ಬೆಂಗಳೂರು: ಇಂದು ಹಾಲುತುಪ್ಪ ಕಾರ್ಯ ಇರುವುದಿಲ್ಲ. ಇಂದು ಪೂಜೆ ನೆರವೇರಿಸಲಾಗುತ್ತದೆ. ಐದನೇ ದಿನ ಮಂಗಳವಾರ ಹಾಲು ತುಪ್ಪ ಶಾಸ್ತ್ರ ನೆರವೇರಿಸಲಾಗುವುದು. ಸ್ಟುಡಿಯೋ ಒಳಗೆ ಜನರಿಗೆ ಪ್ರವೇಶ ಇರುವುದಿಲ್ಲ. 5 -6 ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗೌರವಯುತವಾಗಿ ಅಪ್ಪು ಕಳಿಸಿಕೊಟ್ಟಿದ್ದೀರಿ ಎಂದು ಸರ್ಕಾರ, ಪೊಲೀಸರು, ಜನತೆ, ಅಭಿಮಾನಿಗಳಿಗೆ ರಾಘವೇಂದ್ರ ರಾಜಕುಮಾರ್ ಧನ್ಯವಾದ ಹೇಳಿದ್ದಾರೆ. ಅಪ್ಪ, ಅಮ್ಮನಿಗೆ ನಮಗಿಂತ ಹೆಚ್ಚು ಅಪ್ಪು […]
ವಿದೇಶ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡದ ಸೂಪರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಭಾನುವಾರ ಬೆಳಿಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ಮೆರವಣಿಗೆಗೆ ಮುಂಚಿತವಾಗಿ ಪ್ರೀತಿಯಿಂದ ಬೀಳ್ಕೊಟ್ಟರು. ಅಂತಿಮ ನಮನ ಸಲ್ಲಿಸುವ ವೇಳೆ ಬೊಮ್ಮಾಯಿ ಭಾವುಕರಾದರು. ಪುನೀತ್ ಅವರ ಪಾರ್ಥಿವ ಶರೀರದ ಮುಂದೆ ಕೈ ಜೋಡಿಸಿ, ಕಣ್ಣೀರು ಸುರಿಸಿ ಬೀಳ್ಕೊಟ್ಟರು ಮತ್ತು ಪ್ರೀತಿಯಿಂದ ಅವರ ಹಣೆಗೆ ಮುತ್ತಿಟ್ಟರು. (IANS) ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada
ಕನ್ನಡದ ಮೇರುನಟ ಪುನಿತರಾಜಕುಮಾರ ಇವರು ಸ್ವರ್ಗವಾಸಿ ಆದ ಕಾರಣ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮಹಾವೀರ ವೃತ್ತದ ಬಳಿ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಮಾಡಲಾಯಿತು, ಚಿಕ್ಕೋಡಿ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪುನಿತ ರಾಜಕುಮಾರ ಇವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ, ಪೂಜೆ ಮಾಡುವ ಮೂಲಕ ಮ್ರತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಸಂಧರ್ಭದಲ್ಲಿ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಬಸವರಾಜ ಸಾಜನೆ, ಪ್ರತಾಪಗೌಡ ಪಾಟೀಲ, ರುದ್ರಯ್ಯಾ […]
ಬಸವನ ಬಾಗೇವಾಡಿ ಬಸವ ನಾಡಿನ ಎಲ್ಲ ಯುವಕರು ಮತ್ತು ಟಿಪ್ಪು ಕ್ರಾಂತಿ ಸೈನ್ಯ ಕರ್ನಾಟಕ ವತಿಯಿಂದ ನಟರಾದ ನೀತ್ ರಾಜಕುಮಾರ್ ರವರು ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ ಖಾಜಂಬರ ನದಾಫ್ ಮಾತನಾಡಿ ನಮ್ಮ ನಾಡಿಗೆ ಅತ್ಯುತ್ತಮ ತಮ್ಮ ನಟನೆಯಿಂದ ಎಲ್ಲರ ಮನದಲ್ಲಿ ಮನೆ ಮಾಡಿರುವಂತಹ ನಟರಾದ ಪುನೀತ್ ರಾಜಕುಮಾರ್ ನಿಧನದಿಂದಾಗಿ ಚಿತ್ರರಂಗಕ್ಕೆ ತುಂಬಲಾರದಂತ ನಷ್ಟ ತುಂಬಿದೆ. ಅನೇಕ ಚಿತ್ರರಂಗದಲ್ಲಿ ಪಾತ್ರವನ್ನು ಮಾಡಿ ಚಿತ್ರರಂಗಕ್ಕೆ ಅಪಾರ ಕೊಡುಗೆಗಳನ್ನು ಕೊಡುವುದು ಮುಖಾಂತರ ಜನರ ಮನಸ್ಸು […]
ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದು, ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ. ನಾಳೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಸಮಾಧಿಯ ಪಕ್ಕದಲ್ಲಿ ಭಾನುವಾರ ನಟ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಗುವುದು. ವಿದೇಶದಿಂದ ಮಗಳು ದೃತಿ ಬಂದ ಬಳಿಕ ನಾಳೆ ಅಂತ್ಯಕ್ರಿಯೆ ನೆರವೇರಲಿದೆ. ಕುಟುಂಬದವರು ಮತ್ತು ಸರ್ಕಾರದ […]
