ನವದೆಹಲಿ:ಹೀರೋ ಮೋಟಾರು ಸಂಸ್ಥೆಯು ತನ್ನ ಎಲ್ಲ ಮಾಡೆಲ್ ಗಳ ಅಪ್ ಡೇಟೆಡ್ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಇದೀಗ ಹೀರೋ ಎಕ್ಸ್ಟ್ರೀಂ 160ಆರ್ ಬೈಕಿನ ಸ್ಟೆಲ್ತ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಕಡಿಮೆ ತೂಕದ ಮತ್ತು ಹೆಚ್ಚು ವೇಗದ ಬೈಕ್ ಎನ್ನುವ ಕೀರ್ತಿ ಪಡೆದಿರುವ ಎಕ್ಸ್ಟ್ರೀಂ 160ಆರ್ ಬೈಕ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಮ್ಯಾಟ್ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್ ನಲ್ಲಿ ಹೊಸದಾಗಿ ಯುಎಸ್ಬಿ ಚಾರ್ಜರ್ ಅಳವಡಿಸಲಾಗಿದ್ದು, ಎಲ್ ಸಿಡಿ ಡಿಸ್ ಪ್ಲೇ ನಲ್ಲಿ 5 ಬ್ರೈಟ್ ನೆಸ್ ಆಯ್ಕೆಯನ್ನೂ ನೀಡಲಾಗಿದೆ. […]
ತಂತ್ರಜ್ಞಾನ
ಸ್ಮಾರ್ಟ್ಫೋನಿನ ಓವರ ಹಿಟನಿಂದಾಗಿ, ಫೋನಿನ ಬ್ಯಾಟರಿ ಕೂಡ ಸ್ಫೋಟಗೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಫೋನಿನ್ ಕಮ್ಯುನಿಕೇಷನ್ ಯುನಿಟ್ ಮತ್ತು ಕ್ಯಾಮರಾ ಕೂಡ ಫೋನ್ ನ್ನು ಹಿಟ್ ಮಾಡುತ್ತದೆ. ಆದರೆ ಇದು ಬ್ಯಾಟರಿಗಿಂತ ತುಂಬಾ ಕಡಿಮೆ. ನಿಮ್ಮ ಸ್ಮಾರ್ಟ್ ಫೋನ್ ಅನ್ನು ಅಧಿಕ ಬಿಸಿಯಾಗದಂತೆ ಉಳಿಸಲು ಪರಿಗಣಿಸಬೇಕಾದ ಐದು ಸಲಹೆಗಳು ಇಲ್ಲಿವೆ. ಸ್ಮಾರ್ಟ್ಫೋನ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಕರೆ ಮಾಡುವುದು, ಮೇಲ್ ಕಳುಹಿಸುವುದು, ಇಂಟರ್ನೆಟ್ ಬ್ರೌಸ್ ಮಾಡುವುದು ಅಥವಾ ಡಿಜಿಟಲ್ […]
ಕ್ಯಾಲಿಫೋರ್ನಿಯಾದ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ದುರಂತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ವಿಮಾನ ಪತನವಾದ ಬಳಿಕ ಉಂಟಾದ ಬೆಂಕಿಗೆ ಎರಡು ಮನೆಗಳು ಸೇರಿದಂತೆ ಸಾಕಷ್ಟು ವಾಹನಗಳು ಅಗ್ನಿಗೆ ಆಹುತಿಯಾಗಿವೆ.ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳವಾದ ಸ್ಯಾನ್ ಡಿಯಾಗೋದ ಉಪನಗರವಾದ ಸಾಂಟಿಗೆ ಆಗಮಿಸಿದ್ದು, ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಫಾಕ್ಸ್ 5 ಸ್ಯಾನ್ ಡಿಯಾಗೋ ವಿಮಾನವು ಅವಳಿ ಎಂಜಿನ್ ಸೆಸೆನಾ 340ಯಾಗಿದೆ, ಆರು […]
