ಆಗ ತಾನೇ ಜನಿಸಿದ ಮಗುವೊಂದನ್ನು ಆಸ್ಪತ್ರೆಯಿಂದ ಅಪಹರಿಸಿದ ಮಹಿಳೆಯೊಬ್ಬಳನ್ನು ತಮಿಳು ನಾಡಿನ ತಂಜಾವೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 5ರಂದು ರಾಜಲಕ್ಷ್ಮಿ ಎಂಬಾಕೆ ಹೆಣ್ಣು ಮಗವಿಗೆ ಜನ್ಮ ನೀಡಿದ್ದಾರೆ. ಹೆತ್ತವರ ವಿರೋಧದ ನಡುವೆ ಮದುವೆ ಮಾಡಿಕೊಂಡ ಗುಣಶೇಖರನ್ ಹಾಗೂ ರಾಜಲಕ್ಷ್ಮಿಗೆ ಮಗುವಿನ ಹೆರಿಗೆಯಾದ ವೇಳೆ ಆಸ್ಪತ್ರೆಯಲ್ಲಿ ನೋಡಲು ಯಾರೊಬ್ಬರೂ ಇರಲಿಲ್ಲ.ತಾನೂ ಸಹ ಗರ್ಭಿಣಿಯಾದ ಕಾರಣ ಆಸ್ಪತ್ರೆಗೆ ಚೆಕಪ್ಗಾಗಿ ಹೋಗಿದ್ದ ವಿಜಿ ಎಂಬಾಕೆ ರಾಜಲಕ್ಷ್ಮಿ ದಂಪತಿಗೆ ಕೆಲವೊಂದು ಸಹಾಯಗಳನ್ನೂ ಮಾಡಿದ್ದಳು. ಶನಿವಾರ ಬೆಳಿಗ್ಗೆ […]
Speed News Special
ಬೆಂಗಳೂರು, ಅಕ್ಟೋಬರ್ 10; ವಿಧಾನ ಪರಿಷತ್ ಚುನಾವಣೆಗೆ ಕರ್ನಾಟಕ ಬಿಜೆಪಿ ಸಿದ್ಧತೆ ಆರಂಭಿಸಿದೆ. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳು ಸೇರಿ ಒಟ್ಟು 25 ಸ್ಥಾನಗಳಿಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಪರಿಷತ್ಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಕರ್ನಾಟಕ ಬಿಜೆಪಿ ವಿಧಾನ ಪರಿಷತ್ ಚುನಾವಣೆಗೆ ಅಭಿಪ್ರಾಯ ಸಂಗ್ರಹ ಪ್ರಮುಖರ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಪಕ್ಷ ರಚಿಸಿದ ಸಮಿತಿಯ ಮುಖಂಡರು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ […]
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ , ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಗಣಿ ಮತ್ತು ಭೂವಿಜ್ಞಾನ […]
ಸ್ಯಾಂಡಲ್ ವುಡ್ ನಲ್ಲಿ ಇದೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ನಡುವೆ ಹೊಚ್ಚ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಅದ್ರರಲ್ಲೂ ಹೊಸಬರ ತಂಡವೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.ಯುವ ಪ್ರತಿಭೆ ಶ್ರೀಧರ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಹೊಚ್ಚ ಹೊಸ ಸಿನಿಮಾ ‘ಟೆನೆಂಟ್’. ಟೈಟಲ್ ಹಾಗೂ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿರುವ ಚಿತ್ರತಂಡ ಮುಂದಿನ ವಾರದಿಂದ ಚಿತ್ರೀಕರಣ ಆರಂಭಿಸಲಿದೆ. ಅನ್ ಲಾಕ್ ಕಿರುಚಿತ್ರದ ಮೂಲಕ […]
