ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ರಾಷ್ಟ್ರೀಯ ಕ್ರೀಕೆಟ್ ಆಟಗಾರ ಡಾ. ಚಂದು ಲಮಾಣಿ ಅವರು ಸಾವನಪ್ಪಿರುವ ಘಟನೆ ನಡೆದಿದೆ.  ಹರದಗಟ್ಟಿ ಗ್ರಾಮದಲ್ಲಿ ಹುಟ್ಟಿದ ಚಂದು ಲಮಾಣಿ ಧಾರವಾಡ ವಿಶ್ವವಿದ್ಯಾಲಯದಲ್ಲಿ B.P.ED ಹಾಗೂ .M.P.ED ಮೂಗಿಸಿ PhD ಡಾಕ್ಟರೇಟ್ ಮುಸಿದ ಚಂದು ಲಮಾಣಿ ಗೋವಾ ರಾಜ್ಯದ ಕ್ರೀಡಾ ನಿರ್ಧೆಶಕರಾಗಿ ನೇಮಕವಾಗಿ. ಸುಮಾರು ವರ್ಷಗಳಿಂದ ಗೋವಾ ರಾಜ್ಯದಲ್ಲಿ ಸೇವೆಸಲ್ಲಿಸುತ್ತಿದ್ದರು.ವಿಧಿಯ ಆಟಕ್ಕೆ ಚಂದು ಲಮಾಣಿ ಅವರು ದಿನಾಂಕ 29/ 10/2021 ರಂದು ಗೋವಾ ರಾಜ್ಯದಲ್ಲಿ […]

ಯುರೋ 2020 ಪಂದ್ಯಾವಳಿಯ ಸಮಯದಲ್ಲಿ ಮಾಧ್ಯಮ ಸಂದರ್ಶನದ ವೇಳೆ ಟೇಬಲ್​ ಮೇಲೆ ಇರಿಸಲಾಗಿದ್ದ ಕೋಕಾ ಕೋಲಾ ಬಾಟಲಿಗಳನ್ನು ರೊನಾಲ್ಡೋ ಪಕ್ಕಕ್ಕೆ ಎತ್ತಿಟ್ಟಿದ್ದರು. ಇದು ವಿಶ್ವ ಮಟ್ಟದಲ್ಲಿ ಬಹಳ ಚರ್ಚೆಗೂ ಕೂಡಾ ಗ್ರಾಸವಾಗಿತ್ತು.ಇದೀಗ ಹಂತದ್ದೆ ಘಟನೆಯನ್ನ ಡೆವಿಡ್‌ ವಾರ್ನರ್ ಮರುಸೃಷ್ಟಸಿದ್ದಾರೆ. ಶ್ರೀಲಂಕಾ ವಿರುದ್ಧ ಗೆಲುವನ್ನು ದಾಖಲಿಸಿದ ಬಳಿಕ ವಾರ್ನರ್​ ಪತ್ರಕರ್ತರ ಜೊತೆ ಮಾತನಾಡಲು ಆಗಮಿಸಿದ್ದರು. ಅಲ್ಲಿದ್ದ ಕೋಕ್​ ಬಾಟಲಿಗಳನ್ನು ನೋಡಿದ ವಾರ್ನರ್​ ಸಿಬ್ಬಂದಿಯ ಬಳಿ ನಾನು ಇದನ್ನು ತೆಗೆಯಬಹುದೇ..? ಎಂದು ಕೇಳಿದ್ದಾರೆ. […]

ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮತ್ತು ನಮೀಬಿಯ ನಡುವೆ ನಡೆದ ಪಂದ್ಯವನ್ನು ನಮೀಬಿಯ ಗೆದ್ದುಕೊಂಡಿದೆ.ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 20 ಓವರ್ ನಷ್ಟಕ್ಕೆ 8 ವಿಕೆಟ್ ಕಳೆದುಕೊಂಡು 109 ರನ್ ಗಳಸಲಷ್ಟೇ ಶಕ್ತವಾಯಿತು.ನಂತರ ಬ್ಯಾಟಿಂಗ್ ನಡೆಸಿದ ನಮೀಬಿಯ ತಂಡ 19.1 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಮುಟ್ಟಿದರು. ಗೆಲ್ಲಲು ಒಂದು ರನ್ ಅಗತ್ಯ ವಿದ್ದಾಗ ಜೊನಾಥನ್ ಸ್ಮಿತ್ ಸಿಕ್ಸ್ ಬಾರಿಸಿ ತಂಡದ ರನ್ ಗಳಿಕೆಯನ್ನು […]

ಮುಗದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, ಪವರ್ ಪ್ಲೇ ಹಂತದಲ್ಲಿ ನಾವು ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ನಾವು ಯಾರನ್ನಾದರೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ವಿಶೇಷವಾಗಿ, ಪಾಕಿಸ್ತಾನದಂತಹ ತಂಡವು ಪ್ರಪಂಚದ ಯಾವ ತಂಡವನ್ನಾದರೂ ಸೋಲಿಸಬಹುದು ಎಂದು ಹೇಳಿದ್ದರು.ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಜಯ್ ಜಡೇಜಾ, ಪಾಕಿಸ್ತಾನ ವಿರುದ್ಧದ ಪಂದ್ಯ ಸೋತ ಬಳಿಕ ವಿರಾಟ್‌ ಕೊಹ್ಲಿ ಹೇಳಿಕೆಯನ್ನು ಕೇಳಿದ್ದೇನೆ. ಇದರಿಂದ ನನಗೆ ಬೇಸರ ತರಿಸಿದೆ. ಏಕೆಂದರೆ 2 ವಿಕೆಟ್‌ […]

  ಭಾರತದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ 11 ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರ ಸೇರಿದಂತೆ 11 ಕ್ರೀಡಾಪಟುಗಳ ಹೆಸರು ಈ ಪಟ್ಟಿಯಲ್ಲಿದೆ. ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾರತದ ಹಿರಿಯ ಕ್ರಿಕೆಟ್ ಆಟಗಾರ್ತಿ […]

ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗೆ ಗುರಿಯಾಗಿರುವ ಟೀಮ್ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ  ಬೆಂಬಲವನ್ನ  ವ್ಯಕ್ತಪಡಿಸಿದೆ.ಟಿ-20 ವಿಶ್ವಕಪ್‌ನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಬಳಗದ ವಿರುದ್ಧ ಅಭಿಮಾನಿಗಳು ಆನ್‌ಲೈನ್ ದಾಳಿ ನಡೆಸಿದ್ದರು. ಸದ್ಯ ಮೊಹಮ್ಮದ್‌ ಶಮಿ ಬೆಂಬಲಕ್ಕೆ ನಿಂತಿರುವ ಬಿಸಿಸಿಐ, ‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ […]

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯ ದುಬೈನಲ್ಲಿ ನಡೆಯಿತು.‌ ಈ ಪಂದ್ಯದಲ್ಲಿ ಭಾರತವನ್ನ ರೋಹಿತ್ ಶರ್ಮಾ ಮುನ್ನಡೆಸಿದ್ದು, ತಂಡದಲ್ಲಿ ಕೇವಲ ಐದು ಬೌಲರ್‌ ಗಳಿದ್ದರು. 6 ನೇ ಬೌಲರ್ ಆಗಿ ಯಾರು ಕಣಕ್ಕಿಳಿಯಬಹುದೆಂಬ ಕುತೂಹಲ ಇದ್ದು, 7 ನೇ ಓವರ್‌ ವೇಳೆ ರೋಹಿತ್‌ ಶರ್ಮಾ ಅವರು ಬೌಲಿಂಗನ್ನ ವಿರಾಟ್‌ ಕೊಹ್ಲಿ ಅವರಿಗೆ ನೀಡಿ ಅಚ್ಚರಿ ಮೂಡಿಸಿದರು. ಗ್ಲೆನ್‌ ಮ್ಯಾಕ್ಸವೆಲ್‌ ಹಾಗು ಸ್ಟೀವ್‌ ಸ್ಮಿತ್‌ ಅವರಿಗೆ ಬೌಲಿಂಗ್‌ ಮಾಡಿದ […]

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಾಕಿಸ್ಥಾನ ಪ್ರೇರಿತ ಉಗ್ರರು ಮುಗ್ಧ ನಾಗರಿಕರ ಹತ್ಯೆಯಲ್ಲಿ ತೊಡಗಿರುವುದರಿಂದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯವನ್ನು ರದ್ದುಗೊಳಿಸಬೇಕು, ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ಥಾನ ವಿರುದ್ಧ ಆಡಬಾರದು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈ ಪಂದ್ಯ ರದ್ದಾಗದು ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಇದು ಐಸಿಸಿ ಸಂಘಟಿಸುವ ಕೂಟವಾದ್ದರಿಂದ ಪ್ರತಿಯೊಂದು ತಂಡವೂ ನಿರ್ದಿಷ್ಟ ಎದುರಾಳಿ ವಿರುದ್ಧ ಆಡಲೇಬೇಕಾಗುತ್ತದೆ. ಇದನ್ನು ನಿರಾಕರಿಸುವಂತಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ […]

ನವದೆಹಲಿ: ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಗುರಿಯಾಗಿಸಿಕೊಂಡು ನಾಗರಿಕರನ್ನು ಹತ್ಯೆ ಮಾಡಿದ ನಂತರ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಮುಂಬರುವ ಟಿ 20 ವಿಶ್ವಕಪ್ 2021 ಪಂದ್ಯವನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಆಡಬಾರದು ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿರಾಜ್ ಸಿಂಗ್, “ಭಯೋತ್ಪಾದನೆಯ ಮುಖವನ್ನು ಈಗ ಸ್ಪಷ್ಟಪಡಿಸಲಾಗುವುದು.ಮುಂಬರುವ ದಿನಗಳಲ್ಲಿ, […]

ಇಂದು  ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬ್ರೇಕ್‌ ಹಾಕಲು ಕೋಲ್ಕತ್ತ ನೈಟ್ ರೈಡರ್ಸ್ ಬಳಗವಿದೆ. ಸೋಮವಾರ ನಡೆದ ಎಲಿಮಿನೇಟರ್‌ನಲ್ಲಿ ಸುನೀಲ್ ನಾರಾಯಣ್ ಆಲ್‌ರೌಂಡ್ ಆಟದ ಪ್ರದರ್ಶನದಿಂದ ಕೋಲ್ಕತ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಗಳಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಆಟಗಾರರಾದ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಉತ್ತಮ […]

Advertisement

Wordpress Social Share Plugin powered by Ultimatelysocial