ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ‘ನಾಟು…ನಾಟು…’ ಹಾಡು ಅತ್ಯುತ್ತಮ ಮೂಲ ಗೀತೆ (ಒರಿಜನಲ್) ವರ್ಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದೆ.ಈಗ 95ನೇ ಅಕಾಡೆಮಿ ಅವಾರ್ಡ್ಸ್‌ ವೇದಿಕೆಯಲ್ಲಿ ಚಿತ್ರದ ಜನಪ್ರಿಯ ‘ನಾಟು…ನಾಟು…’ ಹಾಡು ಲೈವ್ ಆಗಿ ಪ್ರದರ್ಶನವಾಗಲಿದೆ ಎಂದು ವರದಿಯಾಗಿದೆ.ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಪ್ರಕಟಗೊಳ್ಳಲಿದೆ. ಅಂದು ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವ ಈ ಹಾಡನ್ನು ಹಾಡಲಿದ್ದಾರೆ ಎಂದು ‘ದಿ ಅಕಾಡೆಮಿ’ ತಿಳಿಸಿದೆ.ನಾಟು ನಾಟು ಹಾಡು […]

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗೋ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮನೆಯಲ್ಲಿರೋ ಮಹಿಳೆಯರಿಗೆ ಸಮಯ ಕಳೆಯಲು ಇದು ಒಳ್ಳೆ ಮನರಂಜನಾ ಕಾರ್ಯಕ್ರಮವಾಗಿದೆ.ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜನಪ್ರಿಯವಾಗಲು ಶಾಲಿನಿ ಅವರು ಕೂಡ ಕಾರಣ ಎಂದೇ ಹೇಳಬಹುದು. ಇವರು ಹಾಕುವ ಬ್ಲೌಸ್ ಡಿಸೈನ್ ಎಲ್ಲರನ್ನೂ ಸೆಳೆಯುತ್ತದೆ.ಈ ಬಾರಿ ಶಾಲಿನಿ ಅವರು ಗಿಣಿ ಇರುವ ಬ್ಲೌಸ್ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನು ರಂಗಸ್ತ್ರೀ ಎಂಬ […]

ಕಳೆದ ಜನವರಿ 26ರಂದು ಗಣ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಇಂದು ( ಮಾರ್ಚ್ 1 ) 35 ದಿನಗಳನ್ನು ಪೂರೈಸಿದೆ. ಬಿಡುಗಡೆಯ ದಿನ 12 ಕೋಟಿ ಗಳಿಸುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಚಿತ್ರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇನ್ನು ಸಾಮಾನ್ಯ ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ದರ್ಶನ್ ಸ್ಟಾರ್‌ಡಂನಿಂದಾಗಿ ಸೇಫ್ ಆಗಿದೆ. ಯಜಮಾನ ಚಿತ್ರದ ಮೂಲಕ […]

‘ಎಕ್ಸ್‌ಕ್ಯೂಸ್ ಮೀ’ ಸಿನಿಮಾ ಇಂದಿಗೂ ಅದೆಷ್ಟೋ ಮಂದಿಯ ಫೇವರಿಟ್. ಅದರಲ್ಲೂ ಸುನಿಲ್ ರಾವ್ ನಟನೆ ಮೆಚ್ಚಿಕೊಂಡವರೇನು ಕಮ್ಮಿಯಿಲ್ಲ. ಅಲ್ಲದೆ ಸುನೀಲ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ ಕೂಡ ಇದೇನೆ. ಇಲ್ಲಿಂದ ಒಂದರ ಹಿಂದೊಂದು ಸಿನಿಮಾಗಳಲ್ಲಿ ಸುನೀಲ್ ರಾವ್ ಕಾಣಿಸಿಕೊಂಡಿದ್ದರು. ಆದರೆ, ಕೆಲವು ಸಿನಿಮಾಗಳು ಇವರ ಕೈ ಹಿಡಿಯಲಿಲ್ಲ. ಹೀಗಾಗಿ ನಟನೆಯಿಂದ ಸ್ವಲ್ಪ ಸಮಯ ದೂರಾನೇ ಉಳಿದುಬಿಟ್ಟಿದ್ದರು. ಇತ್ತೀಚೆಗಷ್ಟೇ ಸುನೀಲ್ ರಾವ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೆಸಿಸಿ, ಸಿನಿಮಾ […]

 ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.ನಟಿ ಅದಿತಿ ರಾವ್​ ಹೈದರಿ  ಅವರು ಬಹುಬೇಡಿಕೆಯ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಮಾತ್ರವಲ್ಲದೇ ಅವರು ದಕ್ಷಿಣ ಭಾರತದಲ್ಲೂ ಫೇಮಸ್​ ಆಗಿದ್ದಾರೆ. ಸಿನಿಮಾಗಳ ಜೊತೆಗೆ ವೆಬ್​ ಸಿರೀಸ್​ನಲ್ಲಿ ನಟಿಸುವ ಮೂಲಕವೂ ಅವರು ಜನಪ್ರಿಯತೆ ಪಡೆದಿದ್ದಾರೆ. ಸದ್ಯಕ್ಕಂತೂ ಅವರ ವೃತ್ತಿಜೀವನ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈ […]

