ಟ್ರೋಲ್​ನಿಂದ ತಪ್ಪಿಸಿಕೊಳ್ಳಲು ಅಪ್ಪು ಫೋಟೋ ಶೇರ್​ ಮಾಡಿದ `ಶ್ರೀವಲ್ಲಿ’!

Rashmika Mandanna: ಟ್ರೋಲ್​ನಿಂದ ತಪ್ಪಿಸಿಕೊಳ್ಳಲು ಅಪ್ಪು ಫೋಟೋ ಶೇರ್​ ಮಾಡಿದ `ಶ್ರೀವಲ್ಲಿ'!

 

ರಶ್ಮಿಕಾ ಮಂದಣ್ಣ ಯಾವುದೇ ಚಿತ್ರರಂಗದತ್ತ ನೋಡಿದರೂ ಅಲ್ಲಿ ರಶ್ಮಿಕಾ ಮಂದಣ್ಣ ಇರುತ್ತಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕಿರಿಕ್​ ಪಾರ್ಟಿ  ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬ್ಯೂಟಿ, ಕರ್ನಾಟಕ ಕ್ರಶ್​  ಎನಿಸಿಕೊಂಡಿದ್ದರು.
ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಇದೀಗ ನ್ಯಾಷನಲ್​ ಕ್ರಶ್ ​ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಏನ್​ ಮಾಡಿದರು ಸುದ್ದಿಯಾಗುತ್ತೆ. ಅದರಲ್ಲೂ ಕನ್ನಡ ಬಗ್ಗೆ ನಟಿ ತೋರಿಸಿರುವ ನಿರ್ಲಕ್ಷ್ಯ ಮಾತ್ರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲಿನಿಂದಲೂ ಕನ್ನಡ ಬಗ್ಗೆ ಮಾತನಾಡಿ ಟ್ರೋಲ್​ ಆಗಿದ್ದರು. ಪವರ್​ ಸ್ಟಾರ್​ ಅಪ್ಪು  ನಿಧನರಾದಗಲೂ ಅವರ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದರು. ಇದು ಅಪ್ಪು ಅಭಿಮಾನಿಗಳ ಕಣ್ಣು ಕೆಂಪಗೆ ಮಾಡುವಂತೆ ಮಾಡಿತ್ತು. ಇದಾದ ಬಳಿಕ ಪುಷ್ಪ ಸಿನಿಮಾ ಕನ್ನಡ ವರ್ಷನ್​ಗೆ ಡಬ್ ​ ಮಾಡದೇ ಮತ್ತೆ ಕಿರಿಕ್​ ಮಾಡಿದ್ದರು. ಈ ವಿಚಾರಕ್ಕಾಗೇ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡಿಗರು ಟ್ರೋಲ್  ಮಾಡುತ್ತಿದ್ದರು. ಕನ್ನಡದ ನಟಿಯಾಗಿ ಹೀಗೆ ಹೇಳಲು ನಿಮಗೆ ನಾಚಿಕೆಯಾಗಬೇಕು ಎಂದು ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದರು. ಇದರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ರಶ್ಮಿಕಾ ಮಂದಣ್ಣಾ ಈ ಕೆಲಸ ಮಾಡಿದ್ದಾರೆ. ಇದನ್ನು ನೋಡಿದರೆ, ನಿಜ ಅವರು ನಾಟಕ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತೆ.
ಅಪ್ಪು ಫೋಟೋ ಶೇರ್​ ಮಾಡಿದ ರಶ್ಮಿಕಾ ಮಂದಣ್ಣ!