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಬಾಹ್ಯಾಕಾಶ ಕ್ಷೇತ್ರದ ಉದ್ಯಮಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ ದೃಷ್ಟಿಕೋನವನ್ನು ಪ್ರತಿಧ್ವನಿಸುವ ಐ.ಎಸ್.ಪಿ.ಎ. ಭಾರತವನ್ನು ಸ್ವಾವಲಂಬಿ, ತಾಂತ್ರಿಕವಾಗಿ ಮುಂದುವರಿದ ಹಾಗೂ ಬಾಹ್ಯಾಕಾಶ ರಂಗದಲ್ಲಿ ಪ್ರಮುಖ ಪ್ಲೇಯರ್ ಆಗಿ ಮಾಡಲು ಸಹಾಯ ಮಾಡುತ್ತದೆ ಎಂದು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ. […]
ಬೆಂಗಳೂರು,ಅ.8- ಕಸ್ತೂರಿನಗರದಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಆಯುಷಾ ಬೇಗ್ ಅವರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಿರ್ಜಾ ಅಕ್ಸರ್ ಅಲಿ ಬೇಗ್ ಎಂಬುವರನ್ನು ಪೊಲೀಸರು ವಿಚಾರಣೆಗೆ ಕರೆತಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 2012ರಲ್ಲಿ ಬೆನಗಾನಹಳ್ಳಿ ವಾರ್ಡ್ನ ಡಾಕ್ಟರ್ ಲೇಔಟ್ 2ನೇ ಅಡ್ಡರಸ್ತೆಯಲ್ಲಿನ 40-60 ಸುತ್ತಳತೆಯ ನಿವೇಶನದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲಾಗಿತ್ತು. ಈ ಅಪಾರ್ಟ್ಮೆಂಟ್ನಲ್ಲಿ 8 ಮನೆಗಳಿದ್ದು, ಮೂರು ಕುಟುಂಬಗಳಷ್ಟೇ ವಾಸವಾಗಿದ್ದವು. ಉಳಿದ ಐದು ಮನೆಗಳು ಖಾಲಿ […]
ಸಾರ್ವಜನಿಕರಿಗೆ ಭರ್ಜರಿ ಗುಡ್ ನ್ಯೂಸ್: ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡ್ತಿದೆ RBI ಸದ್ಯ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದ್ರೆ ಆರ್.ಬಿ.ಐ. ಈ ಸಮಸ್ಯೆ ದೂರ ಮಾಡಲು ಮಹತ್ವದ ಹೆಜ್ಜೆಯಿಟ್ಟಿದೆ. ಆಫ್ಲೈನ್ ಮೋಡ್ ನಲ್ಲಿ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಶೀಘ್ರದಲ್ಲಿಯೇ ಆಫ್ಲೈನ್ ಪೇಮೆಂಟ್ ತಂತ್ರಜ್ಞಾನ ಇಡೀ ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಆರ್.ಬಿ.ಐ. ಹೇಳಿದೆ. ಇಂಟರ್ನೆಟ್ ಸಂಪರ್ಕ ಕಡಿಮೆಯಿರುವ ಅಥವಾ ಇಂಟರ್ನೆಟ್ […]
ನವದೆಹಲಿ: ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಪ್ರತಿಷ್ಠಿತ ನಿಯತಕಾಲಿಕ ಫೋಬ್ರ್ಸ್ ಪತ್ರಿಕೆಯು ಪ್ರಕಟಿಸಿದ್ದು, ರಿಯಾಲೆನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಅವರು ದೇಶದ ನಂಬರ್ 1 ಶ್ರೀಮಂತರಾಗಿ ಮುಂದುರೆದಿದ್ದಾರೆ. ಕಳೆದ 14 ವರ್ಷದಿಂದಲೂ ಫೋಬ್ರ್ಸ್ ಪಟ್ಟಿಯಲ್ಲಿ ನಂಬರ್ 1 ಶ್ರೀಮಂತರಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ ಕಳೆದ ವರ್ಷದಲ್ಲಿ ತಮ್ಮ ಗಳಿಕೆಯನ್ನು 4 ಬಿಲಿಯನ್ ಡಾಲರ್ಗೆ ಏರಿಸಿಕೊಳ್ಳುವ ಮೂಲಕ ಒಟ್ಟಾರೆ 92.7 ಮಿಲಿಯನ್ ಡಾಲರ್ನ ಒಡೆಯರಾಗಿದ್ದಾರೆ. ಭಾರತದ ಟಾಪ್ 10 ಶ್ರೀಮಂತರ […]