ಶಿವಮೊಗ್ಗ: ದಸರಾ ಅಂಗವಾಗಿ ಇಲ್ಲಿನ ಮಲವಗೊಪ್ಪದಲ್ಲಿ ಭಾನುವಾರ ನಡೆದ ರೈತ ದಸರಾದಲ್ಲಿ ಕೆಸರ ಗದ್ದೆ ಓಟ, ಹಗ್ಗ ಜಗ್ಗಾಟ ಸ್ಪರ್ಧೆಗಳು ಗಮನ ಸೆಳೆದವು. ಕೆಸರು ಗದ್ದೆಯಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದ ತಂಡಗಳು ಗೆಲುವಿಗಾಗಿ ನಡೆಸಿದ ಸೆಣಸಾಟ ಪ್ರೇಕ್ಷಕರ ಮನರಂಜಿಸಿತು. 10 ವರ್ಷ ಮೇಲ್ಪಟ್ಟ ಬಾಲಕರಿಗೆ, 18 ವರ್ಷ ಮೇಲ್ಪಟ್ಟ ಸ್ಪರ್ಧೆ ನಡೆದಿದೆ. ಮಹ್ಮದ್ ಅಸ್ಲಾಂ, ತರುಣ್, ಲಕ್ಷ್ಮಣ್, ರೋಹಿತ್, ಲೋಹಿತ್ ಅರುಣ್ 10 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ಗೆದ್ದರು. 18 ವರ್ಷ ಮೇಲ್ಪಟ್ಟ […]
ನವದೆಹಲಿ: ಚೀನಾದೊಂದಿಗಿನ 13 ನೇ ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಪೂರ್ವ ಲಡಾಖ್ನ ಉಳಿದ ಘರ್ಷಣೆ ಸ್ಥಳಗಳಲ್ಲಿ ಸೈನಿಕರನ್ನು ಬೇಗನೆ ಬೇರ್ಪಡಿಸುವಂತೆ ಭಾರತ ಭಾನುವಾರ ಒತ್ತಾಯಿಸಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಕಾರ್ಪ್ಸ್ ಕಮಾಂಡರ್-ಮಟ್ಟದ ಮಾತುಕತೆಯ ಪ್ರಮುಖ ಗಮನವು ಪೆಟ್ರೋಲಿಂಗ್ ಪಾಯಿಂಟ್ 15 ರಲ್ಲಿ ಸ್ಥಗಿತಗೊಂಡ ನಿರ್ಲಿಪ್ತತೆಯನ್ನು ಪೂರ್ಣಗೊಳಿಸುವುದು ಎಂದು ತಿಳಿದುಬಂದಿದೆ. ಪೂರ್ವ ಲಡಾಖ್ನ ಚುಶುಲ್-ಮೊಲ್ಡೊ ಗಡಿ ಬಿಂದುವಿನ ಚೀನಾದ ಭಾಗದಲ್ಲಿ ನಡೆದ ಮಾತುಕತೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲ.ಮಾತುಕತೆಗಳು, […]
ತೈಪೆ: ‘ಚೀನಾದ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ದ್ವೀಪರಾಷ್ಟ್ರದ ತೈವಾನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲಾಗುವುದು’ ಎಂದು ತೈವಾನ್ ಭಾನುವಾರ ಹೇಳಿದೆ. ‘ತೈವಾನ್ ದೇಶದ ಭಾಗವಾಗಿದ್ದು, ಬಲಪ್ರಯೋಗ ಮಾಡಿಯಾದರೂ ಅದನ್ನು ವಶಕ್ಕೆ ಪಡೆಯುತ್ತೇವೆ’ ಎಂಬ ಚೀನಾದ ಪ್ರತಿಪಾದನೆಗೆ ಈ ಮೂಲಕ ಭಾನುವಾರ ತಿರುಗೇಟು ನೀಡಿದೆ. ‘ತೈವಾನ್ನ ರಾಷ್ಟ್ರೀಯ ದಿನ’ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷೆ ಸೈ ಇಂಗ್ ವೆನ್, ‘ನಾವು ಸಾಧನೆ ಮಾಡಿದಷ್ಟೂ ಚೀನಾದ ಒತ್ತಡ ಹೆಚ್ಚಲಿದೆ. ಚೀನಾದ ಮಾರ್ಗದಲ್ಲಿಯೇ ಸಾಗಬೇಕು ಎಂದು ನಮ್ಮ ಮೇಲೆ […]
