ಬೆಂಗಳೂರು ಸಹಿತ ದೇಶದ 11 ನಗರಗಳಲ್ಲಿ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ದೇಶದ 11 ನಗರಗಳಲ್ಲೇ ಶೇ.70 ಸೋಂಕಿತರು ಇರುವುದರಿಂದ ಇಲ್ಲಿ ಮಾತ್ರ ಲಾಕ್‌ಡೌನ್‌ 5 ಪ್ರಕಟಿಸುವ ಸಾಧ್ಯತೆಯಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮನ್‌ ಕಿ ಬಾತ್‌ ವೇಳೆಯಲ್ಲೇ ಈ ಬಗ್ಗೆ ಪ್ರಕಟವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜೂನ್​ ತಿಂಗಳಲ್ಲೂ ಲಾಕ್​ಡೌನ್​ ಮೂಂದುವರಿಯಲಿದೆ. ಆದರೆ ಲಾಕ್​ಡೌನ್  ಕೆಲವೇ […]

ಸೋಫಿಯಾ: ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌, ಬಾರ್‌ ಹಾಗೂ ಕೆಫೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅನುವು ಮಾಡಿಕೊಡಲಾಗುತ್ತಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಮಾರ್ಚ್‌ ತಿಂಗಳ ಮಧ್ಯಭಾಗದಿಂದ ಸಂಪೂರ್ಣ ಲಾಕ್‌ಡೌನ್‌ ವಿಧಿಸಲಾಗಿತ್ತು. ಈಗ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಕಿರಿಲ್‌ ಅನಾನೀವ್‌ ತಿಳಿಸಿದ್ದಾರೆ. ಅಲ್ಲದೆ, ಚಿತ್ರಮಂದಿರಗಳು, ಸಂಗೀತ ಕಚೇರಿಗಳು ಮತ್ತು ರಂಗ ಪ್ರದರ್ಶನಗಳನ್ನು ಪುನರಾರಂಭಿಸಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಒಳಾಂಗಣ ಸಾಮರ್ಥ್ಯದ ಶೇ. 30 ಹಾಗೂ ಹೊರಾಂಗಣ ಸಾಮರ್ಥ್ಯದ […]

ನವದೆಹಲಿ: ದೇಶದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ಪಟ್ಟಿ ನೀಡಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ. ವಕೀಲ ಸಚಿವನ್ ಜೈನ್ ಎನ್ನುವವರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ […]

ಉತ್ತರ ಪ್ರದೇಶ: ಕೊರೊನಾ ವೈರಸ್ ತಾಂಡವಾಡುತ್ತಿರುವ ಈ ಕಾಲದಲ್ಲಿ, ಉತ್ತರ ಪ್ರದೇಶದ ರಾಜಕಾರಣಿಯೊಬ್ಬ ತನ್ನ ಮಗನ ಮದುವೆಗೆ ನೂರಾರು ಜನರನ್ನು ಸೇರಿಸಿ ಅವರನ್ನು ರಂಜಿಸಲು ಯುವತಿಯರಿಂದ ಡ್ಯಾನ್ಸ್‌ ಮಾಡಿಸಿದ್ದಾನೆ. ಅಲಿಗಢದ ಬಿಎಸ್ಪಿ ನಾಯಕ ಮೊಹಮ್ಮದ್ ಜಾಹಿದ್‌ ಮಗನ ಮದುವೆಯಲ್ಲಿ ಡ್ಯಾನ್ಸರ್‌ಗಳ ಕುಣಿತದ ದೃಶ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಕೂಡಲೇ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆಮೆಯ ಮೇಲ್ಮೈ ಚಿಪ್ಪು ಹಾಗೂ ಗ್ರೆನೇಡ್ ಒಂದೇ ರೀತಿ ಇರುತ್ತದೆ. ಹೀಗೆ ತನ್ನ ಕಣ್ಣ ಮುಂದೆ ಕಾಣಿಸಿದ್ದು ಆಮೆ ಎಂದು ಐದು ವರ್ಷದ ಮಗು ಅದನ್ನೆತ್ತಿಕೊಳ್ಳಲು ಹೋದ ಘಟನೆ ನಡೆದಿದೆ. ಅದೃಷ್ಟವಶಾತ್ ಆ ಮಗುವಿನ ತಂದೆ ಮಾಜಿ ಸರ್ಕಸ್ ಪ್ರದರ್ಶಕ ಲೂಯಿ ಲೋಮಸ್ ಅವರು ಅನುಮಾನ ಬಂದು ಅದನ್ನು ತೆಗೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿ ಸಹಾಯಕ್ಕೆ ಮೊರೆ ಇಟ್ಟರು. ಪೊಲೀಸರು ಅದನ್ನು ಪರಿಶೀಲಿಸಿದಾಗ ಅದು ಆಮೆಯಲ್ಲ, […]

