂಕಿನ ಕಾಡಾಪುರ, ಕೇರೂರ, ಕೇರೂರವಾಡಿ, ಅರಭ್ಯಾಣವಾಡಿ, ರುಪಿನಾಳ, ನಣದಿ, ನಣದಿವಾಡಿ, ಸಿದ್ದಾಪೂರವಾಡಿ ಸೇರಿದಂತೆ ಇತರ ಗ್ರಾಮಗಳ […]
ಖಲಿಸ್ತಾನ ಚಳವಳಿಯನ್ನು ಮೇಲೇಳಲು ಬಿಡುವುದಿಲ್ಲಎಂದು ಅಮಿತ್ ಶಾ ಹೇಳಿದ್ದಾರೆ. ಇದೇ ಮಾತನ್ನು ಇಂದಿರಾ ಗಾಂಧಿ ಕೂಡ ಹೇಳಿದ್ದರು. ಅವರಿಗೆ ಆದ ಗತಿಯೇ ನಿಮಗೂ ಆಗಲಿದೆ. ಅಂಥದ್ದೇ ಕ್ಲಿಷ್ಟತೆಯನ್ನು ಎದುರಿಸುತ್ತೀರಿ,” ಎಂದು ಖಲಿಸ್ತಾನಿ ಮುಖಂಡ ಹಾಗೂ ‘ವಾರಿಸ್ ಪಂಜಾಬ್ ಕೇ’ ತೀವ್ರಗಾಮಿ ಸಂಘಟನೆ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಬೆದರಿಕೆ ಹಾಕಿದ್ದಾರೆ.” ನಮ್ಮ ಚಳವಳಿಯನ್ನು ಹತ್ತಿಕ್ಕುವ ಎಚ್ಚರಿಕೆ ನೀಡಿದಂತೆಯೇ, ‘ಹಿಂದೂ ರಾಷ್ಟ್ರ’ ಕ್ಕೆ ಆಗ್ರಹಿಸುತ್ತಿರುವವರಿಗೂ ಅಮಿತ್ ಶಾ ಎಚ್ಚರಿಸಿಕೆ ಕೊಟ್ಟರೆ ಅವರು ಕೇಂದ್ರ […]
ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ನಿನ್ನೆ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಮಾವೇಶ ಮುಗಿಸಿಕೊಂಡು ವಾಪಸ್ ತೆರಳುವಾಗ ರಸ್ತೆ ಬದಿ ನಿಂತಿದ್ದ ಯುವಕರು ಕಾರ್ ಎದುರು ಮೋದಿ ಮೋದಿ, ಜೈ ಶ್ರೀರಾಮ್ ಘೋಷಣೆ ಕೂಗಿರುವ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.ರಸ್ತೆ ಬದಿ ನಿಂತಿದ್ದ ಯುವಕರು ಸಿದ್ದರಾಮಯ್ಯ ಕಾರ್ ಬರುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆದರೆ ವಾಹನ ದಟ್ಟಣೆ ಇರುವುದರಿಂದ ಸಿದ್ದರಾಮಯ್ಯ ಅವರು […]
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲ ಪಕ್ಷಗಳು ಪ್ರಚಾರ ಕಾರ್ಯವನ್ನು ಜೋರಾಗಿ ನಡೆಸುತ್ತಿವೆ. ಇದರ ನಡುವೆಯೇ ನಟ ಕಮ್ ರಾಜಕಾರಣಿ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ. ಚುನಾವಣಾ ಆಯೋಗ ಈ ಬಗ್ಗೆ ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗದ ಆದೇಶವನ್ನು ಉಪೇಂದ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 […]
ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಹಾಲು ಬೆರೆಸದ ಚಹಾ ಪುಡಿಯನ್ನು ನೀರಿಗೆ ಬೆರೆಸಿ ಕೂದಲಿಗೆ ಹಾಗೂ ತಲೆಯ ಬುಡಕ್ಕೆ ಹಚ್ಚಿಕೊಳ್ಳಿ.ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗಿ, ಮೃದುವಾಗುತ್ತದೆ ಮತ್ತು ಕಪ್ಪು ಕೂದಲುಗಳು ಕಪ್ಪಾಗಿಯೆ ಇರುತ್ತದೆ. ನೀವು ಇದನ್ನು ಕಂಡೀಷನರ್ ಆಗಿಯೂ […]
ಮಾರ್ಚ್ 1ರಂದು ಖಗೋಳದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದ್ದು, ಅಂದು ಶುಕ್ರ ಹಾಗೂ ಗುರು ಗ್ರಹದ ಜೊತೆಗೆ ಭೂಮಿಯ ಏಕೈಕ ಉಪಗ್ರಹ ಚಂದ್ರ ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ.ಸೌರಮಂಡಲದ ಪ್ರಕಾಶಮಾನ ಗ್ರಹಗಳು ಎನಿಸಿಕೊಂಡಿರುವ ಶುಕ್ರ ಹಾಗೂ ಗುರು ಗ್ರಹಗಳು ಈಗಾಗಲೇ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿದ್ದು, ಗುರುವಾರದ ವೇಳೆಗೆ ಇವುಗಳ ಅಂತರ 9 ಡಿಗ್ರಿಯಷ್ಟು ತಲುಪಿದೆ.ಇವುಗಳು ಸಾಮಾನ್ಯವಾಗಿ 29 ಡಿಗ್ರಿಗಳ ಅಂತರವನ್ನು ಹೊಂದಿದ್ದು, ಆದರೆ ಈಗ ನಿಧಾನವಾಗಿ ಹತ್ತಿರಕ್ಕೆ ಸರಿಯುತ್ತಿವೆ. […]
ಇಂದು (ಫೆಬ್ರವರಿ 23) ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಟೀಸರ್ ರಿಲೀಸ್ ಆಗಿದೆ. ಐದು ಭಾಷೆಗಳ ಮಾಧ್ಯಮಗಳ ಸಮ್ಮುಖದಲ್ಲಿ ಈ ಜಬರ್ದಸ್ತ್ ಆಕ್ಷನ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಈ ವೇಳೆ ಧ್ರುವ ಸರ್ಜಾಗೆ ಹಲವು ಪ್ರಶ್ನೆಗಳು ಎದುರಾಗಿದ್ದವು.ಅದರಲ್ಲೊಂದು ಕಿಚ್ಚ ಸುದೀಪ್ ಹಾಗೂ ಯಶ್ ಜೊತೆ ಪೈಪೋಟಿ ಮಾಡುತ್ತೀದ್ದೀರಾ? ಅನ್ನೋ ಪ್ರಶ್ನೆನೂ ಎದುರಾಗಿತ್ತು. ಅದಕ್ಕೆ ಧ್ರುವ ಸರ್ಜಾ ಟಿಪಿಕಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ.ಕಳೆದ ವರ್ಷ ಕನ್ನಡದ […]