ರಾಷ್ಟ್ರೀಕರಣಗೊಳ್ಳಲು ಮುನ್ನ ಟಾಟಾ ಗ್ರೂಪ್ ನ ಮಾಲೀಕತ್ವದಲಿದ್ದ ಏರ್ ಇಂಡಿಯಾ ಮತ್ತೆ ಖಸಗೀಕರಣಗೊಂಡು ಟಾಟಾ ಮಡಿಲಿಗೆ ಸೇರಲು ಸಜ್ಜಾಗಿದೆ. ಭಾರತದ ಈ ಹೆಮ್ಮೆಯ ಸಂಸ್ಥೆ ಹುಟ್ಟು ಏಳುಬೀಳು ಹೇಗಿತ್ತು.? ಈ ಮಹಾರಾಜನನ್ನು ಕಾರ್ಯರೂಪಕ್ಕೆ ಏನೆಲ್ಲ ಕಷ್ಟ ಅನುಭವಿಸಿದರು.?ಜೊತೆಗೆ ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ತನ್ನ ಮಾಲಿಕತ್ವದಿಂದ ಯಾಕೆ ಮಾರಾಟ ಮಾಡಿದ್ದೇ ಇದರ ಹಿಂದಿನ ಸತ್ಯ ಏನು ಎಂಬುದು ಹೇಳ್ತಿವಿ ಈ ಸ್ಟೋರಿ ನೋಡಿ. ಕಳೆದ ನಾಲ್ಕಾರು ವರ್ಷಗಳಿಂದ ನಷ್ಟದಲಿದ್ದ ಏರ್ […]
ಹಬ್ಬದ ಸೀಸನ್ ಫ್ಲಿಪ್ ಕಾರ್ಟ್ ನ ಕಿರಾಣಿ ವಿತರಣಾ ಪಾಲುದಾರರಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಅತ್ಯದ್ಭುತವಾದ ಅವಕಾಶವನ್ನು ಒದಗಿಸುತ್ತದೆ ಮತ್ತು ಈ ಮೂಲಕ ಅವರ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಸ್ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ತನ್ನ ಕಿರಾಣಿ ಕಾರ್ಯಕ್ರಮವನ್ನು ದಕ್ಷಿಣ ಭಾರತಕ್ಕೂ ವಿಸ್ತರಣೆ ಮಾಡಿದೆ ಹಾಗೂ ಈ ಭಾಗದಲ್ಲಿ 32,000 ಕ್ಕೂ ಅಧಿಕ ಕಿರಾಣಿ ಅಂಗಡಿಗಳನ್ನು ಈ ಉಪಕ್ರಮದ ವ್ಯಾಪ್ತಿಗೆ ತಂದಿದೆ. ಈ […]
ಜನಪ್ರಿಯ ವಾಟ್ಸ್ಆಯಪ್, ಇನ್ಸ್ಟಾಗ್ರಾಂ, ಫೇಸ್ಬುಕ್ ಮೆಸೆಂಜರ್ ಸೇರಿದಂತೆ ಫೇಸ್ಬುಕ್ ಒಡೆತನದ ಸೇವೆಗಳು ನಿನ್ನೆ ಸುಮಾರು 9:22 PM IST ಯಲ್ಲಿ ಅಕ್ಟೋಬರ್ 4 ರಂದು ಜಾಗತಿಕ ಸ್ಥಗಿತವನ್ನು ಎದುರಿಸಿದವು. ಬಳಕೆಯಲ್ಲಿ ವ್ಯತ್ಯಯ ಉಂಟಾಗಿರುವುದನ್ನು ತಿಳಿದ ಜನರು ಸಮಸ್ಯೆ ಬಗ್ಗೆ ಟ್ವಿಟರ್ನಲ್ಲಿ ಕಮೆಂಟ್ ಮಾಡಿದ್ದರು. ಇನ್ನು ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ವಾಟ್ಸ್ಆಯಪ್ ಟ್ವಿಟ್ ಮೂಲಕ ಬಳಕೆದಾರರಿಗೆ ತಾತ್ಕಾಲಿಕ ಸ್ಥಗಿತದ ಬಗ್ಗೆ ಎಚ್ಚರಿಕೆ ನೀಡಿದೆ, ಕಂಪನಿಯು ಸಮಸ್ಯೆಯನ್ನು ಸರಿದೂಗಿಸಲು ಮತ್ತು ಸಾಮಾನ್ಯ ಸ್ಥಿತಿಗೆ […]