ಭಾರತೀಯ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಪತ್ನಿ ಹಾಗೂ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ದಂಪತಿ ಸಂಭ್ರಮಿಸಿದ್ದಾರೆ. ಮಕ್ಕಳಿಗೆ ಕಬೀರ್ ಪಲ್ಲಿಕಲ್ ಕಾರ್ತಿಕ್ ಹಾಗೂ ಜಿಯಾನ್ ಪಲ್ಲಿಕಲ್ ಕಾರ್ತಿಕ್ ಎಂದು ಹೆಸರಿಡಲಾಗಿದೆ.ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ನಲ್ಲಿ ವೀಕ್ಷಕ ವಿವರಣೆಕಾರನಾಗಿ ಯುಎಇಗೆ ತೆರಳಿದ್ದರು. ಇದೀಗ ಮಾಡಿರುವ ಟ್ವಿಟ್ಟರ್ ಪೋಸ್ಟ್ನ ಮೂಲಕ ದಿನೇಶ್ ಕಾರ್ತಿಕ್ ತವರಿಗೆ […]
ಯುರೋ 2020 ಪಂದ್ಯಾವಳಿಯ ಸಮಯದಲ್ಲಿ ಮಾಧ್ಯಮ ಸಂದರ್ಶನದ ವೇಳೆ ಟೇಬಲ್ ಮೇಲೆ ಇರಿಸಲಾಗಿದ್ದ ಕೋಕಾ ಕೋಲಾ ಬಾಟಲಿಗಳನ್ನು ರೊನಾಲ್ಡೋ ಪಕ್ಕಕ್ಕೆ ಎತ್ತಿಟ್ಟಿದ್ದರು. ಇದು ವಿಶ್ವ ಮಟ್ಟದಲ್ಲಿ ಬಹಳ ಚರ್ಚೆಗೂ ಕೂಡಾ ಗ್ರಾಸವಾಗಿತ್ತು.ಇದೀಗ ಹಂತದ್ದೆ ಘಟನೆಯನ್ನ ಡೆವಿಡ್ ವಾರ್ನರ್ ಮರುಸೃಷ್ಟಸಿದ್ದಾರೆ. ಶ್ರೀಲಂಕಾ ವಿರುದ್ಧ ಗೆಲುವನ್ನು ದಾಖಲಿಸಿದ ಬಳಿಕ ವಾರ್ನರ್ ಪತ್ರಕರ್ತರ ಜೊತೆ ಮಾತನಾಡಲು ಆಗಮಿಸಿದ್ದರು. ಅಲ್ಲಿದ್ದ ಕೋಕ್ ಬಾಟಲಿಗಳನ್ನು ನೋಡಿದ ವಾರ್ನರ್ ಸಿಬ್ಬಂದಿಯ ಬಳಿ ನಾನು ಇದನ್ನು ತೆಗೆಯಬಹುದೇ..? ಎಂದು ಕೇಳಿದ್ದಾರೆ. […]
ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯನ್ನು ಚೆನ್ನೈನ ಖ್ಯಾತ ನಿರ್ಮಾಪಕ, ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ.ಐಸಿರಿ ಕೆ. ಗಣೇಶ್ ಖರೀದಿಸಿದ್ದಾರೆ.ಇನ್ನು ಮುಂದೆ ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿ ಎಂದು ಕರೆಯಲಾಗುವುದು ಎಂದು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಶೀರ್ , ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಗಣೇಶ್ ಈ ಜಾಗವನ್ನು ಖರೀದಿಸಿದ್ದು , […]
ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು 1 ಸಾವಿರ ಪರದೆಗಳಲ್ಲಿ ಬಿಡುಗಡೆಯಾಗಿದ್ದು, ಮುಂಜಾನೆ 5 ಗಂಟೆಯಿಂದಲೇ ಫ್ಯಾನ್ ಶೋ ಆರಂಭವಾಗಿದೆ. ಚಿತ್ರ ಮಂದಿರಗಳು ಹೌಸ್ ಫುಲ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೊಡ್ಮನೆ ಅಭಿಮಾನಿಗಳ ಅದ್ದೂರಿಯಿಂದ ಭಜರಂಗಿ-2 ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಗೌಡನಪಾಳ್ಯದ ಶ್ರೀನಿವಾಸ ಹಾಗೂ ಜೆಪಿ ನಗರದ ಸಿದ್ದೇಶ್ವರ ಚಿತ್ರ ಮಂದಿರದಲ್ಲಿ ಶೋ ಆರಂಭವಾಗಿದ್ದು, ಶಿವರಾಜ್ […]
ಪೈರಸಿ ಮಾಡಲು ಯತ್ನಿಸುವವರ ಮೇಲೆ ಕಣ್ಣಿಡುತ್ತೇವೆ. ಬಿಡುವುದಿಲ್ಲ, ಶಿಕ್ಷೆ ಆಗುತ್ತದೆ ಸಿನಿಮಾ ತಯಾರಕರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಗುರುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ 1964 ರ ನಂತರ 2014 ರಲ್ಲಿ ನಿಯಮಾವಳಿ ರೂಪಿಸಿತ್ತು. ಇದಕ್ಕೀಗ ತಿದ್ದುಪಡಿ ತರುವ ಪ್ರಸ್ತಾವನೆ ಇದೆ ಎಂದು ತಿಳಿಸಿದರು.ಪೈರಸಿ ಇತ್ತೀಚಿನ ಪಿಡುಗು. ಕೋಟಿಗಟ್ಟಲೆ ಹಣ ಸುರಿದು ತಯಾರಿಸಿದ ಸಿನಿಮಾವನ್ನ ಕ್ಷಣಾರ್ಧದಲ್ಲಿ ಮಾಡಿ, ಶ್ರಮ, ಹಣ […]