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಮೂಡಿಬರಲಿದೆ. ಹಲವು ಕ್ಷೇತ್ರಗಳ ಸಾಧಕರನ್ನು ವೇದಕೆ ಕರೆತಂದು ಅವರ ಜೀವನಗಾಥೆಯನ್ನು ತೆರೆದಿಡುವ ಈ ಜನಪ್ರಿಯ ಕಾರ್ಯಕ್ರಮ ಎಲ್ಲರ ಅಚ್ಚುಮೆಚ್ಚಿದ್ದಾಗಿದೆ. ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಈ ಕಾರ್ಯಕ್ರಮ ಮತ್ತೆ ಬರಲಿದೆ. ಆದರೆ ಈ ಬಾರಿ ಟಿವಿಯಲ್ಲಿ ಬರಲ್ಲ. ಬದಲಾಗಿ ಜೀ5 ಆಪ್ ನಲ್ಲಿ ಕೊಂಚ ಬದಲಾವಣೆಗೊಳೊಂದಿಗೆ ಮೂಡಿಬರಲಿದೆ. ಸದ್ಯದಲ್ಲೇ ಈ ಬಗ್ಗೆ ಪ್ರಕಟಣೆ […]
ಚಳಿಗಾಲ ಶುರುವಾಗ್ತಿದೆ. ಮದುವೆಯಾದ ಜೋಡಿ ಹನಿಮೂನ್ ಗೆ ಪ್ಲಾನ್ ಮಾಡ್ತಿರುತ್ತಾರೆ. ನೀವೂ ಹನಿಮೂನ್ ಗೆ ಪ್ಲಾನ್ ಮಾಡ್ತಿದ್ದರೆ ಈ ಪ್ರದೇಶಕ್ಕೊಮ್ಮೆ ಹೋಗಿ ಬನ್ನಿ.ಅಕ್ಟೋಬರ್ ನಲ್ಲಿ ಹನಿಮೂನ್ ಗೆ ಹೋಗಲು ಯೋಜಿಸುತ್ತಿದ್ದರೆ, ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಮಾರಿಷಸ್ ಗೆ ಹೋಗಬಹುದು. ಮಾರಿಷಸ್ ನ ಸೌಂದರ್ಯ ಮತ್ತು ಅದರ ಭವ್ಯ ವಾತಾವರಣ, ಬಹುತೇಕ ಪ್ರವಾಸಿಗರನ್ನು ಸೆಳೆಯುತ್ತದೆ. ಸುತ್ತಲು ಸಮುದ್ರದಿಂದ ಆವೃತವಾಗಿರುವ ಈ ಪ್ರದೇಶ ಸಂಗಾತಿಯೊಂದಿಗೆ ಇರಲು ತುಂಬಾ ವಿಶೇಷವಾಗಿರುತ್ತದೆ.ಮಾರಿಷಸ್ ಮಧುಚಂದ್ರಕ್ಕೆ ಹೇಳಿ ಮಾಡಿಸಿದ […]
ಈ ಜ್ಯೂಸ್ ಕುಡಿಯೋದ್ರಿಂದ 15 ದಿನದಲ್ಲಿ ಕೊಬ್ಬು ಮಾಯ ಆರೋಗ್ಯವಂತ ವ್ಯಕ್ತಿಯ ದೇಹದ ಕೊಬ್ಬಿನಂಶ 15 ರಿಂದ 20 ರಷ್ಟು ಇರಬೇಕು. ಜನರು ಮನಸ್ಸಿಗೆ ಬಂದ ಆಹಾರ ಸೇವನೆ ಮಾಡ್ತಾರೆ. ಆದರೆ ಅದನ್ನು ಅರಗಿಸಿಕೊಳ್ಳಲು ಬೇಕಾಗುವಷ್ಟು ಶ್ರಮ ಅಥವಾ ಚಟುವಟಿಕೆ ಮಾಡುವುದಿಲ್ಲ. ಹೀಗಾಗಿ ದೇಹದಲ್ಲಿ ಕೊಬ್ಬು ಉತ್ಪಾದನೆಯಾಗುತ್ತದೆ. ಅತಿಯಾದ ಕೊಬ್ಬು ದೇಹವನ್ನು ಹಾಳುಮಾಡುವುದಲ್ಲದೆ, ಮಧುಮೇಹ, ಹೃದ್ರೋಗದಂತಹ ಅನೇಕ ರೋಗಗಳು ಬರಲು ಪ್ರಮುಖ ಕಾರಣವಾಗುತ್ತದೆ. ಒಮ್ಮೆ ಹೆಚ್ಚಾದ ಕೊಬ್ಬನ್ನು ಕರಗಿಸಲು ಬಹಳ […]