ಥಾಯ್ಲೆಂಡ್ : ಥಾಯ್ಲೆಂಡ್ ನ 24 ವರ್ಷದ ತ್ರೀರಾಪತ್ ಕ್ಲಾಯ್ ಎಂಬಾತನನ್ನು ಪೊಲೀಸರು ಚಪ್ಪಲಿ ಕಳ್ಳತನದ ಕಾರಣಕ್ಕೆ ಬಂಧಿಸಿದ್ದಾರೆ. ಆತ ಯಾವ ಕಾರಣಕ್ಕೆ ಚಪ್ಪಲಿ ಕದಿಯುತ್ತಾನೆಂದು ಕಾರಣ ಕೇಳಿ ಪೊಲೀಸರು  ದಂಗಾಗಿದ್ದಾರೆ. ಆತನ ಮನೆಯನ್ನು ನೋಡಿದ ಪೊಲೀಸರಿಗೆ ಆಶ್ಚರ್ಯ ಒಂದು  ಕಾದಿತ್ತು.  ಆತ ಕಳೆದ ಎರಡು ವರ್ಷಗಳಿಂದ ನೆರೆಹೊರೆಯವರ ಮನೆಗಳಿಂದ ಕದ್ದಿದ್ದ ಚಪ್ಪಲಿಗಳನ್ನು ಕೂಡಿಟ್ಟಿದ್ದ. ಅಲ್ಲಿ ವಿಭಿನ್ನ ಬಣ್ಣದ, ವಿಭಿನ್ನ ಬ್ರಾಂಡ್ ಗಳ ಪಾದರಕ್ಷೆ ಇದ್ದವು. ಆಘಾತಕಾರಿ ಎಂದರೆ ಲೈಂಗಿಕ […]

ಹೈದರಾಬಾದ್ : ವಲಸೆ ಕಾರ್ಮಿಕರು ಈಗಾಗಲೇ ಹಣವಿಲ್ಲದೆ 2 ತಿಂಗಳು ಕಳೆದಿದ್ದಾರೆ. ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ತುರ್ತಾಗಿ ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ 10 ಸಾವಿರ ರೂಪಾಯಿ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಈ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ದೇಶದಲ್ಲಿ ಲಾಕ್​ಡೌನಿಂದಾಗಿ ವಲಸೆ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾವು ಕೆಲಸ ಮಾಡುವ ಸ್ಥಳದಿಂದ ತಮ್ಮ ಊರಿಗೆ ಹೋಗಲು ಉಚಿತ ಸಾರಿಗೆ […]

ಆಮೆಯ ಬಗ್ಗೆ ಸಾಮಾನ್ಯವಾಗಿ ಒಂದು ಕಲ್ಪನೆ ಇದೆ, ಸಾವಧಾನವಾಗಿ ಚಲಿಸುವ ಪ್ರಾಣಿ ಎಂಬುದು ಜನಜನಿತ. ಆದರೆ ಇತ್ತೀಚೆಗೆ ವೈರಲ್ ಆದ ಸುದ್ದಿ ಅಚ್ಚರಿ ಹುಟ್ಟಿಸುವಂತಿದೆ. ಲ್ಯಾಟೊನ್ಯಾ ಎಂಬಾಕೆ ತನ್ನ ಸಹೋದರ ಕೆವಿನ್ ನೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಮುಂಭಾಗದ ಗ್ಲಾಸ್ ಗೆ ವಸ್ತುವೊಂದು ಬಡಿದಿದೆ. ಬಡಿದ ರಭಸಕ್ಕೆ ಗ್ಲಾಸ್ ಒಡೆದಿದೆ. ಆದರೆ ಅಲ್ಲೊಂದು ಅಚ್ಚರಿ ಕಾದಿತ್ತು. ಅದು ಕಲ್ಲು ಅಥವ ಯಾವುದೇ ಗಟ್ಟಿ ಪದಾರ್ಥವಾಗಿರಲಿಲ್ಲ. ಬದಲಿಗೆ ಆಮೆ ಅಲ್ಲಿ ಕಂಡಿತ್ತು. […]

ಮಧ್ಯಪ್ರದೇಶ: ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಕಳ್ಳತನವಾಗುವ ಸಾಧ್ಯತೆ ಇದೆ ಎಂದು ನೀರು ಸಂಗ್ರಹಿಸಿರುವ ಡ್ರಮ್ಗೆ ಗ್ರಾಮಸ್ಥರು ಬೀಗ ಹಾಕುತ್ತಿದ್ದಾರೆ. ಪ್ರತೀ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಈ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಈ ವರ್ಷ ಕೂಡ ನೀರಿನ ಸಮಸ್ಯೆ ಎಂದುರಾಗಿದೆ. ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ, ಪಂಚಾಯಿತಿ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದ್ದರಿಂದ ಕೆಲವೊಮ್ಮೆ ನೀರನ್ನು ಕದಿಯಲಾಗುತ್ತದೆ. ಹೀಗಾಗಿ ನಾವು […]

ತನ್ನ ಅತಿಯಾದ ಉದ್ದದ ಮೂತಿಯಿಂದಾಗಿ ನಾಯಿಯೊಂದು ಅಂತರ್ಜಾಲದಲ್ಲಿ ಫೇಮಸ್ ಆಗಿದೆ.  ವರ್ಜಿನಿಯಾದ ಬೋರ್ಜಾಯ್ ತಳಿಯ ನಾಯಿಯೊಂದು 12 ಇಂಚು ಅಳತೆಯ ಮೂತಿ ಹೊಂದಿದೆ. ಅದರ ಮಾಲೀಕರಾದ ಲೀಲಿ ಕಾಂಬೌರಿನಾ ತಾವು ಮರಿಯನ್ನು ತಂದಾಗ ಮೇಡಂ ಎರಿಸ್ ಓವರ್ ಬೈಟ್, ಸ್ನೂಟ್ ರಾಣಿ ಎಂದು ಹೆಸರಿಟ್ಟಿದ್ದರಂತೆ. ಇನ್ಸ್ಟಾಗ್ರಾಮ್ ನಲ್ಲಿ 1.7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಿಸ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಜನಪ್ರಿಯ ನಾಯಿಗಳಲ್ಲಿ ಒಂದಾಗಿದೆ. ಇದರ ಫೋಟೋ […]

Advertisement

Wordpress Social Share Plugin powered by Ultimatelysocial