ಈ ಹಿಂದೆ ಅಪ್ಪು ನಿಧನರಾದಗಿನಂದಲೂ ರಶ್ಮಿಕಾ ಮಂದಣ್ಣ ಅಪ್ಪು ಬಗ್ಗೆ ಏನು ಮಾತನಾಡಿಲಿಲ್ಲ. ಯಾವಾಗ ಕನ್ನಡಿಗರು ಈ ನಟಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವಾಗಲೇ, ರಶ್ಮಿಕಾ ಅಪ್ಪು ಅವರ ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಂಜನಿ ಪುತ್ರ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ಸಿನಿಮಾದ ‘ಬಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ’ ಸಾಂಗ್​ ಸೂಪರ್​ ಡೂಪರ್​ ಹಿಟ್​ ಆಗಿತ್ತು. ಅದೇ ಹಾಡಿನ ಫೋಟೊವೊಂದನ್ನು ರಶ್ಮಿಕಾ ಮಂದಣ್ಣ ಶೇರ್​ ಮಾಡಿದ್ದಾರೆ. ಜೊತೆಗೆ ಒಂದು ಹಾರ್ಟ್ ಸಿಂಬಲ್​ ಹಾಕಿದ್ದಾರೆ.

ಪುಷ್ಪ ಸಕ್ಸಸ್​ ಅಲೆಯಲ್ಲಿ ರಶ್ಮಿಕಾ ಮಂದಣ್ಣ!

ಬಹುನಿರೀಕ್ಷಿತ ಪುಷ್ಪ ಸಿನಿಮಾ ರಿಲೀಸ್ ಆಗಿದೆ. ಆದರೆ ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್​ ಆಗಿಲ್ಲ. ಆದರೆ ಕಲೆಕ್ಷನ್​ ವಿಚಾರದಲ್ಲಿ ದಾಖಲೆ ಬರೆದಿದೆ. ಪುಷ್ಪ ಸಿನಿಮಾ ಎರಡೇ ದಿನಕ್ಕೆ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ 116 ಕೋಟಿ ಕಲೆಕ್ಷನ್​ ಮಾಡಿದೆ. ರಶ್ಮಿಕಾ ಅವರ ಪಾತ್ರಕ್ಕೆ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಡಿ-ಗ್ಲಾಮರ್​ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಕನ್ನಡಿಗರು ಮಾತ್ರ ರಶ್ಮಿಕಾ ಮಂದಣ್ಣ ವಿರುದ್ಧ ಗರಂ ಆಗಿದ್ದಾರೆ. ಇದಲ್ಲದೇ, ಅಮಿತಾಭ್​ ಬಚ್ಚನ್​ ಜತೆ ‘ಗುಡ್ಬೈ’, ಸಿದ್ದಾರ್ಥ್​ ಮೆಲ್ಹೋತ್ರಾ ಜೊತೆ ಮಿಷನ್​ ಮಜ್ನು ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ!.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಸ್ಕಾಂ ನಿರ್ಲಕ್ಷ್ಯ 4 ಎಕರೆ ಕಬ್ಬು ಬೆಂಕಿಗೆ ಆಹುತಿ..!

Thu Dec 23 , 2021
ಹೆಸ್ಕಾಂ ಯಡವಟ್ಟಿನಿಂದ 4 ಏಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ನಡೆದಿದೆ..ಶಾರ್ಟ್ ಸರ್ಕ್ಯೂಟ್ ರಾಮಣ್ಣ ಗುರಿಕಾರ ಎಂಬುವರಿಗೆ ಸೇರಿದ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ…ಘಟನೆಗೆ ಸಂಭಂದಿಸಿ ಕೂಡಲೇ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು ಅಧಿಕಾರಿಗಳು ಸಾರಿಯಾಗಿ ಸ್ಪಂದಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಇನ್ನು ಘಟನಾಸ್ಥಳಕ್ಕೆ ಅಗ್ನಿಶಾಮಕದಳ ದೌಡಾಯಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿದೆ.. ಹೆಸ್ಕಾಂ ನಿರ್ಲಕ್ಷ್ಯದಿಂದಲೇ ಕಬ್ಬಿಗೆ ಬೆಂಕಿ  […]

Advertisement

Wordpress Social Share Plugin powered by Ultimatelysocial