ಬೆಂಗಳೂರು:ಡಿ ಬಾಸ್ ದರ್ಶನ್ ಬಗ್ಗೆ ಏನಾದ್ರೂ ನ್ಯೂಸ್ ಸಿಗುತ್ತಾ ಅಂತ ಅವರ ಫ್ಯಾನ್ಸ್ ಕಾಯುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಡಿ ಬಾಸ್ ಗೆಳೆಯರ ಜೊತೆ ಕ್ರಿಕೆಟ್ ಆಡೋದನ್ನ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದರು. ಈಗ ಸಿಗ್ತಾ ಇರೋ ಮ್ಯಾಟರ್ ಏನಪ್ಪಾ ಅಂದ್ರೆ ಡಿ ಬಾಸ್ ಈಗ ಕಂಪ್ಲೀಟ್ ಡಯಟ್ ನಲ್ಲಿ ಇದ್ದಾರಂತೆ.ವಾಸ್ತವವಾಗಿ ತಮ್ಮ ಮುಂದಿನ ಸಿನಿಮಾಗಾಗಿ ದೇಹದ ತೂಕ ಕಂಪ್ಲೀಟ್ ಆಗಿ ಇಳಿಸಿ ಯಂಗ್ ಆಂಡ್ ಎನರ್ಜಿಟಿಕ್ ಕಾಣಿಸಲು ಸಕಲ […]

ಚಿತ್ರರಂಗಗಳಲ್ಲಿ ಸ್ಟಾರ್ ನಟರ ನಡುವೆ ಹೇಗೆ ಪೈಪೋಟಿ ಇರುತ್ತೋ, ಅದೇ ರೀತಿ ರ‍್ಯಾಪ್ ದುನಿಯಾದಲ್ಲಿಯೂ ಸಹ ರ‍್ಯಾಪರ್‌ಗಳ ನಡುವೆ ಪೈಪೋಟಿ ಇರುತ್ತೆ. ಒಬ್ಬ ಸಿಂಗರ್ ಕುರಿತು ಮತ್ತೊಬ್ಬ ಸಿಂಗರ್ ತನ್ನ ಹಾಡಿನ ಸಾಲುಗಳ ಮುನ್ನವೇ ಗುನ್ನಾ ಇಡುವುದು ಕಾಮನ್. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕನ್ನಡದ ರ‍್ಯಾಪ್ ಹಾಡು ನಂಗನ್ಸಿದ್ದು. ಹೌದು, 2018ರ ಫೆಬ್ರವರಿ ಒಂದರಂದು ನಂಗನ್ಸಿದ್ದು ಎಂಬ ರ‍್ಯಾಪ್ ಹಾಡು ಬಿಡುಗಡೆಯಾಗಿತ್ತು. ರ‍್ಯಾಪರ್ ರಾಹುಲ್ ಡಿಟ್ಟೋ ಈ ಹಾಡಿನ […]

ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಫೆ. 24 ಮತ್ತು 25ರಂದು ಕೆಸಿಸಿ 2023ರ ಮೂರನೇ ಆವೃತ್ತಿ ಕ್ರಿಕೆಟ್ ಟೂರ್ನಿಮೆಂಟ್ ಅದ್ಧೂರಿಯಾಗಿ ನಡೆದಿದೆ.ಮೋಹಕ ತಾರೆ ರಮ್ಯಾ ಜೊತೆ ನಟಿ ಮಿಲನಾ ನಾಗರಾಜ್ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋ ಎಲ್ಲೆಡೆ ವೈರಲ್ ಆಗಿದೆ.ಭಾರತೀಯ ಕ್ರಿಕೆಟರ್ ಸುರೇಶ್ ರೈನಾ ಜೊತೆ ಡಾರ್ಲಿಂಗ್ ಕೃಷ ಮತ್ತು ನಟಿ ಮಿಲನಾ ನಾಗರಾಜ್ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.ಈ ಪಂದ್ಯವಾಳಿಯಲ್ಲಿ ನಟ ಡಾಲಿ ಧನಂಜಯ್, ಮಿಲನಾ […]

  ನಟ ಪ್ರಭಾಸ್ ಅವರು ಈಗಾಗಲೇ ‘ಆದಿಪುರುಷ್‌’ ಸಿನಿಮಾದಲ್ಲಿ ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು, ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡರೆ, ನಟಿ ಕೃತಿ ಸನೋನ್ ಅವರು ಸೀತೆಯಾಗಿ ನಟಿಸಿದ್ದಾರೆ. ಇದೀಗ ಶ್ರೀರಾಮನ ಪಾತ್ರದ ನಂತರ ನಟ ಪ್ರಭಾಸ್ ಅವರು ವಿಷ್ಣುವಿನ ಅವತಾರದಲ್ಲಿ ಮಿಂಚಲಿದ್ದಾರೆ. ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನೆಂದರೆ, ಪ್ರಭಾಸ್‌ಗೆ ವಿಷ್ಣುವಿನ ಅವತಾರವಿದ್ದರೂ, ಅದು ಪುರಾಣದ ವಿಷ್ಣುವಿನ ಅವತಾರವಲ್ಲ. ಬದಲಿಗೆ ಅಧುನಿಕ ವಿಷ್ಣುವಿನ ಅವತಾರವಂತೆ!’ಪ್ರಾಜೆಕ್ಟ್ […]

ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ `ಆಚಾರ್ಯ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸಾಕಷ್ಟು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾದ ಆಚಾರ್ಯ ಸಿನಿಮಾಗಾಗಿ 20 ಕೋಟಿ ವೆಚ್ಚದ ಸೆಟ್‌ನ್ನ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಈ ಸೆಟ್ ಬೆಂಕಿಗಾಹುತಿ ಆಗಿದೆ. ಕೊರಟಾಲ ಶಿವ ನಿರ್ದೇಶನದ `ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಚಿರಂಜೀವಿ ಅವರ ಖಾಸಗಿ ಜಾಗದಲ್ಲಿ […]

Advertisement

Wordpress Social Share Plugin powered by Ultimatelysocial